ಮುಂಬೈ, ಆಗಸ್ಟ್ 7: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಮುಂಬರಲಿರುವ ವಿಝ್ಝಿ ಟ್ರೋಫಿ ಟೂರ್ನಿಗಾಗಿ ಮುಂಬೈಯ 15 ಜನರ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಟೂರ್ನಿ ಆಂಧ್ರ ಪ್ರದೇಶದಲ್ಲಿ ಆಗಸ್ಟ್ 22ರಿಂದ ಆರಂಭಗೊಳ್ಳಲಿದೆ.
ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಕನ್ನಡಿಗ ಸುನೀಲ್ ಜೋಶಿ ಅರ್ಜಿ
50 ಓವರ್ಗಳ ಓಪನ್ ಟೂರ್ನಿಗಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ತನ್ನ ವೆಬ್ಸೈಟ್ನಲ್ಲಿ ಮಂಗಳವಾರ (ಆಗಸ್ಟ್ 6) ಪ್ರಕಟಿಸಿರುವ ತಂಡದಲ್ಲಿ ಎಡಗೈ ವೇಗಿ ಅರ್ಜುನ್ ಹೆಸರಿದೆ. ಟಿ20 ಮುಂಬೈ ಲೀಗ್ನಲ್ಲಿ 19ರ ಹರೆಯದ ಅರ್ಜುನ್ 5 ಲಕ್ಷ ರೂ.ಗಾಗಿ ಆಕಾಶ್ ಟೈಗರ್ಸ್ ಎಂಡಬ್ಲ್ಯೂಎಸ್ ಪಾಲಾಗಿದ್ದರು.
This is cute 😍 @PrithviShaw pic.twitter.com/v6s2lTxmld
— Arjun Tendulkar (@jr_tendulkar) August 4, 2019
ಮುಂಬೈ ಯುವ ಕ್ರಿಕೆಟರ್ ಅರ್ಜುನ್, ಟೀಮ್ ಇಂಡಿಯಾಕ್ಕೆ ನೆಟ್ ಬೌಲರ್ ಆಗಿಯೂ ದುಡಿದ ಅನುಭವ ಹೊಂದಿದ್ದಾರೆ. ನಾಲ್ಕು ದಿನಗಳ ಪಂದ್ಯಕ್ಕೆ ಭಾರತ ಅಂಡರ್ 19 ತಂಡದಲ್ಲಿ ಆಡಿದ್ದ ಅರ್ಜುನ್ ತೆಂಡೂಲ್ಕರ್, ಸ್ವಿಂಗ್ ಎಸೆತಕ್ಕಾಗಿ ಪ್ರಭಾವ ಬೀರಿದ್ದರು.
3ನೇ ಟಿ20 ಗೆದ್ದು ವಿಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದ ಟೀಮ್ ಇಂಡಿಯಾ
ಮುಂಬೈ ತಂಡ: ಹಾರ್ದಿಕ್ ತಾಮೋರ್ (ನಾಯಕ), ಸೃಜನ್ ಅಥಾವಳೆ, ರುದ್ರ ಧಂಡೆ, ಚಿನ್ಮಯ್ ಸುತಾರ್, ಆಶಯ್ ಸರ್ದೇಸಾಯಿ, ಸಾಯಿರಾಜ್ ಪಾಟೀಲ್, ಓಂಕಾರ್ ಜಾಧವ್, ಸತ್ಯಲಕ್ಷ ಜೈನ್, ಮಿನಾದ್ ಮಂಜ್ರೇಕರ್, ಅರ್ಜುನ್ ತೆಂಡೂಲ್ಕರ್, ಅಮನ್ ಶೆರಾನ್, ಅಥರ್ವ ಪೂಜಾರಿ, ಮ್ಯಾಕ್ಸ್ವೆಲ್ ಸ್ವಾಮಿನಾಥನ್, ಪ್ರಶಾಂತ್ ಸೋಲಂಕಿ, ವಿಘ್ನೇಶ್ ಸೋಲಂಕಿ.