ನವದೆಹಲಿ, ಡಿಸೆಂಬರ್ 5: ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರು ಮಂಗಳವಾರ (ಡಿಸೆಂಬರ್ 4) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ಗಂಭೀರ್ಗೆ ನಟ ಶಾರೂಖ್ ಖಾನ್ ಕಳುಹಿಸಿರುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.
ದೆಹಲಿ ಸುಲ್ತಾನ ಗಂಭೀರ ವದನ ಗೌತಮ ತಿವಿಕ್ರಮ
ಬಾಲಿವುಡ್ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲಕರೂ ಆದ ಶಾರೂಖ್, ಕ್ರಿಕೆಟ್ಗೆ ವಿದಾಯ ಹೇಳಿದ ಗಂಭೀರ್ ಅವರಿಗೆ ಬರೀ ಅಭಿನಂದಿಸಿ ಶುಭ ಕೋರಿಲ್ಲ, ಬದಲಿಗೆ ಗಂಭೀರ್ ಅವರನ್ನು ವಿಶೇಷ ವ್ಯಕ್ತಿಯನ್ನಾಗಿ ಪರಿಗಣಿಸಿದ್ದಾರೆ. ಶಾರೂಖ್ ಮೆಸೇಜ್ ಆಕರ್ಷಿಸಿದ್ದು ಇದೇ ಕಾರಣಕ್ಕೆ.
@GautamGambhir Thank u for the love & leadership my Captain.U r a special man and may Allah always keep & happy…& u should smile a bit more
— Shah Rukh Khan (@iamsrk) December 4, 2018
ಗಂಭೀರ್ ಗೆ ಪ್ರೀತಿಯಿಂದ ಟ್ವೀಟ್ ಮಾಡಿರುವ ಶಾರೂಖ್, ತಂಡದ ಮುಂದಾಳತ್ವಕ್ಕೆ ಮತ್ತು ಪ್ರೀತಿಗೆ ಧನ್ಯವಾದಗಳು ನನ್ನ ನಾಯಕನೆ. ವಿಶೇಷ ವ್ಯಕ್ತಿಯಾದ ನಿನ್ನನ್ನು ದೇವರು (ಅಲ್ಲಾ) ಖುಷಿಯಾಗಿಟ್ಟಿರಲಿ. ನೀನಿನ್ನೂ ನಗುವಂತಾಗಲಿ' ಎಂದು ಬರೆದುಕೊಂಡಿದ್ದಾರೆ.
ಮೊದಲ ಟೆಸ್ಟ್ಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಕಟ
ಎಡಗೈ ಬ್ಯಾಟ್ಸ್ ಮನ್ ಗಂಭೀರ್, ಭಾರತ ಪರ 58 ಟೆಸ್ಟ್ ನಲ್ಲಿ 41.95ರನ್ ಸರಾಸರಿಯಂತೆ 4154ರನ್, 147 ಏಕದಿನ ಪಂದ್ಯದಲ್ಲಿ 5238ರನ್ ಹಾಗೂ 37 ಟಿ20ಐ ಪಂದ್ಯಗಳಲ್ಲಿ 932ರನ್, ಒಟ್ಟಾರೆ, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 10,324 ರನ್ ಗಳಿಸಿದ ಸಾಧನೆ ಹೊಂದಿದ್ದಾರೆ.