ವಿರಾಟ್ ಬಗ್ಗೆ ಮಂಜ್ರೇಕರ್ ಪ್ರಶಂಸೆಯ ಮಾತು
ಆದರೆ ವಿರಾಟ್ ಕೊಹ್ಲಿ ತಂಡದ ಆಟಗಾರನಿಗೆ ನೀಡಿದ ಬೆಂಬಲದ ಬಗ್ಗೆ ಸಂಜಯ್ ಮಂಜ್ರೇಕರ್ ಮೆಚ್ಚುಗೆಯನ್ನು ವ್ಯಕ್ತಡಿಸಿದ್ದಾರೆ. "ಕಾರಣ ಏನೇ ಇರಲಿ ನಾನು ಅದನ್ನು ಇಷ್ಟಪಟ್ಟಿದ್ದೇನೆ. ಯಾಕೆಂದರೆ ನನ್ನ ವೃತ್ತಿ ಜೀವನದ ಸಂದರ್ಭದಲ್ಲಿ ಯಾವ ನಾಯಕ ಕೂಡ ಎದುರಾಳಿ ಬೌಲರ್ಗಳು ಪ್ರತಿ ದಾಳಿ ನಡೆಸಬಹುದು ಎಂದು ಹೆದರಿ ಈ ರೀತಿ ಮಾಡಿರಲಿಲ್ಲ. ಅದುವೇ ವಿರಾಟ್ ಕೊಹ್ಲಿಯ ಶ್ರೇಷ್ಠ ವ್ಯಕ್ತಿತ್ವ. ಆತ ನಿಜವಾಗಿಯೂ ಆಕ್ರಮಣಕಾರಿ ಮತ್ತು ನಿರ್ಭೀತ ನಾಯಕ. ಏನಿದ್ದರೂ ಆತ ತನ್ನ ಭಾವನೆಯ ಮೂಲಕ ವ್ಯಕ್ತಪಡಿಸುವ ಆಟಗಾರ. ಅಂತಿಮವಾಗಿ 3ನೇ ದಿನದಾಟದ ಅಂತ್ಯದಲ್ಲಿ ಇದು ಜೇಮ್ಸ್ ಆಂಡರ್ಸನ್ ಮೇಲೆ ಪರಿಣಾಮ ಬೀರಿತ್ತು. ಪ್ರತಿಸ್ಪರ್ಧುಯಾಗಿ ಆತ ತನ್ನ ತಾಳ್ಮೆಯನ್ನು ಕಳೆದುಕೊಂಡಿದ್ದ. ಅದು ಆತನ ಅಹಂಗೂ ಘಾಸಿ ಮಾಡಿದ್ದು ನನಗೆ ಕಾಣಿಸಿತ್ತು" ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
ಆರಂಭಿಕರ ಪ್ರದರ್ಶನಕ್ಕೆ ಮಂಜ್ರೇಕರ್ ಮೆಚ್ಚುಗೆ
ಇನ್ನು ಇದೇ ಸಂದರ್ಭದಲ್ಲಿ ಸಂಜಯ್ ಮಂಜ್ರೇಕರ್ ಈ ಸರಣಿಯಲ್ಲಿ ಟೀಮ್ ಇಂಡಿಯಾದ ಆರಂಬಿಕ ಆಟಗಾರರಾಗಿ ಕಣಕ್ಕಿಳಿಯುತ್ತಿರುವ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಪ್ರದರ್ಶನಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾಗೆ ಈ ಜೋಡಿ ನೀಡುತ್ತಿರುವ ಪ್ರದರ್ಶನ ಅನಿರೀಕ್ಷಿತ ಬೋನಸ್ ಎಂದು ಬಣ್ಣಿಸಿದ್ದಾರೆ. ಎರಡು ತಂಡಗಳ ನಡುವಿನ ವ್ಯತ್ಯಾಸಕ್ಕೂ ಕೂಡ ಈ ಆರಂಭಿಕ ಜೋಡಿಯೇ ಕಾರಣ ಎಂದು ಮಂಜ್ರೇಕರ್ ಹೇಳಿದ್ದಾರೆ.
ಮಂಜ್ರೇಕರ್ ಬಾಯಿ ಮುಚ್ಚಿಸಿದ ರಾಹುಲ್
ಇನ್ನು ಟೀಮ್ ಇಂಡಿಯಾ ಆರಂಭಿಕನಾಗಿ ಈ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿರುವ ಕೆಎಲ್ ರಾಹುಲ್ ಬಗ್ಗೆ ಸಂಜಯ್ ಮಂಜ್ರೇಕರ್ ಸಾಕಷ್ಟು ನಕಾರಾತ್ಮ ಮಾತುಗಳನ್ನು ಆಡುವ ಮೂಲಕ ಟೀಕಿಸಿದ್ದರು. ಮೊದಲ ಪಂದ್ಯದಲ್ಲಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದ ಬಳಿಕವೂ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್ಗೆ ಸೂಕ್ತವಾದ ಆಟಗಾರನಲ್ಲ. ಆತ ಈ ಹಿಮದಿನ ಸರಣಿಯಲ್ಲಿ ಉತ್ತಮ ಆಟವನ್ನು ಪ್ರದರ್ಶಿಸಿಲ್ಲ. ಹೀಗಾಗಿ ಆತನ ಬದಲಿಗೆ ಬೇರೆ ಯಾರಾದರೂ ಆಟಗಾರನಿಗೆ ಅವಕಾಶ ನೀಡುವುದು ಸೂಕ್ತ ಎಂದು ಹೇಳಿಕೆಯನ್ನು ನೀಡಿದ್ದರು. ಸಂಜಯ್ ಮಂಜ್ರೇಕರ್ ಅವರ ಈ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಆದರೆ ಕೆಎಲ್ ರಾಹುಲ್ ಈ ಎಲ್ಲಾ ಮಾತುಗಳಿಗೂ ತಮ್ಮ ಬ್ಯಾಟ್ ಮೂಲಕವೇ ಉತ್ತರವನ್ನು ನೀಡಿದ್ದಾರೆ. ಲಾರ್ಡ್ಸ್ ಟೆಸ್ಟ್ನಲ್ಲಿ ಕನ್ನಡಿಗ ಆಟಗಾರ ಭರ್ಜರಿ ಶತಕವನ್ನು ಸಿಡಿಸಿ ತಂಡದ ಮೇಲುಗೈಗೆ ಕಾರಣವಾದರು. ಈ ಮೂಲಕ ಪಂದ್ಯದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ ಕೆ ಎಲ್ ರಾಹುಲ್. ಈ ಕಾರಣದಿಂದಾಗಿಯೇ ಲಾರ್ಡ್ಸ್ ಅಂಗಳದಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ.
ಮೂರನೇ ಪಂದ್ಯಕ್ಕೆ ಸಜ್ಜು
ಸರಣಿಯಲ್ಲಿ ಎರಡು ಪಂದ್ಯಗಳು ಈಗಾಗಲೇ ಅಂತ್ಯವಾಗಿದ್ದು ಭಾರತ 1-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಈಗ ಮೂರನೇ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಲೀಡ್ಸ್ನ ಹೆಡಿಂಗ್ಲೇಯಲ್ಲಿ ನಡೆಯಲಿರುವ ಮೂರನೇ ಪಂದ್ಯ ಆಗಸ್ಟ್ 25ರಿಂದ ಆರಂಭವಾಗಲಿದೆ. ಈ ಪಂದ್ಯವನ್ನು ಕೂಡ ಗೆದ್ದು ಸರಣಿಯಲ್ಲಿ ಮತ್ತಷ್ಟಯು ಬಿಗಿಹಿಡಿತ ಸಾಧಿಸಲು ಭಾರತ ತಂಡ ಪ್ರಯತ್ನ ಪಟ್ಟರೆ ಆತಿಥೇಯ ಇಂಗ್ಲೆಂಡ್ ಮುಂದೆ ಸರಣಿಯನ್ನು ಸಮಬಲಗೊಳಿಸಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ಈ ಪಂದ್ಯದ ಮೇಲೆ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.