ಪದೇ ಪದೇ ಬದಲಾಯಿಸಕೂಡದು
1983ರಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಕೀಪರ್ ಕಿರ್ಮಾನಿಗೆ, ಈಗ ವಿರಾಟ್ ಕೊಹ್ಲಿ ತಂಡದಲ್ಲಿ ಕಾಣಸಿಗುವ 'ಕೀಪರ್ಗಳ ಬದಲಾವಣೆ' ಸರಿಯೆನಿಸಿಲ್ಲ. ಒಮ್ಮೆ ರಿಷಭ್ ಪಂತ್ ಮತ್ತೊಮ್ಮೆ ಕೆಎಲ್ ರಾಹುಲ್ ಹೀಗೆ ಶಿಫ್ಟ್ನಂತೆ ಕೀಪರ್ಗಳನ್ನು ಬದಲಾಯಿಸಿದರೆ ಬಲಿಷ್ಠ ಕೀಪರ್ ತಯಾರಾಗೋದು ಕಷ್ಟ ಎಂಬರ್ಥದಲ್ಲಿ ಕಿರ್ಮಾನಿ ಮಾತನಾಡಿದ್ದಾರೆ.
ಹುಟ್ಟಿನಿಂದಲೇ ಆ ಕಲೆಯಿರಬೇಕು
ಹಿಂದುಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ಕಿರ್ಮಾನಿ, 'ವಿಕೆಟ್ ಕೀಪಿಂಗ್ ಕೌಶಲ ಹುಟ್ಟಿನಿಂದಲೇ ಬರಬೇಕಾ? ನನ್ನ ಬಳಿ ಕೇಳಿದರೆ ನಾನು ಹುಟ್ಟಿನಿಂದಲೇ ಬರಬೇಕು ಎನ್ನುತ್ತೇನೆ. ಉತ್ತಮ ದೃಷ್ಟಿ, ಅಥ್ಲೆಟಿಕ್ ಚುರುಕುತನ, ಪ್ರತಿವರ್ತನ, ನಿರೀಕ್ಷೆಯ ಪ್ರಜ್ಞೆಯೊಂದಿಗೆ ಆ ಕಲೆ ಹುಟ್ಟಿನಲ್ಲೇ ಬರಬೇಕು,' ಎಂದರು.
ರಾಹುಲ್ ಕೀಪಿಂಗ್ ಆರಂಭಿಸಿದ್ದೇ ಗೊತ್ತಿಲ್ಲ
'ಕೆಎಲ್ ರಾಹುಲ್ಗೆ ಕೀಪಿಂಗ್ ಕೌಶಲ ದೇವರ ವರವಾಗಿ ಬಂದಿದೆಯೋ ನನಗೆ ಗೊತ್ತಿಲ್ಲ. ಈ ಹುಡುಗ ಕರ್ನಾಟಕ ಪ್ರತಿನಿಧಿಸುವ ಮೊದಲು ಎನ್ಸಿಎಯಲ್ಲಿ ಬೌಲಿಂಗ್ ಯಂತ್ರದಲ್ಲಿ ಸ್ವತಃ ಬ್ಯಾಟಿಂಗ್ ಮಾಡುವುದನ್ನು ನಾನು ನೋಡಿದ್ದೇನೆ. ಯಾವಾಗ ಕೀಪಿಂಗ್ ಆರಂಭಿಸಿದನೋ ನನಗೆ ಗೊತ್ತಿಲ್ಲ. ಆತನಿಗೆ ಒಳ್ಳೆಯದಾಗಲಿ,' ಎಂದು ರಾಹುಲ್ಗೆ ಕಿರ್ಮಾನಿ ಹಾರೈಸಿದ್ದಾರೆ.
ಪಂತ್ನಲ್ಲಿ ಅಪಾರ ಕೌಶಲವಿದೆ
ಬಹು ನಿರೀಕ್ಷೆ ಹುಟ್ಟಿಸಿ ನಿರಾಸೆ ಮೂಡಿಸುತ್ತಿರುವ ರಿಷಭ್ ಪಂತ್ ಬಗ್ಗೆಯೂ ಕಿರ್ಮಾನಿ ಅನಿಸಿಕೆ ಹಂಚಿಕೊಂಡಿದ್ದಾರೆ. 'ರಿಷಭ್ ಪಂತ್ನಲ್ಲಿ ಅಪಾರ ಕೌಶಲವಿದೆ. ಆ ಕೌಶಲವನ್ನು ಅನುಭವದೊಂದಿಗೆ ಅಭಿವೃದ್ಧಿಗೊಳಿಸಬೇಕು, ಅರಳಿಸಬೇಕು. ಇದು ಒಂದೇ ರಾತ್ರಿಯಲ್ಲಿ ಆಗಿಹೋಗೋಲ್ಲ. ಬೇಗ ಕಲಿಯುವವರಿಗೆ ಇದಕ್ಕೆ ಕನಿಷ್ಟ ಎರಡು ಸೀಸನ್ಗಳು ಬೇಕಾಗುತ್ತದೆ,' ಎಂದು ಸಯ್ಯದ್ ಹೇಳಿದ್ದಾರೆ.