ನವದೆಹಲಿ: ಭಾರತದ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಕೋವಿಡ್-19 ವಿರುದ್ಧದ ಹೋರಾಟಕ್ಕೆ ನೆರವು ನೀಡಿದ್ದಾರೆ. ಆರ್ಥಿಕ ನೆರವು ನೀಡಿರುವ ಪಂತ್, ಆ ಹಣ ಆಮ್ಲಜನಕ ಸಿಲಿಂಡರ್ಗಳ ಉತ್ಪಾದನೆಗೆ, ಬೆಡ್ಗಳ ಸೌಲಭ್ಯಕ್ಕೆ ಮತ್ತು ಕೋವಿಡ್ ರಿಲೀಫ್ ಕಿಟ್ಗಳ ಖರೀದಿಗೆ ಸಹಾಯವಾಗಲಿದೆ ಎಂದಿದ್ದಾರೆ.
ಕೆಕೆಆರ್ ವೇಗಿ, ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಕೋವಿಡ್-19 ಪಾಸಿಟಿವ್
ಮೇ 8ರ ಶನಿವಾರ ರಿಷಭ್ ಪಂತ್ ಟ್ವೀಟ್ ಮೂಲಕ ಈ ವಿಚಾರ ತಿಳಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಭಾರತ ಬಹಳ ಸಮಸ್ಯೆ ಎದುರಿಸುತ್ತಿದೆ. ದೇಶದ ಈ ಪರಿಸ್ಥಿತಿ ನನಗೂ ಪರಿಣಾಮ ಬೀರಿದೆ ಎಂದು ಉದ್ದ ಸಂದೇಶ ಬರೆದುಕೊಂಡಿರುವ ಪಂತ್ ಕೊರೊನಾ ವಿರುದ್ಧದ ಹೋರಾಟಕ್ಕೆ ನೆರವು ನೀಡಿರುವುದಾಗಿ ಹೇಳಿದ್ದಾರೆ.
— Rishabh Pant (@RishabhPant17) May 8, 2021
'ನಾನು ಹೇಮಕುಂಟ್ ಫೌಂಡೇಶನ್ಗೆ ಆರ್ಥಿಕ ನೆರವು ನೀಡುತ್ತಿದ್ದೇನೆ. ಅದರಿಂದ ಆಕ್ಸಿಜನ್ ಸಿಲಿಂಡರ್ಗಳು, ಬೆಡ್ಗಳು ಮತ್ತು ಕೋವಿಡ್ ಕಿಟ್ಗಳನ್ನು ಖರೀದಿಸಲು ಸಹಾಯವಾಗಲಿದೆ. ನಾನು ಸಂಸ್ಥೆಗಳ ಜೊತೆಗಿದ್ದು ಭಾರತದ ಗ್ರಾಮೀಣ ಭಾಗಗಳಲ್ಲಿ ಸಹಾಯ ನೀಡಲು ಉತ್ಸುಕನಾಗಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಈ ವಿಚಾರದಲ್ಲಿ ಆರ್ಸಿಬಿಯೇ ನಂ.1, ಬೆಂಗಳೂರ್ ಸೂಪರ್!
2021ರ ಪಾಯಿಂಟ್ ಟೇಬಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಂ.1 ಸ್ಥಾನದಲ್ಲಿದೆ. ಆದರೆ ಐಪಿಎಲ್ ಬಯೋ ಬಬಲ್ ಒಳಗೆ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಈ ಬಾರಿಯ ಐಪಿಎಲ್ ಅಮಾನತಾಗಿತ್ತು. ಕೇವಲ 29 ಪಂದ್ಯಗಳಷ್ಟೇ ನಡೆದಿದ್ದವು. ಇನ್ನೂ 31 ಪಂದ್ಯಗಳು ಬಾಕಿಯಿದ್ದವು.