ಅರೇಬಿಯನ್ಸ್ಗೆ ಗೆಲುವು
ಲಿನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮರಾಟ ಅರೇಬಿಯನ್ಸ್ ತಂಡ ಪಂದ್ಯದಲ್ಲಿ 24 ರನ್ ಗೆಲುವನ್ನಾಚರಿಸಿತ್ತು. ಕ್ರಿಸ್ ಬ್ಯಾಟಿಂಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್, ಅರೇಬಿಯನ್ಸ್ ಸಹ ಆಟಗಾರ ಯುವರಾಜ್ ಸಿಂಗ್, ಲಿನ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದಕ್ಕೆ ಕೆಕೆಆರ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕೆಕೆಆರ್ಗೆ ಸಂದೇಶ ರವಾನೆ
'ಐಪಿಎಲ್ನಲ್ಲಿ ನಾನು ಕ್ರಿಸ್ ಲಿನ್ ಅವರನ್ನು ನೋಡಿದ್ದೇನೆ. ಕೆಕೆಆರ್ಗೆ ಉತ್ತಮ ಆರಂಭಿ ನೀಡಿದ್ದವನು ಆತ. ಆತನನ್ನು ಕೆಕೆಆರ್ ಯಾಕೆ ಉಳಿಸಿಕೊಳ್ಳಲಿಲ್ಲ ಎಂಬುದು ನನಗೆ ಅರ್ಥವಾಗಲಿಲ್ಲ. ನನಗನ್ನಿಸುವಂತೆ ಕೆಕೆಆರ್ಗೆ ಇದು ಕೆಟ್ಟ ಕರೆಯಾಗಿದೆ. ಈ ಮೂಲಕ ಲಿನ್ ಕೆಕೆಆರ್ಗೆ ಒಂದು ಸಂದೇಶ ರವಾನಿಸಿದ್ದಾರೆ,' ಎಂದು ಯುವಿ ಹೇಳಿದ್ದಾರೆ.
ಕೆಕೆಆರ್ನಲ್ಲಿ ಉಳಿದವರು
ಐಪಿಎಲ್ ಹರಾಜಿಗೂ ಮುನ್ನ ಕೆಕೆಆರ್ ತಂಡ, ದಿನೇಶ್ ಕಾರ್ತಿಕ್, ಆಂಡ್ರೆ ರಸ್ಸೆಲ್, ಸುನಿಲ್ ನರೈನ್, ಕುಲದೀಪ್ ಯಾದವ್, ಶುಬ್ಮಾನ್ ಗಿಲ್, ಲಾಕಿ ಫರ್ಗುಸನ್, ನಿತೀಶ್ ರಾಣಾ, ಸಂದೀಪ್ ವಾರಿಯರ್, ಹ್ಯಾರಿ ಗರ್ನಿ, ಕಮಲೇಶ್ ನಾಗರ್ಕೋಟಿ, ಶಿವಂ ಮಾವಿ, ಸಿದ್ಧೇಶ್ ಲಾಡ್ (ಟಿ) ಇವರನ್ನು ತಂಡದಲ್ಲಿ ಉಳಿಸಿಕೊಂಡಿತ್ತು.
ಕೋಲ್ಕತ್ತಾ ತಂಡ ಹೊರಗಿಟ್ಟವರು
ಇನ್ನು ರಾಬಿನ್ ಉತ್ತಪ್ಪ, ಕ್ರಿಸ್ ಲಿನ್, ಪಿಯೂಷ್ ಚಾವ್ಲಾ, ಜೋ ಡೆನ್ಲಿ, ಯರ್ರಾ ಪೃಥ್ವಿರಾಜ್, ನಿಖಿಲ್ ನಾಯಕ್, ಕೆ.ಸಿ.ಕರಿಯಪ್ಪ, ಮ್ಯಾಥ್ಯೂ ಕೆಲ್ಲಿ, ಅನ್ರಿಚ್ ನಾರ್ತ್ಜೆ, ಶ್ರೀಕಾಂತ್ ಮುಂಧೆ, ಕಾರ್ಲೋಸ್ ಬ್ರಾಥ್ವೈಟ್ ಇವರನ್ನು ಕೆಕೆಆರ್ ತಂಡದಿಂದ ಬಿಟ್ಟುಕೊಡಲಾಗಿತ್ತು. ಅಂದ್ಹಾಗೆ ಐಪಿಎಲ್ ಆಟಗಾರ ಹರಾಜು ಡಿಸೆಂಬರ್ 19ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ.