ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧವನ್‌ ಫಿಟ್ನೆಸ್‌ ಬಗ್ಗೆ ಕೊನೆಗೂ ಮಾತನಾಡಿದ ಕ್ಯಾಪ್ಟನ್‌ ಕೊಹ್ಲಿ!

ICC World Cup 2019 : ಧವನ್ ಫಿಟ್ನೆಸ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ವಿರಾಟ್..! | Oneindia Kannada
Shikhar Dhawan motivated, want to keep him back: Virat Kohli

ನಾಟಿಂಗ್‌ಹ್ಯಾಮ್‌, ಜೂನ್‌ 13: ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಕೊನೆಗೂ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಅವರ ಫಿಟ್ನೆಸ್‌ ಕುರಿತಾಗಿ ಮಾತನಾಡಿದ್ದು, ಧವನ್‌ ಚೇತರಿಸಿಕೊಂಡು ವಿಶ್ವಕಪ್‌ನಲ್ಲಿ ತಂಡಕ್ಕೆ ತಮ್ಮ ಸೇವೆ ಮುಂದುವರಿಸುತ್ತಾರೆಂಬ ಆಶಾಭಾವನೆ ವ್ಯಕ್ತ ಪಡಿಸಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಪ್ರಸಕ್ತ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್‌ ನಡುವಣ ಪಂದ್ಯ ಮಳೆಯಿಂದಾಗಿ ಟಾಸ್‌ ಕೂಡ ಕಾಣದಂತೆ ರದ್ದಾಯಿತು. ಟೂರ್ನಿಯಲ್ಲಿ ಇದು ಸೇರಿ ಒಟ್ಟು ನಾಲ್ಕು ಪಂದ್ಯಗಳು ಮಳೆಗೆ ಆಹುತಿಯಾಗಿವೆ. ಪಂದ್ಯ ಅಧಿಕೃತವಾಗಿ ರದ್ದಾದ ಬಳಿಕ ಮಾತನಾಡಿದ ನಾಯಕ ವಿರಾಟ್‌ ಶಿಖರ್‌ ಧವನ್‌ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಗಾಯಾಳುಗಳಿಂದ ಕಳೆಗುಂದಿತೆ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ?ಗಾಯಾಳುಗಳಿಂದ ಕಳೆಗುಂದಿತೆ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ?

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಜಯದ ರೂವಾರಿ ಎನಿಸಿದ ಶಿಖರ್‌ ಧವನ್‌, ಪ್ಯಾಟ್‌ ಕಮಿನ್ಸ್‌ ಅವರ ಬೌಲಿಂಗ್‌ನಲ್ಲಿ ಹೆಬ್ಬೆರಳಿಗೆ ಪೆಟ್ಟು ತಿಂದಿದ್ದರು. ಬಳಿಕ ಅವರ ಗಾಯದ ಸಮಸ್ಯೆ ಗಂಭೀರವಾಗಿದ್ದ ಕಾರಣ, ಕಾಯ್ದಿರಿಸಲ್ಪಟ್ಟ ಆಟಗಾರ ರಿಷಭ್‌ ಪಂತ್‌ಗೆ ತಂಡ ಸೇರಿಕೊಳ್ಳುವಂತೆ ಬುಲಾವ್‌ ನೀಡಲಾಯಿತು. ಮುನ್ನೆಚ್ಚರಿಕೆಯ ಕ್ರಮವಾಗಿ ಬಿಸಿಸಿಐ ಈಗಾಗಲೇ ಪಂತ್‌ ಅವರನ್ನು ಇಂಗ್ಲೆಂಡ್‌ಗೆ ಕಳುಹಿಸಿದೆ.

ಪಾಕ್‌ ಅಭಿಮಾನಿಗೆ ಸೋಷಿಯಲ್‌ ಮೀಡಿಯಾದಲ್ಲಿ ಶೇಪ್‌ ಔಟ್‌!ಪಾಕ್‌ ಅಭಿಮಾನಿಗೆ ಸೋಷಿಯಲ್‌ ಮೀಡಿಯಾದಲ್ಲಿ ಶೇಪ್‌ ಔಟ್‌!

"ಒಂದೆರಡು ವಾರಗಳ ಕಾಲ ಶಿಖರ್‌ ತಮ್ಮ ಕೈಗೆ ಪ್ಲಾಸ್ಟರ್‌ ತೊಡಲಿದ್ದಾರೆ. ಲೀಗ್‌ ಹಂತದ ಕೊನೆಯ ಪಂದ್ಯಗಳು ಮತ್ತು ಸೆಮಿಫೈನಲ್ಸ್‌ಗೆ ಅವರ ಸೇವೆ ಲಭ್ಯವಾಗುತ್ತದೆ ಎಂಬ ಆಶಯದಲ್ಲಿದ್ದೇವೆ. ಅವರು ಕೂಡ ಚೇತರಿಸುವ ಆತ್ಮವಿಶ್ವಾಸದಲ್ಲಿದ್ದಾರೆ. ಹೀಗಾಗಿ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಿದ್ದೇವೆ,'' ಎಂದು ವಿರಾಟ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಶ್ವಕಪ್‌: ಮಳೆಗೆ ಕೊಚ್ಚಿಹೋದ ಭಾರತ vs ನ್ಯೂಜಿಲೆಂಡ್ ಪಂದ್ಯ ವಿಶ್ವಕಪ್‌: ಮಳೆಗೆ ಕೊಚ್ಚಿಹೋದ ಭಾರತ vs ನ್ಯೂಜಿಲೆಂಡ್ ಪಂದ್ಯ

ಇದೇ ವೇಳೆ ಭಾನುವಾರ (ಜೂನ್‌ 16) ನಡೆಯಲಿರುವ ಇಂಡೊ-ಪಾಕ್‌ ಪಂದ್ಯದ ಕುರಿತಾಗಿಯೂ ಮಾತನಾಡಿದ ಕೊಹ್ಲಿ, "ನಮ್ಮ ಗೇಮ್‌ ಪ್ಲಾನ್‌ ಏನಿದ್ದರೂ ಅಲ್ಲಿ ಹೋಗಿ ಉತ್ತಮ ಆಟವಾಡುವುದಷ್ಟೇ. ನಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಜಯ ದಾಖಲಿಸುವುದನ್ನು ಎದುರು ನೋಡುತ್ತಿದ್ದೇವೆ. ವಿಶ್ವಕಪ್‌ನಂತಹ ಟೂರ್ನಿಯಲ್ಲಿ ಇಷ್ಟು ಮಹತ್ವದ ಪಂದ್ಯವನ್ನಾಡುವುದು ನಮ್ಮ ತಂಡದ ಶ್ರೇಷ್ಠ ಪ್ರದರ್ಶನವನ್ನು ಹೊರತರುವಂತೆ ಮಾಡುತ್ತದೆ,'' ಎಂದಿದ್ದಾರೆ.

{headtohead_cricket_3_5}

Story first published: Friday, June 14, 2019, 6:41 [IST]
Other articles published on Jun 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X