41 ಬಾರಿಯ ಚಾಂಪಿಯನ್ ಮುಂಬೈ ತಂಡಕ್ಕೆ ದೊಡ್ಡ ನಷ್ಟ
ಪೃಥ್ವಿ ಶಾ, ಸರ್ಫರಾಜ್ ಖಾನ್, ನಾಯಕ ಅಜಿಂಕ್ಯಾ ರಹಾನೆ ಅವರಂತಹ ಸ್ಟಾರ್ ಆಟಗಾರರನ್ನು ಒಳಗೊಂಡಿದ್ದ ಹೊರತಾಗಿಯೂ ದೆಹಲಿ ವಿರುದ್ಧ ಸೋತಿರುವುದು 41 ಬಾರಿಯ ಚಾಂಪಿಯನ್ ಮುಂಬೈ ತಂಡಕ್ಕೆ ದೊಡ್ಡ ನಷ್ಟವಾಗಿದೆ.
ಟಾಸ್ ಗೆದ್ದ ದೆಹಲಿ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 293 ರನ್ ಗಳಿಸಿ ಸರ್ವಪತನ ಕಂಡಿತು. ಮುಂಬೈನಂತಹ ಬಲಿಷ್ಠ ತಂಡಕ್ಕೆ ಅದು ಸಾಮಾನ್ಯ ಸ್ಕೋರ್ ಆಗಿತ್ತು.
ಸರ್ಫರಾಜ್ ಖಾನ್ 155 ಎಸೆತಗಳಲ್ಲಿ 124 ರನ್
ಇದರ ನಡುವೆಯೂ, ಸರ್ಫರಾಜ್ ಖಾನ್ 155 ಎಸೆತಗಳಲ್ಲಿ 16 ಬೌಂಡರಿ ಮತ್ತು 4 ಸಿಕ್ಸರ್ಗಳನ್ನು ನೆರವಿನಿಂದ 124 ರನ್ ಬಾರಿಸಿ ಮುಂಬೈ ತಂಡ 200ರ ಗಡಿ ದಾಟುವಂತೆ ನೋಡಿಕೊಂಡರು.
ನಂತರ ಬ್ಯಾಟಿಂಗ್ ಮಾಡಿದ ದೆಹಲಿ ತಂಡದ ಪರ ವೈಭವ್ ರಾಹುಲ್ 114 ರನ್ ಗಳಿಸಿದರೆ, ಹಿಮ್ಮತ್ ಸಿಂಗ್ 85 ರನ್ ಬಾರಿಸಿ ಮುಂಬೈಗೆ ಪ್ರತಿರೋಧ ಒಡ್ಡಿದರು. ಇವರು ದೆಹಲಿ ತಂಡದ ಪರ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದವರಾಗಿದ್ದಾರೆ.
ಅಂತಿಮವಾಗಿ ಆತಿಥೇಯ ದೆಹಲಿ ತಂಡ ಮೊದಲ ಇನಿಂಗ್ಸ್ನಲ್ಲಿ 369 ರನ್ ಗಳಿಸಿ, 76 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದರು. ನಂತರ ಮುಂಬೈ ತಂಡ 2ನೇ ಇನ್ನಿಂಗ್ಸ್ನಲ್ಲಿ ಇನ್ನೂ ಕಳಪೆ ಬ್ಯಾಟಿಂಗ್ ಮಾಡಿ, ಕೇವಲ 170 ರನ್ಗಳಿಗೆ ಆಲೌಟ್ ಆಯಿತು.
ಪ್ರಸಕ್ತ ರಣಜಿ ಋತುವಿನ ಮೊದಲ ಗೆಲುವನ್ನು ಪಡೆದುಕೊಂಡ ದೆಹಲಿ
94 ರನ್ಗಳ ಗೆಲುವಿನ ಗುರಿ ಬೆನ್ನತ್ತಿದ ದೆಹಲಿ 8 ವಿಕೆಟ್ಗಳು ಬಾಕಿ ಇರುವಂತೆಯೇ ಬೆನ್ನತ್ತಿ, ಪ್ರಸಕ್ತ ರಣಜಿ ಋತುವಿನ ಮೊದಲ ಗೆಲುವನ್ನು ಪಡೆದುಕೊಂಡಿತು.
ಮುಂಬೈ ನಾಯಕ ಅಜಿಂಕ್ಯಾ ರಹಾನೆಗೆ ಇದು ವ್ಯತಿರಿಕ್ತ ಜನವರಿ ತಿಂಗಳಾಗಿದೆ. ಸರಿಯಾಗಿ ಎರಡು ವರ್ಷಗಳ ಹಿಂದೆ, ಆಸ್ಟ್ರೇಲಿಯಾ ವಿರುದ್ಧ ಗಬ್ಬಾ ಟೆಸ್ಟ್ ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸಿದ ಭಾರತ ತಂಡದ ನಾಯಕರಾಗಿದ್ದರು. ಆದರೆ, ಅದೇ ಎರಡು ವರ್ಷಗಳ ನಂತರ, ತನ್ನ ನಾಯಕತ್ವದಲ್ಲಿ ಮುಂಬೈ 43 ವರ್ಷಗಳ ನಂತರ ಮೊದಲ ಬಾರಿಗೆ ದೆಹಲಿ ತಂಡಕ್ಕೆ ಶರಣಾಗಿರುವುದು ರಹಾನೆಗೆ ಸಿಹಿ-ಕಹಿ ದೊರೆತಿದೆ.