ಸುಳ್ಳು ಸುದ್ದಿಗಳಿಗೆ ತಲೆ ಕೊಡುತ್ತಿರಲಿಲ್ಲ
ಇಂಜಿನಿಯರ್ ಹೇಳಿಕೆಗೆ ತಿರುಗೇಟು ನೀಡಿದ್ದ ಅನುಷ್ಕಾ ಶರ್ಮಾ, 'ತಾವೇ ಸೃಷ್ಟಿಸಿದ ಮತ್ತು ಸುಳ್ಳು ಸುದ್ದಿಗಳಿಗೆ ತಲೆ ಕೊಡದೆ ಯಾವಾಗಲೂ ಮೌನವಾಗಿರುವುದನ್ನು ನಾನು ನನ್ನ ವೃತ್ತಿ ಜೀವನದಲ್ಲಿ ಕಳೆದ 11 ವರ್ಷಗಳಿಂದಲೂ ಪಾಲಿಸಿಕೊಂಡು ಬಂದಿದ್ದೇನೆ,' ಎಂದು ಉದ್ದಕ್ಕೆ ಟ್ವೀಟ್ ಮಾಡಿದ್ದರು.
— Anushka Sharma (@AnushkaSharma) October 31, 2019 |
ಮೌನವೇ ಮಾರಕವಾಗುತ್ತಿದೆ
ಟ್ವೀಟ್ನ ಮುಂದುವರೆದ ಭಾಗದಲ್ಲಿ, 'ನನ್ನನ್ನು ಉಲ್ಲೇಖಿಸಿ ಪದೇ ಪದೇ ಸುಳ್ಳು ಹೇಳಿಕೆಗಳನ್ನು ಕೊಟ್ಟಾಗಲೂ ನಾನು ಮೌನಿಯಾಗಿರುತ್ತಿದ್ದುದು ಈಗ ನನಗೇನೇ ಮಾರಕವಾಗಿದೆ. ನನ್ನ ಮೌನ ಸುಳ್ಳುಗಳನ್ನು ನನ್ನತ್ತ ಉಗಿಯುವ ಮಟ್ಟಕ್ಕೆ ತಂದು ನಿಲ್ಲಿಸಿದೆ ಅನ್ನೋದು ನಿಜ. ಆದರೆ ಅದು ಇವತ್ತಿಗೆ ಕೊನೆಯಾಗಬೇಕು,' ಎಂದು ಸಿಡುಕಿ ಇನ್ನೊಂದಿಷ್ಟು ವಿಚಾರಗಳನ್ನು ಮುಂದಿಟ್ಟು ಉದ್ದಕ್ಕೆ ಬರೆದುಕೊಂಡಿದ್ದರು.
ಎಚ್ಚೆತ್ತುಕೊಂಡ ಫಾರೂಖ್
ಅನುಷ್ಕಾ ಶರ್ಮಾ ಮುನಿದು ಮಾಡಿದ್ದ ಮಾರುದ್ದದ ಟ್ವೀಟ್, ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಕೂಡ ಫಾರೂಖ್ ಹೇಳಿಕೆ ಸುಳ್ಳೆಂದು ಪ್ರತಿಕ್ರಿಯಿಸಿದ ಬಳಿಕ ಎಚ್ಚೆತ್ತುಕೊಂಡ ಫಾರೂಖ್, ಆ ಕ್ಷಣ ನಾನು ನೀಡಿದ್ದ ಹೇಳಿಕೆ ಬರೀ ಆಕ್ಷಣಕ್ಕಷ್ಟೇ ಬಂದಿದ್ದು. ಆ ಸಂದರ್ಭದಲ್ಲಿ ಹಾಗೆ ಮಾತಾಡಿ ಹೋಯಿತಷ್ಟೇ. ಅದರ ಹಿಂದೆ ಅನುಷ್ಕಾ ಅವರನ್ನು ಕೀಳಾಗಿ ಬಿಂಬಿಸುವ ಉದ್ದೇಶವಿರಲಿಲ್ಲ ಎಂದು ಮಾತು ತಿರುಗಿಸಿದ್ದಾರೆ.
ಅನುಷ್ಕಾ ಒಬ್ಬಳು ಮೆಚ್ಚಿನ ಹುಡುಗಿ
'ಆ ಕ್ಷಣಕ್ಕೆ ಬಂದುಹೋದ ಹೇಳಿಕೆಯನ್ನು ಮುಂದಿಟ್ಟು ಇಲಿಗಾಗಿ ಬೆಟ್ಟ ಅಗೆಯುವ ಕೆಲಸಕ್ಕೆ ಇಳಿಯೋದು ಬೇಡ. ಬಡಪಾಯಿ ಅನುಷ್ಕಾ ಅವರನ್ನು ಹೇಳಿಕೆಯಲ್ಲಿ ಎಳೆದು ತಂದೆ. ಆಕೆ ಒಬ್ಬಳು ಪ್ರೀತಿಯ ಹುಡುಗಿ, ವಿರಾಟ್ ಕೊಹ್ಲಿ ಚತುರ ನಾಯಕ, ಕೋಚ್ ರವಿ ಶಾಸ್ತ್ರಿ ಕೂಡ ಅತ್ಯುತ್ತಮವಾಗಿದ್ದಾರೆ. ಹೀಗಾಗಿ ಪ್ರಕರಣವನ್ನು ಮುಂದಕ್ಕೆಳೆಯೋದು ಬೇಡ,' ಎಂದು ಇಂಜಿನಿಯರ್ ರಿಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.