ಮಯಾಂಕ್ ಅಗರ್ವಾಲ್ 86 ಎಸೆತಗಳಲ್ಲಿ 65 ರನ್
ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ 86 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 65 ರನ್ ಗಳಿಸಿ ಅಜೇಯರಾಗುಳಿದರೆ, ರವಿಕುಮಾರ್ ಸಮರ್ಥ್ 74 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 54 ರನ್ ಗಳಿಸಿ, ಎರಡೇ ದಿನದಾಟಕ್ಕೆ ಬ್ಯಾಟಿಂಗ್ ಉಳಿಸಿಕೊಂಡಿದ್ದಾರೆ.
ಉತ್ತರಾಖಂಡ ವಿರುದ್ಧ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿರುವ ಕರ್ನಾಟಕ ತಂಡ, ಒಂದು ವೇಳೆ ಈ ಪಂದ್ಯ ಡ್ರಾನಲ್ಲಿ ಅಂತ್ಯವಾದರೂ, ಸೆಮಿಫೈನಲ್ಗೆ ಅರ್ಹತೆ ಪಡೆಯುವ ಅವಕಾಶವಿದೆ.
ಜಾರ್ಖಂಡ್ ತಂಡವನ್ನು 173 ರನ್ಗಳಿಗೆ ಆಲೌಟ್
ಇನ್ನು ಇತರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ಮತ್ತು ಬಂಗಾಳ ತಂಡಗಳು ಸೆಣಸಾಡುತ್ತಿದ್ದು, ಟಾಸ್ ಗೆದ್ದು ಮೊದಲ ಬೌಲಿಂಗ್ ಆಯ್ದುಕೊಂಡ ಬಂಗಾಳ ತಂಡವು ಜಾರ್ಖಂಡ್ ತಂಡವನ್ನು 173 ರನ್ಗಳಿಗೆ ಆಲೌಟ್ ಮಾಡಿತು.
175 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ ಅಜೇಯ 89 ರನ್ ಗಳಿಸಿದ ಕುಮಾರ್ ಸೂರಜ್ ಬಿಟ್ಟರೆ, ಜಾರ್ಖಂಡ್ ತಂಡದ ಉಳಿದ ಯಾವ ಬ್ಯಾಟ್ಸ್ಮನ್ಗಳು ಪ್ರತಿರೋಧ ತೋರಲಿಲ್ಲ. ಬಂಗಾಳ ಪರ ಬೌಲಿಂಗ್ನಲ್ಲಿ ಆಕಾಶ್ ದೀಪ್ ನಾಲ್ಕು ವಿಕೆಟ್ ಪಡೆದರೆ, ಮುಖೇಶ್ ಕುಮಾರ್ ಮೂರು ವಿಕೆಟ್ ಕಬಳಿಸಿ ಮಿಂಚಿದರು.
ಆಂಧ್ರಪ್ರದೇಶ ಎರಡು ವಿಕೆಟ್ಗಳ ನಷ್ಟಕ್ಕೆ 262 ರನ್
ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ರಿಕಿ ಭುಯಿ ಅವರ ಅಜೇಯ 115 ರನ್ ಮತ್ತು ಕರಣ್ ಶಿಂಧೆ ಅವರ ಅಜೇಯ 83 ರನ್ಗಳ ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ ಆಂಧ್ರಪ್ರದೇಶ ಎರಡು ವಿಕೆಟ್ಗಳ ನಷ್ಟಕ್ಕೆ 262 ರನ್ ಗಳಿಸಿದೆ. ಇವರಿಬ್ಬರು ಮುರಿಯದ ಮೂರನೇ ವಿಕೆಟ್ಗೆ 204 ರನ್ಗಳ ಜೊತೆಯಾಟ ನೀಡಿದ್ದಾರೆ.
ಇನ್ನು ಪಂಜಾಬ್ ಮತ್ತು ಸೌರಾಷ್ಟ್ರ ತಂಡಗಳ ನಡುವಿನ ಮತ್ತೊಂದು ಪಂದ್ಯದಲ್ಲಿ, ಸೌರಾಷ್ಟ್ರ ತಂಡವು 87 ಓವರ್ಗಳಲ್ಲಿ 303 ರನ್ಗಳಿಗೆ ಆಲೌಟ್ ಆಯಿತು. ಪಾರ್ಥ್ ಭಟ್ ಅಜೇಯ 111 ರನ್ ಮತ್ತು ಆರಂಭಿಕ ಬ್ಯಾಟರ್ ಸ್ನೆಲ್ ಪಟೇಲ್ 70 ರನ್ ಬಾರಿಸಿದರು.
ಪಂಜಾಬ್ ಪರ ಮಯಾಂಕ್ ಮಾರ್ಕಂಡೆ 29.2 ಓವರ್ಗಳಲ್ಲಿ 84 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರೆ, ಬಲ್ತೇಜ್ ಸಿಂಗ್ ಮೂರು ವಿಕೆಟ್ ಕಬಳಿಸಿದರು. ದಿನದಾಟದಂತ್ಯಕ್ಕೆ ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಯಾವುದೇ ವಿಕೆಟ್ ನಷ್ಟವಿಲ್ಲದೆ 3 ರನ್ ಗಳಿಸಿದೆ.