ರಾಹುಲ್ ಅವರನ್ನು ನಾಯಕನನ್ನಾಗಿ ಮಾಡುವುದು ಸರಿಯಾದ ಕೆಲಸ
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನಡೆದ ಏಷ್ಯಾ ಕಪ್ 2022ರಲ್ಲಿ ಭಾರತ ತಂಡವನ್ನು ಮುನ್ನಡೆಸಲು ಕೆಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ಮಾಡುವುದು ಸರಿಯಾದ ಕೆಲಸ ಎಂದು ಶಿಖರ್ ಧವನ್ ಅಭಿಪ್ರಾಯಪಟ್ಟಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲು ಭಾರತದ ತಂಡದ ಹಂಗಾಮಿ ನಾಯಕ ಶಿಖರ್ ಧವನ್ ಸುದ್ದಿಗೋಷ್ಠಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಭಾರತ ತಂಡದ ನಾಯಕತ್ವ ವಹಿಸಲು ನಾನು ಅದೃಷ್ಟಶಾಲಿ
"ಮೊದಲನೆಯದಾಗಿ, ನನ್ನ ವೃತ್ತಿಜೀವನದ ಈ ಹಂತದಲ್ಲಿ ಭಾರತ ತಂಡದ ನಾಯಕತ್ವ ವಹಿಸಲು ನಾನು ಅದೃಷ್ಟಶಾಲಿಯಾಗಿದ್ದೇನೆ. ಸವಾಲುಗಳು ಮತ್ತು ಅವಕಾಶಗಳನ್ನು ಪಡೆದುಕೊಳ್ಳುವುದು ಒಳ್ಳೆಯ ಬೆಳವಣಿಗೆ. ನಾವು ಯುವ ಆಟಗಾರರು ಕೂಡಿದ ತಂಡದೊಂದಿಗೆ ಹಲವಾರು ಸರಣಿಗಳನ್ನು ಗೆದ್ದಿದ್ದೇವೆ," ಎಂದು ಶಿಖರ್ ಧವನ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರಾಹುಲ್ಗೆ ನಾಯಕತ್ವ ವಹಿಸಿದಾಗ ನನಗೆ ನೋವಾಗಲಿಲ್ಲ
"ಕೆಎಲ್ ರಾಹುಲ್ ಮುಖ್ಯ ತಂಡಕ್ಕೆ ಉಪನಾಯಕರಾಗಿದ್ದಾರೆ ಮತ್ತು ಅವರು ಗಾಯದಿಂದ ಹಿಂದಿರುಗಿದಾಗ, ಅವರು ನಾಯಕತ್ವವನ್ನು ಪಡೆಯಲು ಅರ್ಹರಾಗಿದ್ದಾರೆ. ಏಷ್ಯಾಕಪ್ ವೇಳೆ ರೋಹಿತ್ ಶರ್ಮಾ ಗಾಯಗೊಂಡರೆ ಕೆಎಲ್ ರಾಹುಲ್ ನಾಯಕತ್ವ ವಹಿಸಬೇಕಾಗಬಹುದು ಎಂದು ನನಗೆ ಅನಿಸಿತ್ತು. ಆದ್ದರಿಂದ, ಅದು ಸರಿಯಾದ ನಿರ್ಧಾರವಾಗಿತ್ತು," ಎಂದು ಶಿಖರ್ ಧವನ್ ಹೇಳಿದರು.
"ಜಿಂಬಾಬ್ವೆ ವಿರುದ್ಧ ಕೆಎಲ್ ರಾಹುಲ್ಗೆ ನಾಯಕತ್ವ ವಹಿಸಿದಾಗ ನನಗೆ ನೋವಾಗಲಿಲ್ಲ. ಇದು ದೇವರ ಯೋಜನೆ ಮತ್ತು ಎಲ್ಲರಿಗೂ ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ನಾನು ದಕ್ಷಿಣ ಆಫ್ರಿಕಾ ಸರಣಿಯಲ್ಲಿ ನಾಯಕನಾಗಿದ್ದೆ ಅದಕ್ಕೆ ಆಯ್ಕೆದಾರರು ಕಾರಣ. ಹಾಗಾಗಿ ನನಗೆ ಬೇಸರವಾಗಲಿಲ್ಲ," ಎಂದು ಶಿಖರ್ ಧವನ್ ತಿಳಿಸಿದರು.
ಮೂರು ಟಿ20 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವ
ಶಿಖರ್ ಧವನ್ ಒಂಬತ್ತು ಏಕದಿನ ಪಂದ್ಯಗಳು ಮತ್ತು ಮೂರು ಟಿ20 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವವನ್ನು ವಹಿಸಿದ್ದಾರೆ. ಇದರಲ್ಲಿ ಅವರು ಎಂಟು ಪಂದ್ಯಗಳಲ್ಲಿ ಗೆಲುವನ್ನು ಕಂಡಿದ್ದಾರೆ.
ಲಿಸ್ಟ್ ಎ ಕ್ರಿಕೆಟ್ನಲ್ಲಿ 12,000 ರನ್ಗಳ ಅಂಚಿನಲ್ಲಿರುವ ಶಿಖರ್ ಧವನ್, ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಆರು ಏಕದಿನ ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದ ಭಾರತ ತಂಡದ ನಾಯಕತ್ವ ವಹಿಸಿದ್ದರು. ಇನ್ನು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಶುಕ್ರವಾರ, ನವೆಂಬರ್ 25ರಂದು ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆಯಲಿದೆ.