ಧವನ್ ಸ್ಥಾನಕ್ಕೆ ಬದಲಿ ಆಯ್ಕೆ ಇಲ್ಲ
ಧವನ್ ಅವರ ವೈದ್ಯಕೀಯ ವರದಿಗಾಗಿ ಇಂದು ಮುಂಜಾನೆಯವರೆಗೂ ಕಾದು ಬಳಿಕ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ ಧವನ್ ಬದಲಿಗೆ ಯಾರನ್ನು ಆಯ್ಕೆ ಮಾಡದೆ ನ್ಯೂಜಿಲ್ಯಾಂಡ್ಗೆ ತಂಡವನ್ನು ಕಳುಹಿಸುವ ತೀರ್ಮಾನಕ್ಕೆ ಬಂದಿದೆ.
ಪದೇ ಪದೆ ಗಾಯಗೊಳ್ಳುತ್ತಿರುವ ಧವನ್
ಟೀಮ್ ಇಂಡಿಯಾ ಆರಂಭಿಕ ಆಟಗಾರ ಶಿಖರ್ ದವನ್ ಪದೇ ಪದೆ ಗಾಯಗೊಳ್ಳುತ್ತಿದ್ದಾರೆ. ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಸಂದರ್ಭದಲ್ಲಿ ಗಾಯಗೊಂಡಿದ್ದ ಧವನ್ ವೆಸ್ಟ್ ಂಡೀಸ್ ವಿರುದ್ಧದ ಸರಣಿಯಿಂದ ಔಟ್ ಆಗಿದ್ದರು. ಬಳಿಕ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ತಂಡವನ್ನು ಸೇರಿಕೊಂಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲೂ ಗಾಯಗೊಂಡಿದ್ದರು. ಬಳಿಕ ಚೇತರಿಸಿಕೊಂಡು ಮೂರನೇ ಪಂದ್ಯಕ್ಕಿಳಿದ ಧವನ್ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದಾರೆ.
ಕೀವಿಸ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ದೌರ್ಬಲ್ಯ ಬಹಿರಂಗ ಪಡಿಸಿದ ವಿರಾಟ್ ಕೊಹ್ಲಿ!
ಓಪನರ್ ಆಗಿ ರಾಹುಲ್
ಶಿಖರ್ ಧವನ್ ಔಟ್ ಆದ ಹಿನ್ನೆಲೆಯಲ್ಲಿ ಆರಂಭಿಕನ ಸ್ಥಾನ ಮತ್ತೆ ಕೆಎಲ್ ರಾಹುಲ್ ಪಾಲಾಗುವುದು ಬಹುತೇಕ ಖಚಿತ. ಈಗಾಗಲೇ ಕೆಎಲ್ ರಾಹುಲ್ ಹೆಗಲಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಹೊರಿಸಲಾಗಿದೆ.
ಟೀಮ್ ಇಂಡಿಯಾ 'ಎ' ತಂಡದಿಂದ ಮೀಸಲು ಆಟಗಾರ?
ಶಿಖರ್ ಧವನ್ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ನ್ಯೂಜಿಲ್ಯಾಂಡ್ಗೆ ತೆರಳುವ ತಂಡದಲ್ಲಿ ಯಾವುದೇ ಆಟಗಾರನನ್ನೂ ಹೆಸರಿಸಿಲ್ಲ. ಆದರೆ ಈಗಾಗಲೇ ಭಾರತ 'ಎ' ತಂಡ ನ್ಯೂಜಿಲ್ಯಾಂಡ್ನಲ್ಲಿ ಸರಣಿಯಲ್ಲಿ ಪಾಲ್ಗೊಂಡಿರುವ ಕಾರಣದಿಂದಾಗಿ ಮಯಾಂಕ್ ಅಗರ್ವಾಲ್, ಸೂರ್ಯಕುಮಾರ್ ಯಾದವ್ ಅಥವಾ ಪೃಥ್ವಿ ಶಾ ಅವರನ್ನು ಸೇರ್ಪಡೆಗೊಳಿಸುವ ಸಾಧ್ಯತೆಯಿದೆ.