ವಿಫಲವಾದ ಜಾರ್ಖಂಡ್ ಬ್ಯಾಟರ್ ಗಳು
ಮೊದಲನೇ ಇನ್ನಿಂಗ್ಸ್ನಲ್ಲೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಜಾರ್ಖಂಡ್, ಎರಡನೇ ಇನ್ನಿಂಗ್ಸ್ನಲ್ಲಿ ಕೂಡ ಬ್ಯಾಟರ್ ಗಳು ವಿಫಲವಾದರು. ಕುಮಾರ್ ಸೂರಜ್ 34 ರನ್, ಕುಮಾರ್ ಕುಶಾಗರ 36 ರನ್ ಗಳಿಸಿದರು. ಅಂಕುಲ್ ರಾಯ್ 36 ರನ್, ಸುಪ್ರಿಯೋ ಚಕ್ರವರ್ತಿ 48 ರನ್ ಗಳಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ.
ಕುಮಾರ್ ದಿಯೋಬ್ರತ್ 20 ರನ್ ಗಳಿಸಿದರೆ, ಆರ್ಯಮಾನ್ ಸೇನ್ ಶೂನ್ಯಕ್ಕೆ ಔಟಾದರು. ನಾಯಕ ವಿರಾಟ್ ಸಿಂಗ್ 1 ರನ್, ಸೌರಭ್ ತಿವಾರಿ 4 ರನ್, ಶಹಬಾಜ್ ನದೀಮ್ 5, ಆಶಿಶ್ ಕುಮಾರ್ 2 ರನ್ ಗಳಿಸಿ ನಿರಾಸೆ ಮೂಡಿಸಿದರು.
ಜಾರ್ಖಂಡ್ ಎರಡನೇ ಇನ್ನಿಂಗ್ಸ್ನಲ್ಲಿ 201 ರನ್ಗಳಿಗೆ ಆಲೌಟ್ ಆಗುವ ಮೂಲಕ 65 ರನ್ಗಳ ಸಾಧಾರಣ ಮುನ್ನಡೆ ಸಾಧಿಸಿತು. ಗೆಲುವಿಗೆ 66 ರನ್ಗಳನ್ನು ಬೆನ್ನತ್ತಿದ ಕರ್ನಾಟಕ ಕೇವಲ 1 ವಿಕೆಟ್ ಕಳೆದುಕೊಂಡು 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ನಿಕಿನ್ ಜೋಸ್ ಉತ್ತಮ ಬ್ಯಾಟಿಂಗ್
66 ರನ್ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ಆರಂಭದಲ್ಲೇ ದೇವದತ್ ಪಡಿಕ್ಕಲ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ರವಿಕುಮಾರ್ ಸಮರ್ಥ್ ಮತ್ತು ನಿಕಿನ್ ಜೋಸ್ ಎಚ್ಚರಿಕೆಯ ಆಟವಾಡುವ ಮೂಲಕ ಕರ್ನಾಟಕಕ್ಕೆ ಸುಲಭ ಜಯ ತಂದುಕೊಟ್ಟರು.
ರವಿಕುಮಾರ್ ಸಮರ್ಥ್ 62 ಎಸೆತಗಳಲ್ಲಿ ತಾಳ್ಮೆಯ 24 ರನ್ ಗಳಿಸಿದರೆ, ನಿಕಿನ್ ಜೋಸ್ ಬಿರುಸಿನ ಇನ್ನಿಂಗ್ಸ್ ಆಡಿದರು. 45 ಎಸೆತಗಳಲ್ಲಿ 9 ಬೌಂಡರಿ ಸಹಿತ 42 ರನ್ ಗಳಿಸಿದರು.
ಮೊದಲ ಇನ್ನಿಂಗ್ಸ್ನಲ್ಲಿ ಶತಕ ಗಳಿಸಿದ್ದ ದೇವದತ್ ಪಡಿಕ್ಕಲ್ ಪಂದ್ಯದ ಆಟಗಾರ ಪ್ರಶಸ್ತಿ ಪಡೆದರು. ಕರ್ನಾಟಕ ರಣಜಿ ಟ್ರೋಫಿ ಟೂರ್ನಿಯಲ್ಲಿ ಈಗಾಗಲೇ ಎಂಟರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡಿದೆ.
ಕರ್ನಾಟಕ, ಜಾರ್ಖಂಡ್ ಪ್ಲೇಯಿಂಗ್ XI
ಕರ್ನಾಟಕ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್(ನಾಯಕ), ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ನಿಕಿನ್ ಜೋಸ್, ಶರತ್ ಬಿಆರ್(ವಿಕೆಟ್ ಕೀಪರ್), ಶುಭಾಂಗ್ ಹೆಗ್ಡೆ, ಕೃಷ್ಣಪ್ಪ ಗೌತಮ್, ವಾಸುಕಿ ಕೌಶಿಕ್, ಶ್ರೇಯಸ್ ಗೋಪಾಲ್, ವಿಧ್ವತ್ ಕಾವೇರಪ್ಪ.
ಜಾರ್ಖಂಡ್: ಕುಮಾರ್ ದಿಯೋಬ್ರತ್, ಆರ್ಯಮನ್ ಸೇನ್, ಕುಮಾರ್ ಸೂರಜ್, ವಿರಾಟ್ ಸಿಂಗ್ (ನಾಯಕ), ಸೌರಭ್ ತಿವಾರಿ, ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್), ಅನುಕುಲ್ ರಾಯ್, ಶಹಬಾಜ್ ನದೀಮ್, ಸುಪ್ರಿಯೋ ಚಕ್ರವರ್ತಿ, ವಿನಾಯಕ್ ವಿಕ್ರಮ್, ಆಶಿಶ್ ಕುಮಾರ್.