ಆಯ್ಕೆಗಾರರರೇ ನಿರ್ಧರಿಸುತ್ತಾರೆ
ಆಟದ ಕ್ರಮಾಂಕದ ವಿಚಾರದಲ್ಲಿ ಸ್ಪರ್ಧೆಗಳಿರುವುದು ನಿಜಕ್ಕೂ ಉತ್ತಮವಾದ ವಿಚಾರವೇ ಆಗಿದೆ. ಆದರೆ ತಂಡಕ್ಕೆ ಆಯ್ಕೆಯಾಗುವ ಸಂಗತಿ ನಮ್ಮ ಕೈಯ್ಯಲ್ಲಿ ಇಲ್ಲ. ಅದು ಆಯ್ಕೆಗಾರರೇ ನಿರ್ಣಯಿಸುತ್ತಾರೆ. ನಮ್ಮ ಕೆಲಸ ಉತ್ತಮವಾಗಿ ರನ್ ಗಳಿಸುವುದು. ಸಿಕ್ಕ ಅವಕಾಶವನ್ನು ಅದ್ಭುತವಾಗಿ ಉಪಯೋಗಿಸಿಕೊಳ್ಳುವುದಾಗಿದೆ ಎಂದು ಶಿಖರ್ ಧವನ್ ಹೇಳಿದ್ದಾರೆ.
ಟಿ20 ವಿಶ್ವಕಪ್ ನನ್ನ ಗುರಿ
ನಾನು ಟಿ20 ವಿಶ್ವಕಪ್ನ್ನು ಗುರಿಯಾಗಿಟ್ಟುಕೊಂಡಿದ್ದೇನೆ. ಅದಕ್ಕಾಗಿ ತಯಾರಿಯನ್ನು ನಡೆಸುತ್ತಿದ್ದೇನೆ. ನನ್ನ ಫಿಟ್ನೆಸ್ ಬಗ್ಗೆಯೂ ನಾನು ಸಾಕಷ್ಟು ಗಮನ ನೀಡುತ್ತಿದ್ದೇನೆ. ಯಾವಾಗ ನನಗೆ ಆಡುವ ಅವಕಾಶ ಸಿಗುತ್ತದೋ ನಾನು ಆಗ ಆಡಲು ಸಿದ್ಧನಾಗಿದ್ದೇನೆ ಎಂದು ಶಿಖರ್ ಧವನ್ ಹೇಳಿಕೆಯನ್ನು ನೀಡಿದ್ದಾರೆ.
ಗಾಯಗೊಳ್ಳುವುದು ವಾಪಾಸ್ಸಾಗುವುದೇ ಆಯ್ತು
ಆಯ್ಕೆ ಯಾಗುವುದು ನನ್ನ ಕೈಯ್ಯಲ್ಲಿ ಇಲ್ಲ. ನಾನು ಉತ್ತಮ ಪ್ರದರ್ಶನ ನೀಡಬೇಕು. ಕಳೆದ ಒಂದು ವರ್ಷದಲ್ಲಿ ಹಲವಾರು ಬಾರಿ ಗಾಯಗೊಂಡು ಮತ್ತೆ ತಂಡಕ್ಕೆ ವಾಪಾಸ್ ಬರುವುದೇ ಆಗಿ ಹೋಯ್ತು. ಆಟದಲ್ಲಿ ಇದೆಲ್ಲಾ ಒಂದು ಭಾಗ ಎಂದು ಶಿಖರ್ ಧವನ್ ಹೇಳಿದ್ದಾರೆ. ಇರ್ಫಾನ್ ಪಠಾಣ್ ಜೊತೆಗೆ ಇನ್ಸ್ಟಾಗ್ರಾಮ್ ಲೈವ್ಗೆ ಬಂದಿದ್ದ ಶಿಖರ್ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
2019 ಧವನ್ ಪಾಲಿಗೆ ಕಠಿಣ
ಶಿಖರ್ ಧವನ್ಗೆ 2019 ನಿಜಕ್ಕೂ ದೊಡ್ಡ ಸವಾಲಾಗಿತ್ತು. ಗಾಯ ದೊಡ್ಡ ಮಟ್ಟದಲ್ಲಿ ಧವನ್ಗೆ ಕಾಡಿದರೆ ಪ್ರದರ್ಶನದಲ್ಲೂ ಧವನ್ ಕಳೆಗುಂದಿದಂತೆ ಕಂಡು ಬಂದಿದ್ದರು. 12 ಪಂದ್ಯಗಳಲ್ಲಿ ಧವನ್ 22ರ ಸರಾಸರಿಯಲ್ಲಿ 272 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಟಿ20 ಕ್ರಿಕೆಟ್ನಲ್ಲಿ ಧವನ್ ಸ್ಟ್ರೈಕ್ರೇಟ್ ಕೂಡ ಸಾಕಷ್ಟು ಪ್ರಶ್ನೆಯನ್ನು ಹುಟ್ಟುಹಾಕಿತ್ತು. 110 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಲಷ್ಟೇ ಧವನ್ ಶಕ್ತರಾಗಿದ್ದರು.