ಆಟಗಾರರಿಗೆ ಜವಾಬ್ಧಾರಿ ತಿಳಿದಿರುತ್ತದೆ
"ಯಾವಾಗ ಆಟಗಾರನೋರ್ವ ಪ್ರಯಾಸಪಡುತ್ತಿರುತ್ತಾನೋ ಆಗ ಅನುಭವಿಗಳ ಅಗತ್ಯವಿರುತ್ತದೆ. ಆಗ ಕೋಚ್ ಸಹಾಯಕ್ಕೆ ಬರುತ್ತಾರೆ. ಅದನ್ನು ಹೊರತುಪಡಿಸಿ ತಂಡದ ಆಟಗಾರರಿಗೆ ತಮ್ಮ ಜವಾಬ್ಧಾರಿ ಏನಿದೆ, ತಾವು ಏನು ಮಾಡಬೇಕಿದೆ ಎಂಬುದು ತಿಳಿದಿರುತ್ತದೆ" ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅನುಭವಿ ಹಾಗು ಯುವ ಆಟಗಾರರ ಉತ್ತಮ ಸಮ್ಮಿಶ್ರಣ
ಶ್ರೀಲಂಕಾಗೆ ತೆರಳುವ ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ಸಚಿನ್ ತೆಂಡೂಲ್ಕರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅನುಭವಿಗಳು ಹಾಗೂ ಯುವ ಆಟಗಾರರನ್ನು ಒಳಗೊಂಡಿರುವ ಅತ್ಯಂತ ಉತ್ತಮ ತಂಡ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ. ದ್ರಾವಿಡ್ ಅವರ ಉಪಸ್ಥಿತಿ ತಂಡಕ್ಕೆ ಹೆಚ್ಚಿನ ಲಾಭವನ್ನುಂಟು ಮಾಡಲಿದೆ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ದ್ರಾವಿಡ್ ಉಪಸ್ಥಿತಿ ಸಹಾಯಕ
ಇನ್ನು ತಂಡದ ನಾಯಕ ಶಿಖರ್ ಧವನ್ ಬಗ್ಗೆಯೂ ಸಚಿನ್ ಮಾತನಾಡಿದ್ದಾರೆ. "ಶಿಖರ್ ಧವನ್ ಟೀಮ್ ಇಂಡಿಯಾದಲ್ಲಿ 10 ವರ್ಷಗಳಿಂದ ಆಡುತ್ತಿದ್ದಾರೆ. ಈ ಸುದೀರ್ಘ ಅನುಭವ ತಂಡಕ್ಕೆ ಲಾಭವಾಗಲಿದೆ. ತಂಡದಲ್ಲಿ ಅನುಭವಿಗಳು ಹಾಗೂ ಯುವ ಆಟಗಾರರ ಉತ್ತಮ ಮಿಶ್ರಣವಿದೆ. ಇವರೆಲ್ಲರಿಗೂ ರಾಹುಲ್ ದ್ರಾವಿಡ್ ಉಪಸ್ಥಿತಿ ಉತ್ತಮ ರೀತಿಯಲ್ಲಿ ಸಹಕಾರಿಯಾಗಲಿದೆ" ಎಂದು ಸಚಿನ್ ತೆಂಡೂಲ್ಕರ್ ಹೇಳಿಕೆ ನೀಡಿದ್ದಾರೆ.
ಸಚಿನ್ ಹಾಗೂ ದ್ರಾವಿಡ್ ಜೋಡಿ
ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ತಂಡದ ಇಬ್ಬರು ಅತ್ಯುತ್ತಮ ಆಟಗಾರರು. ಸುಮಾರು ಒಂದೂವರೆ ದಶಕಗಳ ಕಾಲ ಈ ಇಬ್ಬರು ಆಟಗಾರರು ಜೊತೆಯಾಗಿ ಆಡಿದ್ದಾರೆ. ಈ ಜೋಡಿ 11,000 ರನ್ಗಳ ಜೊತೆಯಾಟವನ್ನು 48ರ ಸರಾಸರಿಯಲ್ಲಿ ಭಾರತೀಯ ಕ್ರಿಕೆಟ್ಗೆ ನೀಡಿದೆ. ಸಚಿನ್ ಹಾಗೂ ದ್ರಾವಿಡ್ ಜೋಡಿ 31 ಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ.