ನವದೆಹಲಿ, ಜನವರಿ 31: ರೋನಿತ್ ಮೋರೆ, ಅಭಿಮನ್ಯು ಮಿಥುನ್ ಅಧ್ಬುತ ಬೌಲಿಂಗ್ ಸಾಧನೆ ಕರ್ನಾಟಕ ತಂಡಕ್ಕೆ ಗೆಲುವು ತಂದಿದೆ. ನವದೆಹಲಿಯಲ್ಲಿ ನಡೆದ ರಣಜಿ ಟ್ರೋಫಿ ಎಲೈಟ್ ಗ್ರೂಪ್ ಎ ಮತ್ತು ಬಿ 7ನೇ ಸುತ್ತಿನ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಕರ್ನಾಟಕ ತಂಡ 10 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಕೆ.ಎಲ್.ರಾಹುಲ್ ಪ್ರಚಂಡ ಫಾರ್ಮ್: ಈ ಇಬ್ಬರು ಆಟಗಾರರಿಗೆ 'ಸದ್ಯಕ್ಕಂತೂ ಬೆಂಚೇ' ಗಟ್ಟಿ
ರೈಲ್ವೇಸ್ ಮೊದಲ ಇನ್ನಿಂಗ್ಸ್ನಲ್ಲಿ ಅಭಿಮನ್ಯು ಮಿಥುನ್ 4, ದ್ವಿತೀಯ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಪಡೆದರೆ, ರೋನಿತ್ ಮೋರೆ ಆರಂಭಿಕ ಇನ್ನಿಂಗ್ಸ್ನಲ್ಲಿ 1, ದ್ವಿತೀಯ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಮುರಿದು ತಂಡದ ಜಯವನ್ನು ಬರೆದಿದೆ. ಇದರೊಂದಿಗೆ ತಂಡಕ್ಕೆ 7 ಅಂಕ ಸೇರ್ಪಡೆಯಾಗಿದೆ. ಒಟ್ಟು 24 ಅಂಕಗಳೊಂದಿಗೆ ತಂಡ, ಎ ಮತ್ತು ಬಿ ಗ್ರೂಪ್ನಲ್ಲಿ ಸದ್ಯ 4ನೇ ಸ್ಥಾನದಲ್ಲಿದೆ.
ಸೂಪರ್ ಓವರ್ನಲ್ಲಿದ್ದ ಕೆಟ್ಟ ದಾಖಲೆ ಕೊನೆಗೊಳಿಸಿದ ರೋಹಿತ್ ಶರ್ಮಾ!
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ರೈಲ್ವೇಸ್ ತಂಡ, ನಾಯಕ ಅರಿಂದಮ್ ಘೋಷ್ 59, ಅವಿನಾಶ್ ಯಾದವ್ 63 ರನ್ ಕೊಡುಗೆಯೊಂದಿಗೆ 182 ರನ್ ಗಳಿಸಿತು. ದ್ವಿತೀಯ ಇನ್ನಿಂಗ್ಸ್ನಲ್ಲಿ ಮೃಣಾಲ್ ದೇವಧರ್ 38 ರನ್ ಬಾರಿಸಿದ್ದು ಬಿಟ್ಟರೆ ಇನ್ಯಾರೂ 8ಕ್ಕೂ ಮಿಕ್ಕಿ ರನ್ ಗಳಿಸದಿದ್ದರಿಂದ ಹಿನ್ನಡೆ ಅನುಭವಿಸಿತು. ದ್ವಿತೀಯ ಇನ್ನಿಂಗ್ಸ್ನಲ್ಲಿ ರೈಲ್ವೇಸ್ ಗಳಿಸಿದ್ದು ಕೇವಲ 79 ರನ್.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇರುವ ತಂಡಕ್ಕೆ ಎಂಎಸ್ ಧೋನಿ ನಾಯಕ!
ಗುರಿ ಬೆಂಬತ್ತಿದ ಕರ್ನಾಟಕ ತಂಡ, ಮೊದಲ ಇನ್ನಿಂಗ್ಸ್ನಲ್ಲಿ ದೇವದತ್ ಪಡಿಕ್ಕಲ್ 55, ಶ್ರೀನಿವಾಸ್ ಶರತ್ 62 ರನ್ನೊಂದಿಗೆ 211 ರನ್ ಪೇರಿಸಿದರೆ, ದ್ವಿತೀಯ ಇನ್ನಿಂಗ್ಸ್ನಲ್ಲಿ ವಿಕೆಟ್ ನಷ್ಟವಿಲ್ಲದೆ 51 ರನ್ ಸೇರಿಸಿ ಗೆಲುವು ಸಂಭ್ರಮಿಸಿತು. ರೋನಿತ್ ಮತ್ತು ಮಿಥುನ್ ಬಿಟ್ಟರೆ ರಾಜ್ಯದ ಪ್ರತೀಕ್ ಜೈನ್ 5+1 ವಿಕೆಟ್ ಉರುಳಿಸಿ ಗಮನ ಸೆಳೆದರು.