ನವದೆಹಲಿ: ಟೀಮ್ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತೆ ಮೈದಾನಕ್ಕಿಳಿದಿದ್ದಾರೆ. ಭಾರತ ತಂಡ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದಾಗ ರವೀಂದ್ರ ಜಡೇಜಾ ಗಾಯಕ್ಕೀಡಾಗಿದ್ದರು. ಗಾಯಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಜಡೇಜಾ ಈಗ ಮತ್ತೆ ಮೈದಾನಕ್ಕೆ ಇಳಿದಿದ್ದಾರೆ.
ಭಾರತ ತಂಡದಿಂದ ಬೂಮ್ರಾ ಹೊರಗಿರುವುದಕ್ಕೆ ಅಸಲಿ ಕಾರಣ ಬಯಲು!
ಆಸ್ಟ್ರೇಲಿಯಾ ಪ್ರವಾಸದ ವೇಳೆ ರವೀಂದ್ರ ಜಡೇಜಾ ಹೆಬ್ಬೆರಳಿಗೆ ತೀವ್ರವಾದ ಗಾಯವಾಗಿತ್ತು. ಹೀಗಾಗಿ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಜಡೇಜಾ ಪಾಲ್ಗೊಂಡಿರಲಿಲ್ಲ. ಈಗ ಶಸ್ತ್ರ ಚಿಕಿತ್ಸೆ ಮುಗಿದಿರುವುದರಿಂದ ಜಡೇಜಾ ಮತ್ತೆ ಮೈದಾನಕ್ಕಿಳಿದು ಅಭ್ಯಾಸ ಆರಂಭಿಸಿದ್ದಾರೆ.
ಮೈದಾನದಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಜಡೇಜಾ ಟ್ವಿಟರ್ನಲ್ಲಿ ಹಾಕಿಕೊಂಡಿದ್ದಾರೆ. 'ಫೀಲ್ಡಿಗೆ ಮತ್ತೆ ಮರಳಿದ್ದೇನೆ' ಎಂದು ಜಡೇಜಾ ವಿಡಿಯೋ ಜೊತೆಗೆ ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಜಡೇಜಾ ರನ್ನಿಂಗ್ ಅಭ್ಯಾಸ ಮಾಡುತ್ತಿರುವ ದೃಶ್ಯವಿದೆ.
ವಿಜಯ್ ಹಜಾರೆಯಲ್ಲಿ ಪಡಿಕ್ಕಲ್: ಕುತೂಹಲಕಾರಿ ಅಂಕಿ-ಅಂಶಗಳು!
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ವೇಳೆ ಜಡೇಜಾ ಕೈ ಬೆರಳಿಗೆ ಗಾಯವಾಗಿತ್ತು. ಈಗ ಗಾಯ ಸುಧಾರಿಸಿರುವುದರಿಂದ ಇಂಗ್ಲೆಂಡ್ ವಿರುದ್ಧದ ನಿಯಮಿತ ಓವರ್ಗಳ ಸರಣಿಯಲ್ಲಿ ಜಡೇಜಾ ಆಡುವ ಸಾಧ್ಯತೆಯಿದೆ.