ಘಟನೆಯ ಚಿತ್ರಣ
ಅಸಲಿಗೆ ಈ ಘಟನೆಯ ಹಿನ್ನೆಲೆ ಹಿಂದಿ ದಿನ ನಡೆದಿತ್ತು. ಮೊದಲ ದಿನದಾಟದ ವೇಳೆ ಆಲ್ ಫೀಲ್ಡ್ ಅಂಪೈರ್ ಸಿ ಸಂಶುದ್ದೀನ್ಗೆ ಚೆಂಡು ಬಡಿದು ಗಾಯಗೊಂಡಿದ್ದರು. ಹಾಗೆ ಗಾಯಗೊಂಡು ಮೈದಾನದಿಂದ ಹೊರ ನಡೆದಿದ್ದ ಸಂಶುದ್ದೀನ್, ಎರಡನೇ ದಿನದಾಟದ ವೇಳೆ ತನ್ನ ಕರ್ತವ್ಯ ನಿರ್ವಹಿಸಲು ಬರಲಿಲ್ಲ.
ಎರಡೂ ಬದಿಗೂ ಒಬ್ಬನೇ ಅಂಪೈರ್
ಸಿ ಸಂಶುದ್ದೀನ್ ಮೈದಾನಕ್ಕಿಳಿಯದಾಗ ಅನಂತಪದ್ಮನಾಭನ್ ಒಬ್ಬರೇ ಕೆಲಕಾಲ ಎರಡೂ ಬದಿಯಲ್ಲಿ ಅಂಪೈರಿಂದ ಕೆಲಸ ನಿರ್ವಹಿಸಿದ್ದಾರೆ. ಅನಂತರ ಸಂಶುದ್ದೀನ್ ಜಾಗಕ್ಕೆ ಯಶ್ವಂತ್ ಬರ್ದೆ ಅವರು ಬಂದು ಅಂಪೈರಿಂಗ್ ಜವಾಬ್ದಾರಿ ನಿರ್ವಹಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.
ಹೀಗಾದಾಗ ಏನು ಮಾಡಬೇಕು?
ಪಂದ್ಯ ನಡೆಯುತ್ತಿದ್ದಾಗ ಆನ್-ಫೀಲ್ಡ್ ಅಂಪೈರ್ ಗಾಯಗೊಂಡರೆ ಅಥವಾ ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ, ಅಧಿಕಾರಿ ಅಂದರೆ - ಪಂದ್ಯದ ಸಮಯದಲ್ಲಿ ಅಂಪೈರ್ಗಳು/ಮ್ಯಾಚ್ ರೆಫರಿಯ ಸಂಪರ್ಕ ಅಧಿಕಾರಿಯಾಗಿರುವಾತ ಸ್ಕ್ವೇರ್-ಲೆಗ್ ಅಂಪೈರ್ನ ಕರ್ತವ್ಯ ಮಾಡಬೇಕಾಗುತ್ತದೆ. ಆದರೆ ಆತ ಸ್ಥಳೀಯ ಅಂಪೈರ್ ಆಗಿ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಪಂದ್ಯಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರಬೇಕಾಗುತ್ತದೆ.
ಪಂದ್ಯದ ಸಂಕ್ಷಿಪ್ತ ಸ್ಕೋರ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸೌರಾಷ್ಟ್ರ ಮೂರನೇ ದಿನದಾಟದ ವೇಳೆ 171.5ನೇ ಓವರ್ಗೆ ಎಲ್ಲಾ ವಿಕೆಟ್ ಕಳೆದು 425 ರನ್ ಪೇರಿಸಿ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಸೌರಾಷ್ಟ್ರ ಪರ ಅರ್ಪಿತ್ ವಾಸವಾಡ 106, ಅವಿ ಬರೊತ್ 54, ವಿಶ್ವರಾಜ್ ಜಡೇಜಾ 54, ಚೇತೇಶ್ವರ್ ಪೂಜಾರ 66 ರನ್ ಬಾರಿಸಿದ್ದರು.ಬೆಂಗಾಲ್ ಈಗ ಇನ್ನಿಂಗ್ಸ್ ಆಡುತ್ತಿದೆ.