ಮುಂಬೈ: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಕಾಮೆಂಟರ್ ಪ್ಯಾನೆಲ್ನಿಂದ ತೆಗೆದು ಹಾಕಲಾಗಿರುವ ಭಾರತದ ಮಾಜಿ ಬ್ಯಾಟ್ಸ್ಮನ್ ಸಂಜಯ್ ಮಂಜ್ರೇಕರ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ 2020 ಕಾಮೆಂಟರಿ ಪ್ಯಾನೆಲ್ಗೆ ಸೇರಿಸುವಂತೆ ಬಿಸಿಸಿಐಗೆ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಸಮೂಹ ಪತ್ರ ಬರೆದಿದೆ.
ಐಪಿಎಲ್ 2020: ಎಲ್ಲಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಪ್ರಕಟ!
ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ಅಪೆಕ್ಸ್ ಕೌನ್ಸಿಲ್ ಮೆಂಬರ್ ಮತ್ತು ನೋಟೆಡ್ ಕ್ಯೂರೇಟರ್ ನದೀಮ್ ಮೆನನ್ ಅವರು ಬಿಸಿಸಿಐಗೆ ಪತ್ರ ಬರೆದಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ ಶಾಗೆ ಪತ್ರ ಬರೆದು ಐಪಿಎಲ್ ಕಾಮೆಂಟರಿ ಪ್ಯಾನೆಲ್ಗೆ ಸೇರಿಸಲು ವಿನಂತಿಸಿಕೊಂಡಿದ್ದಾರೆ.
ಐಪಿಎಲ್ ವೀಕ್ಷಿಸಬೇಕಾದ್ರೆ ನೀವು ಡಿಸ್ನಿ+ಹಾಟ್ಸ್ಟಾರ್ ಸಬ್ಸ್ಕ್ರೈಬ್ ಮಾಡಿರಬೇಕು!
'ಐಪಿಎಲ್ 2020ಕ್ಕೆ ಬಿಸಿಸಿಐ ಕಾಮೆಂಟೇಟರ್ ಆಗಿ ಸಂಜಯ್ ಮಂಜ್ರೇಕರ್ ಅವರನ್ನು ಆರಿಸುವಂತೆ ಎಂಸಿಎ ಸದಸ್ಯರಾದ ನಾವು ಕೋರಿಕೊಳ್ಳುತ್ತಿದ್ದೇವೆ. ಕಾಮೆಂಟರಿ ಪ್ಯಾನೆಲ್ನಿಂದ ಮಂಜ್ರೇಕರ್ ತೆಗೆದು ಹಾಕಿರುವ ನಿರ್ಧಾರ ಸರಿಯಲ್ಲ. ಇದನ್ನು ಬದಲಿಸುವಂತೆ ನಾವು ಕೇಳಿಕೊಳ್ಳುತ್ತಿದ್ದೇವೆ,' ಎಂದು ಬಿಸಿಸಿಐಗೆ ಕಳುಹಿಸಲಾಗಿರುವ ಪತ್ರದಲ್ಲಿ ಬರೆಯಲಾಗಿದೆ.
ಸಿಪಿಎಲ್ 2020: ಜಮೈಕಾ ತಲೈವಾಸ್ ಸದೆಬಡಿದ ಸೇಂಟ್ ಲೂಸಿಯಾ ಝೌಕ್ಸ್
ಕೆಲ ತಿಂಗಳ ಹಿಂದೆ ಇದೇ ಗುಂಪು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿಗೆ ಪತ್ರ ಬರೆದು ಮಂಜ್ರೇಕರ್ ಅವರನ್ನು ಕಾಮೆಂಟರಿ ಪ್ಯಾನೆಲ್ಗೆ ಸೇರಿಸಿಕೊಳ್ಳಲು ವಿನಂತಿಸಿಕೊಂಡಿತ್ತು. ಮಂಜ್ರೇಕರ್ ಕೂಡ ತನ್ನನ್ನು ಪ್ಯಾನೆಲ್ಗೆ ಸೇರಿಕೊಳ್ಳುವಂತೆ ಸ್ವತಃ ಕೋರಿಕೊಂಡಿದ್ದರು.