ಟೀಮ್ ಇಂಡಿಯಾದ ಮಾಜಿ ಆಟಗಾರ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾದಲ್ಲಿ ಬುಷ್ಫೈರ್ನ ಸಂತ್ರಸ್ತರಿಗಾಗಿ ನಡೆಸಲಾಗುತ್ತಿರುವ ಬುಷ್ಫೈರ್ ಕ್ರಿಕೆಟ್ ಬ್ಯಾಷ್ನಲ್ಲಿ ಕೋಚ್ ಆಗಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಇದಕ್ಕೂ ಮುನ್ನ ಆಸ್ಟ್ರೇಲಿಯಾ ಯುವ ಕ್ರಿಕೆಟಿಗನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ಯುವ ಕ್ರಿಕೆಟಿಗ ಮಾರ್ನಸ್ ಲೆಬುಶೈನ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಮಾರ್ನಸ್ ಆಟದಲ್ಲಿ ಪಾದದ ಚಲನೆ ಅತ್ಯದ್ಭುತವಾಗಿದೆ. ಅದು ನನ್ನನ್ನು ಹೋಲುತ್ತದೆ ಎಂದು ಸಚಿನ್ ತೆಂಡೂಲ್ಕರ್ ಹೇಳಿಕೆ ನೀಡಿದ್ದಾರೆ.
ಯು-19 ಸೋಲಿಗೆ ಪಾಕ್ ಕ್ರಿಕೆಟ್ ಬೋರ್ಡ್ ವಿರುದ್ಧವೇ ಕೆಂಡಕಾರಿದ ಶೋಯೆಬ್ ಅಖ್ತರ್!
ಸ್ಟೀವ್ ಸ್ಮಿತ್ ಅನುಪಸ್ಥಿತಿಯಲ್ಲಿ ಮರ್ನಾಸ್ ಲೆಬುಶೈನ್ ಆಸ್ಟ್ರೇಲಿಯಾ ತಂಡಕ್ಕೆ ಕಾಲಿಟ್ಟರು. ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ಇತ್ತೀಚೆಗೆ ಟೀಮ್ ಇಂಡಿಯಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಅಂತಾರಾಷ್ಟ್ರೀಯ ಏಕದಿನಕ್ಕೂ ಕಾಲಿಟ್ಟಿದ್ದಾರೆ.
ಸಚಿನ್ ತೆಂಡೂಲ್ಕರ್ ಬುಷ್ಫೈರ್ ಕ್ರಿಕೆಟ್ನಲ್ಲಿ ರಿಕಿ ಪಾಂಟಿಂಗ್ ತಂಡದ ಕೋಚ್ ಆಗಿದ್ದಾರೆ. ಟೀಮ್ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಕೂಡ ಬುಷ್ಫೈರ್ ಕ್ರಿಕೆಟ್ನಲ್ಲಿ ಆಟಗಾರನಾಗಿ ಪಾಲ್ಗೊಳ್ಳಲಿದ್ದಾರೆ. ಪಂದ್ಯ ಇದೇ ಬಾನುವಾರ ಮೆಲ್ಬೋರ್ನ್ನ ಜಂಕ್ಷನ್ ಓವಲ್ನಲ್ಲಿ ನಡೆಯಲಿದೆ.
ಶತಕ ಸಿಡಿಸಿ ಗೆಲ್ಲಿಸಿದ ರಾಸ್ ಟೇಯ್ಲರನ್ನು ಹರ್ಭಜನ್ ಪ್ರಶ್ನೆ ಮಾಡಿದ್ದು ಈ 'ವಿಚಿತ್ರ' ಕಾರಣಕ್ಕೆ!
ಮೊದಲಿಗೆ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಪಂದ್ಯ ಆಯೋಜನೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಮಳೆಯ ಮುನ್ಸೂಚನೆ ಇರುವ ಕಾರಣ ಪಂದ್ಯದ ಸ್ಥಳ ಬದಲಾವಣೆಯಾಗಿದೆ. ಹೀಗಾಗಿ ಶೇನ್ ವಾರ್ನ್ ಟುರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಶೇನ್ ವಾರ್ನ್ ಮುನ್ನಡೆಸಬೇಕಾಗಿದ್ದ ಟೀಮ್ ಅನ್ನು ಗಿಲ್ಕ್ರಿಸ್ಟ್ ಮುನ್ನಡೆಸಲಿದ್ದಾರೆ.