ಮನೀಶ್ ಪಾಂಡೆ ಔಟ್ ಆದಾಗಲಂತೂ ಅವರ ಆಕ್ರಮಣಶೀಲತೆ ತುಸು ಜಾಸ್ತಿಯೇ
ಡೇವಿಡ್ ವಾರ್ನರ್ ಮೂಲಕ ಹೈದರಾಬಾದ್ ತಂಡದ ಮೊದಲ ವಿಕೆಟ್ ಬಿದ್ದಾಗ, ಇದಾದ ನಂತರ, ಮನೀಶ್ ಪಾಂಡೆ ಮತ್ತು ಬೈರ್ ಸ್ಟೋವ್ ಔಟಾದಾಗಲಂತೂ, ವಿರಾಟ್ ಕೊಹ್ಲಿ, ಸನ್ ರೈಸರ್ಸ್ ಆಟಗಾರರನ್ನು ಕೆಣಕಿದರು. ಅದರಲ್ಲೂ ಮನೀಶ್ ಪಾಂಡೆ ಔಟ್ ಆದಾಗಲಂತೂ ಅವರ ಆಕ್ರಮಣಶೀಲತೆ ತುಸು ಜಾಸ್ತಿಯೇ ಇತ್ತು.
ಉಮೇಶ್ ಯಾದವ್ ದುಬಾರಿಯಾದಾಗ
ಇನ್ನು, ಉಮೇಶ್ ಯಾದವ್ ದುಬಾರಿಯಾದಾಗ ತಾಳ್ಮೆ ಕಳೆದುಕೊಳ್ಳದಂತೇ ಕಣ್ಸನ್ನೆಯಲ್ಲೇ ಸೂಚಿಸುತ್ತಿದ್ದರು. ಮಿಸ್ ಫೀಲ್ಡ್ ಆದಾಗ ಆಕ್ರೋಶ ವ್ಯಕ್ತ ಪಡಿಸುತ್ತಾ, ಫೀಲ್ಡಿಂಗ್ ಬದಲಾವಣೆಯನ್ನು ಮಾಡುತ್ತಿದ್ದರು. ಆರು ಜನರಿಗೆ ಬೌಲಿಂಗ್ ನೀಡಿದ್ದ ಕೊಹ್ಲಿ, ಹೈದರಾಬಾದ್ ಆಟಗಾರರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ನಾನಾಗಿಯೇ ಎಂದೂ ಎದುರಾಳಿ ತಂಡವನ್ನು ಕೆಣಕುವುದಿಲ್ಲ
"ಮೈದಾನದಲ್ಲಿ ಯಾವ ಪರಿಸ್ಥಿತಿ ಇರುತ್ತದೋ ಅದರ ಮೇಲೆ ಆಕ್ರಮಣಶೀಲತೆ ಇರುತ್ತದೆ. ಎದುರಾಳಿಗಳು ಆಕ್ರಮಣಕಾರಿಯಾಗಿದ್ದರೆ, ನಾವೂ ಹಾಗೇ ಇರಬೇಕಾಗುತ್ತದೆ. ಯಾವುದೇ ಪಂದ್ಯದಲ್ಲಿ ನಾನಾಗಿಯೇ ಎಂದೂ ಎದುರಾಳಿ ತಂಡವನ್ನು ಕೆಣಕಲು ಹೋಗುವುದಿಲ್ಲ"ಎಂದು ಕೊಹ್ಲಿ ಹಿಂದೊಮ್ಮೆ ಹೇಳಿದ್ದರು.
ಬೌಲರ್ ಗಳ ಪರಿಶ್ರಮ ತುಂಬಾ ಇರುತ್ತದೆ
"ನನಗಿರುವ ವೈಯಕ್ತಿಕ ಗೌರವಕ್ಕೆ ವಿರುದ್ದವಾಗಿ ಎಂದೂ ನಾನು ನಡೆದುಕೊಳ್ಳುವುದಿಲ್ಲ. ಪ್ರತಿಯೊಂದು ವಿಕೆಟ್ ಬಿದ್ದಾಗಲೂ ನಾನು ಆಕ್ರಮಣಕಾರಿಯಾಗಿ ಇರಬೇಕಾಗುತ್ತದೆ. ಯಾಕೆಂದರೆ, ಇದರ ಹಿಂದೆ ಬೌಲರ್ ಗಳ ಪರಿಶ್ರಮ ತುಂಬಾ ಇರುತ್ತದೆ. ನಾನು ಆಕ್ರಮಣಕಾರಿಯಾಗಿರುವುದು ಆಡುವ ಎಲ್ಲಾ ಪಂದ್ಯವನ್ನು ಗೆಲ್ಲಬೇಕೆನ್ನುವ ಫ್ಯಾಷನ್ ಗಾಗಿ" ಎಂದು ವಿರಾಟ್ ಕೊಹ್ಲಿ ಹೇಳಿದ್ದರು.