ಕೊಹ್ಲಿ, ರೋಹಿತ್ಗೆ ಜಾಗವಿಲ್ಲ
ಶೇನ್ ವಾರ್ನ್ ಹೆಸರಿಸಿದ ಈ ತಂಡವನ್ನು ನೋಡಿದರೆ ನಿಮಗೆ ದೊಡ್ಡ ಶಾಕ್ ಉಂಟಾದರೆ ಅಚ್ಚರಿಯಿಲ್ಲ. ಆದಕ್ಕೆ ಕಾರಣ ಟೀಮ್ ಇಂಡಿಯಾದಲ್ಲಿ ಸದ್ಯ ಮಿಂಚು ಹರಿಸುತ್ತಿರುವ ಆಟಗಾರ ವಿರಾಟ್ ಕೊಹ್ಲಿಯ ಹೆಸರಿಲ್ಲದಿರವುದು. ವಿರಾಟ್ ಮಾತ್ರವಲ್ಲ ಟೀಮ್ ಇಂಡಿಯಾದ ಮತ್ತೋರ್ವ ಆಟಗಾರ ರೋಹಿತ್ ಶರ್ಮಾ ಕೂಡ ಈ ತಂಡದಲ್ಲಿ ಜಾಗವನ್ನು ಪಡೆದುಕೊಂಡಿಲ್ಲ.
ವಿಕೆಟ್ ಕೀಪರ್ ಧೋನಿ ಅಲ್ಲ ನಯನ್ ಮೋಂಗಿಯಾ
ಈ ತಂಡ ಮತ್ತೊಂದು ಅಚ್ಚರಿಯೇನೆಂದರೆ ವಿಕೆಟ್ ಕೀಪಿಂಗ್. ಟೀಮ್ ಇಂಡಿಯಾ ಕಂಡ ಅದ್ಭುತ ವಿಕೆಟ್ ಕೀಪರ್ ಫಿನಿಷರ್ ಧೋನಿ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಈ ಸ್ಥಾನವನ್ನು ಶೇನ್ ವಾರ್ನ್ ಧೋನಿಗೆ ನೀಡಿಲ್ಲ. ಧೋನಿ ಕೂಡ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿಲ್ಲ. ನಯನ್ ಮೋಂಗಿಯಾ ಈ ತಂಡದ ವಿಕೆಟ್ ಕೀಪರ್ ಆಗಿದ್ದಾರೆ.
ಸೆಹ್ವಾಗ್ಗೆ ಸಿದ್ದು ಜೊತೆಗಾರ
ಆರಂಭಿಕನಾಗಿ ವೀರೆಂದ್ರ ಸೆಹ್ವಾಗ್ ಅವರಿಗೆ ವಾರ್ನ್ ನವಜೋತ್ ಸಿಂಗ್ ಸಿದ್ದು ಅವರನ್ನು ಆಯ್ಕೆ ಮಾಡಿದ್ದಾರೆ. ಅದಾದ ಬಳಿಕದ ಸ್ಥಾನವನ್ನು ಕ್ರಮವಾಗಿ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಮೊಹಮದ್ ಅಜರುದ್ದೀನ್ ಮತ್ತು ಸೌರವ್ ಗಂಗೂಲಿಗೆ ನೀಡಿದ್ದಾರೆ.
ಸೌರವ್ ಗಂಗೂಲಿ ನಾಯಕ
ಶೇನ್ ವಾರ್ನ್ ಹೆಸರಿಸಿದ ಈ ಸಾರ್ವಕಾಲಿಕ ತಂಡದ ನಾಯಕತ್ವವನ್ನು ಸೌರವ್ ಗಂಗೂಲಿಗೆ ನೀಡಲಾಗಿದೆ. ನಾಯಕತ್ವದಲ್ಲಿ ಸೌರವ್ ಗಂಗೂಲಿಗೆ ಜಿದ್ದಾಜಿದ್ದಿ ನೀಡಬಲ್ಲ ಮೂವರು ಆಟಗಾರರಿದ್ದಾರೆ. ಅಜರುದ್ದೀ್ ಜೊತೆಗೆ ಕಪಿಲ್ ದೇವ್ ಕೂಡ ಈ ತಂಡದಲ್ಲಿದ್ದಾರೆ.
ಬೌಲಿಂಗ್ ವಿಭಾಗ
ಬೌಲಿಂಗ್ ವಿಭಾಗದಲ್ಲಿ ಕಪಿಲ್ ದೇವ್ ಜೊತೆಗೆ ಜಾವಗಲ್ ಶ್ರೀನಾಥ್, ಹರ್ಭಜನ್ ಸಿಂಗ್ ಮತ್ತು ಅನಿಲ್ ಕುಂಬ್ಳೆಯವರನ್ನು ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಆಯ್ಕೆ ಮಾಡಿದ್ದಾರೆ.
ಕೊಹ್ಲಿ ಧೋನಿ ಕೈಬಿಡಲು ಕಾರಣವಿದೆ
ಈ ತಂಡವನ್ನು ನೋಡಿದರೆ ಸಹಜವಾಗಿಯೇ ಅಚ್ಚರಿಗೆ ಕಾರಣವಾಗುತ್ತದೆ. ಪ್ರಸಕ್ತ ಯಾವ ಆಟಗಾರನೂ ಈ ತಂಡದಲ್ಲಿಲ್ಲದಿರುವುದು ಅದಕ್ಕೆ ಕಾರಣ. ರನ್ ಮಷೀನ್ ಕೊಹ್ಲಿ, ಧೋನಿ ಅವರಿಗೆ ಸ್ಥಾನವಿಲ್ಲ. ಅದಕ್ಕೆ ಕಾರಣವನ್ನು ನೀಡಿದ್ದಾರೆ ಶೇನ್ ವಾರ್ನ್. ಶೇನ್ ವಾರ್ನ್ ಆಡುತ್ತಿದ್ದ ಕಾಲದ ಆಟಗಾರರನ್ನು ಮಾತ್ರವೇ ತಾನು ಈ ತಂಡದಲ್ಲಿ ಆಯ್ಕೆ ಮಾಡಿದ್ದೇನೆ ಎಂದು ಕಾರಣವನ್ನು ನೀಡಿದ್ದಾರೆ ವಾರ್ನ್.
ವಾರ್ನ್ ತಂಡ ಹೀಗಿದೆ
ವೀರೇಂದ್ರ ಸೆಹ್ವಾಗ್, ನವಜೋತ್ ಸಿಂಗ್ ಸಿಧು, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ (ನಾಯಕ), ಕಪಿಲ್ ದೇವ್, ನಯನ್ ಮೊಂಗಿಯಾ (ವಿಕೆಟ್ ಕೀಪರ್), ಹರ್ಭಜನ್ ಸಿಂಗ್, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ.