ಬಾಬರ್ ಹೇಳಿದ್ದಿಷ್ಟು
ಶಾಹಿನ್ ಅಫ್ರಿದಿ ಗಾಯದ ಸಮಸ್ಯೆಯ ಕುರಿತು ನೆದರ್ಲೆಂಡ್ಸ್ ವಿರುದ್ಧದ ಏಕದಿನ ಸರಣಿಗೂ ಮುನ್ನ ನಡೆದ ಸಂದರ್ಶನದಲ್ಲಿ ಮಾತನಾಡಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಶಾಹಿನ್ ಆಫ್ರಿದಿ ಚಿಕಿತ್ಸೆಗಾಗಿ ವೈದ್ಯರನ್ನು ಕರೆತರುವುದಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿದ ಬಾಬರ್ ಅಜಮ್ ಬಾಬರ್ ಅಜಮ್ಗೆ ವಿಶ್ರಾಂತಿಯ ಅಗತ್ಯವಿದ್ದು, ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ ಸಮಯ ಬೇಕಿದೆ, ಆತನ ಫಿಟ್ನೆಸ್ ಮತ್ತು ಆರೋಗ್ಯ ಇನ್ನೂ ದೀರ್ಘಕಾಲ ತಂಡಕ್ಕೆ ಬೇಕಾಗಿದ್ದು ನೆದರ್ಲೆಂಡ್ಸ್ ವಿರುದ್ಧದ ಕನಿಷ್ಟ ಎರಡು ಏಕದಿನ ಸರಣಿಯಲ್ಲಾದರೂ ವಿಶ್ರಾಂತಿ ನೀಡಲಿದ್ದೇವೆ ಹಾಗೂ ಈ ಮೂಲಕ ಅವರು ಏಷ್ಯಾಕಪ್ಗೂ ಮುನ್ನ ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಹೀಗೆ ಬಾಬರ್ ಅಜಮ್ ನೀಡಿರುವ ಹೇಳಿಕೆಯಿಂದ ಶಾಹಿನ್ ಅಫ್ರಿದಿ ಸಂಪೂರ್ಣ ಫಿಟ್ ಆಗಿಲ್ಲ ಎಂಬುದು ತಿಳಿದುಬಂದಿದ್ದು ಗಾಯದ ತೀವ್ರತೆ ಏಷ್ಯಾಕಪ್ವರೆಗೂ ಮುಂದುವರೆದು ಚೇತರಿಸಿಕೊಳ್ಳದಿದ್ದರೆ ಅಫ್ರಿದಿ ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ.
ಏಷ್ಯಾಕಪ್ಗೆ ಪ್ರಕಟವಾಗಿರುವ ಪಾಕ್ ತಂಡ
ಬಾಬರ್ ಅಜಮ್ ( ನಾಯಕ ) ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್ ( ವಿಕೆಟ್ ಕೀಪರ್ ), ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ, ಶಹನವಾಜ್ ದಹಾನಿ, ಉಸ್ಮಾನ್ ದಹಾನಿ.
ಏಷ್ಯಾಕಪ್ಗೆ ಪ್ರಕಟವಾದ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ ( ವಿಕೆಟ್ ಕೀಪರ್ ), ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.
ಹೆಚ್ಚುವರಿ ಆಟಗಾರರು: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಹಾರ್.