ಶಿವಮೊಗ್ಗ, ಫೆಬ್ರವರಿ 7: ಶಿವಮೊಗ್ಗದ ಕೆಎಸ್ಸಿಎ ನವುಲೆ ಸ್ಟೇಡಿಯಂನಲ್ಲಿ ನಡೆದ ಕರ್ನಾಟಕ vs ಪಂದ್ಯಪ್ರದೇಶ ನಡುವಿನ ರಣಜಿ ಟ್ರೋಫಿ ಎಲೈಟ್ ಗ್ರೂಪ್ 'ಎ' ಮತ್ತು 'ಬಿ' 8ನೇ ಸುತ್ತಿನ ಪಂದ್ಯ ಡ್ರಾದೊಂದಿಗೆ ಅಂತ್ಯ ಕಂಡಿದೆ. ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕದಿಂದ ರವಿಕುಮಾರ್ ಸಮರ್ಥ್ ಮತ್ತು ಮಧ್ಯಪ್ರದೇಶದಿಂದ ಆದಿತ್ಯ ಶ್ರೀವಾತ್ಸವ ಶತಕ ಬಾರಿಸಿ ಪಂದ್ಯ ಡ್ರಾ ಆಗಲು ಕಾರಣರಾದರು (ಚಿತ್ರಕೃಪೆ: ಬಿಸಿಸಿಐ).
ಟೀಮ್ ಇಂಡಿಯಾದ ಮೊದಲ ಸೋಲಿಗೆ ಹೇಳಿಕೆ ನೀಡಿದ ಮಾರ್ಟಿನ್ ಗಪ್ಟಿಲ್
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕರ್ನಾಟಕ ತಂಡದ ಆರಂಭಿಕ ಇನ್ನಿಂಗ್ಸ್ನಲ್ಲಿ ರವಿ ಕುಮಾರ್ ಸಮರ್ಥ್ 108, ಕೃಷ್ಣಮೂರ್ತಿ ಸಿದ್ಧಾರ್ಥ್ 62, ಶ್ರೇಯಸ್ ಗೋಪಾಲ್ 50, ಕೃಷ್ಣಪ್ಪ ಗೌತಮ್ 82 ರನ್ ಕೊಡುಗೆಯೊಂದಿಗೆ 132 ಓವರ್ಗೆ ತಂಡ 426 ರನ್ ಕಲೆ ಹಾಕಿತು.
ಭಾರತ vs ಕೀವಿಸ್: ಗೆಲ್ಲಲೇಬೇಕಾದ ಪಂದ್ಯದಲ್ಲಿ ಯಾರೆಲ್ಲಾ ಕಣಕ್ಕಿಳಿಯಲಿದ್ದಾರೆ?
ಮಧ್ಯ ಪ್ರದೇಶ ತಂಡ, ಯಶ್ ದೂಬೆ 45, ಶುಭಮ್ ಶರ್ಮಾ 25, ಆದಿತ್ಯ ಶ್ರೀವಾತ್ಸವ 192, ವೆಂಕಟೇಶ್ 86 ರನ್ ಬಾರಿಸಿದ್ದರಿಂದ 156.4 ಓವರ್ನಲ್ಲಿ 431 ರನ್ ಗಳಿಸಿತು. ದ್ವಿತೀಯ ಇನ್ನಿಂಗ್ಸ್ನಲ್ಲಿ ಕರ್ನಾಟಕ 15 ಓವರ್ಗೆ 1 ವಿಕೆಟ್ ನಷ್ಟದಲ್ಲಿ 62 ಪೇರಿಸಿತ್ತು. ಪಂದ್ಯ ಡ್ರಾ ಅನ್ನಿಸಿದ್ದರಿಂದ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಮಧ್ಯಪ್ರದೇಶಕ್ಕೆ 3 ಅಂಕ ನೀಡಿ, ಕರ್ನಾಟಕಕ್ಕೆ 1 ಅಂಕ ನೀಡಲಾಗಿದೆ.
ಕುತೂಹಲಕಾರಿ ಬುಷ್ಫೈರ್ ಬ್ಯಾಷ್ ಪಂದ್ಯಕ್ಕೆ ದಿಗ್ಗಜರ ತಂಡಗಳು ಪ್ರಕಟ
ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ ಎದುರಾಳಿ ತಂಡದ ಗೌರವ್ ಯಾದವ್ 2, ರವಿ ಯಾದವ್ 3, ಕುಲದೀಪ್ ಸೇನ್ 2, ಕುಮಾರ್ ಕಾರ್ತಿಕೇಯ 3 ವಿಕೆಟ್ ಪಡೆದರೆ, ಮಧ್ಯಪ್ರದೇಶ ಇನ್ನಿಂಗ್ಸ್ನಲ್ಲಿ ರಾಜ್ಯ ತಂಡದ ಅಭಿಮನ್ಯು ಮಿಥುನ್ 3, ಪ್ರತೀಕ್ ಜೈನ್ 1, ರೋನಿತ್ ಮೋರೆ 2, ಕೃಷ್ಣಪ್ಪ ಗೌತಮ್ 2, ಶ್ರೇಯಸ್ ಗೋಪಾಲ್ 1 ವಿಕೆಟ್ ನೊಂದಿಗೆ ಗಮನ ಸೆಳೆದರು.