ವಧುವೇ ಇಲ್ಲದೆ ಮದುವೆಯಾದಂತೆ
ಪ್ರೇಕ್ಷಕರಿಲ್ಲದ ಮೈದಾನದಲ್ಲಿ ಆಡುವ ಬಗ್ಗೆ ಮಾತನಾಡಿದ ಅಖ್ತರ್, 'ಪ್ರೇಕ್ಷಕರಿಲ್ಲದೆ ಆಡುವುದನ್ನು ಯಾರೂ ಬಯಸುವುದಿಲ್ಲ. ಆದರೆ ಕರೋನ ಕಾರಣ ಎಲ್ಲವೂ ಬದಲಾಗಿದೆ. ಪ್ರೇಕ್ಷಕರು ಇಲ್ಲದೆ ಕ್ರಿಕೆಟ್ ಆಡುವುದು ಎಂದರೆ ಎಂದರೆ ವಧುವೇ ಇಲ್ಲದೆ ಮದುವೆ ಮಾಡಿದಂತೆ. ಪ್ರೇಕ್ಷಕರು ಆಟಗಾರರನ್ನು ಸ್ಟಾರ್ ಆಗಿ ಬದಲಾಯಿಸುತ್ತಾರೆ. ಪ್ರೇಕ್ಷಕರಿಲ್ಲದೆ ಆಡುವುದನ್ನು ಇದುವರೆಗೂ ಕಂಡಿಲ್ಲ,' ಎಂದು ಶೋಯೆಬ್ ಅಕ್ತರ್ ಹೇಳಿದ್ದಾರೆ.
ಟಿ20ಗಿಂತ ಟೆಸ್ಟ್ಗೆ ಆದ್ಯತೆ ನೀಡಿ
'ಈಗ ಕ್ರಿಕೆಟ್ ಬಹಳ ಹೆಚ್ಚಾಗಿದೆ. ಪ್ರವಾಸ ಕೂಡ ಬಹಳ ಹೆಚ್ಚಾಗಿದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವ ಅಗತ್ಯ ಕೂಡ ಜಾಸ್ತಿ ಆಗಿದೆ. ಮೊದಲಿನ ಹಾಗೆ ಇಲ್ಲ. ಈಗಿನ ಬೇಡಿಕೆಗೆ ಸಂಬಂಧಿಸಿದಂತೆ ಮುಂದುವರಿದ ಜಿಮ್ ಟ್ರೈನಿಂಗ್ ಬಹಳ ಅಗತ್ಯವಿದೆ. ಟಿ20 ಕಡಿಮೆ ಮಾಡಿ, ಟೆಸ್ಟ್ ಜಾಸ್ತಿ ಮಾಡಿ, ಟೆಸ್ಟ್ ಉಳಿಸಬೇಕಿದೆ,' ಎಂದು ಅಕ್ತರ್ ಐಸಿಸಿ ಬಳಿ ಮನವಿ ಮಾಡಿದರು.
ಬಾಬರ್ ಅಝಾಮ್ ಬಗ್ಗೆ ಮಾತು
'ಬ್ರೆಟ್ ಲೀ ನನಗಿಂತ ಉತ್ತಮ ಆಟಗಾರ, ಉತ್ತಮ ಶರೀರ ಹೊಂದಿದ್ದಾನೆ. ಆತ ನನ್ನ ತಂಡದಲ್ಲಿ ಇದ್ದಿದ್ದರೆ ಬಹಳ ಹೊಡೆತ ತಿನ್ನುತ್ತಿದ್ದ. ಬಾಬರ್ ಅಝಾಮ್ ರೂಪದಲ್ಲಿ ಪಾಕಿಸ್ತಾನಕ್ಕೆ ಉತ್ತಮ ಆಟಗಾರ ಸಿಕ್ಕಿದ್ದಾನೆ. ಪಾಕಿಸ್ತಾನಕ್ಕೆ ಈಗ ಉತ್ತಮ ನಾಯಕನ ಅಗತ್ಯವಿದೆ. ಎಲ್ಲಿಯವರೆಗೆ ಬೌಲರ್ ತಂಡದ ನಾಯಕರಾಗುವುದಿಲ್ಲವೋ ಅಲ್ಲಿಯ ತನಕ ತಂಡ ಗೆಲ್ಲುವುದಿಲ್ಲ. ಬಾಬರ್ ಯುವ ಆಟಗಾರ. ಆತನಿಗೆ ನಾಯಕತ್ವ ನೀಡಿರುವುದು ಉತ್ತಮ ಆಯ್ಕೆ' ಎಂದು ಅಖ್ತರ್ ನುಡಿದ್ದಾರೆ.
ಸಚಿನ್, ದ್ರಾವಿಡ್, ವಿಶ್ವನಾಥ್ ನೆನಪು
ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸುನಿಲ್ ಗವಾಸ್ಕರ್, ಗುಂಡಪ್ಪ ವಿಶ್ವನಾಥ್ ಇವರೆಲ್ಲ ಕ್ರಿಕೆಟ್ ಅಂಗಳದಲ್ಲಿ ಮಿಂಚಿ ಮರೆಯಾಗಿದ್ದಾರೆ. ಇಂತಹ ಆಟಗಾರರು ಮತ್ತೆ ವಾಪಾಸ್ ಬರಲು ಸಾಧ್ಯವಿಲ್ಲ. ಸಚಿನ್ ಬಹಳ ದೊಡ್ಡ ಯುಗದಲ್ಲಿ ಆಡಿದವರು. ಆ ವೇಳೆ ಬೌಲರ್ ಗಳು ಕೂಡ ಭರ್ಜರಿ ಇದ್ದರು. ಆದರೆ ಈಗಿನ ಬೌಲರ್ ಹಾಗಿಲ್ಲ. ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಜೋ ರೂಟ್, ಕೇನ್ ವಿಲಿಯಮ್ಸನ್ ಈಗಿನ ಮಹಾನ್ ಆಟಗಾರರು,' ಎಂದು ಅಖ್ತರ್ ಶ್ಲಾಘಿಸಿದ್ದಾರೆ.