ಶೋಯೆಬ್ ಅಖ್ತರ್ ಟ್ವೀಟ್
ಅಮಿತಾಬ್ ಬಚ್ಚನ್ ಗುಣಮುಖರಾಗಲು ಶುಭ ಹಾರೈಸಿದ್ದ ಶೋಯೆಬ್ ಅಖ್ತರ್ ಟ್ವಿಟರ್ನಲ್ಲಿ, 'ಬೇಗ ಗುಣಮುಖರಾಗಿ ಅಮಿತ್ ಜೀ. ನೀವು ಶೀಘ್ರ ಸುಧಾರಿಸಲು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ,' ಎಂದು ಬರೆದುಕೊಂಡಿದ್ದರು. ಅಖ್ತರ್ ಇಲ್ಲಿ ಅಮಿತಾಬ್ಗೋಸ್ಕರ ಪ್ರಾರ್ಥಿಸಿದ್ದರ ಹಿಂದೆ ದುರುದ್ದೇಶವಿರದೆ ಒಳ್ಳೆಯ ಉದ್ದೇಶವೇ ಇತ್ತು.
ಪ್ರಾರ್ಥನೆ ಬೇಡ
ಶೋಯೆಬ್ ಟ್ವೀಟರ್ಗೆ ಆ್ಯಂಟ್ ಮ್ಯಾನ್ ಎಂಬ ಹೆಸರಿನ ಟ್ವಿಟರ್ ಖಾತೆಯಿಂದ ಪ್ರತಿಕ್ರಿಯೆ ಬಂದಿತ್ತು. 'ಬಾರ್ಡರ್ ತುಂಬಾ ಭಯೋತ್ಪಾದಕರಿರ್ತಾರೆ, ಬೇಗ ಗುಣಮುಖರಾಗಿ ಎನ್ನುವ ಪ್ರಾರ್ಥನೆ ಬೇಡ,' ಎಂಬರ್ಥದಲ್ಲಿ ಆ ವ್ಯಕ್ತಿ ಟ್ವೀಟ್ ಮಾಡಿದ್ದ. ಇದಕ್ಕೆ ಅಖ್ತರ್ ಕೂಡ ಸರಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಅಖ್ತರ್ ಪ್ರತಿಕ್ರಿಯೆ
ಕಾಲೆಳೆದು ಟ್ವೀಟ್ ಮಾಡಿದ್ದಾತನಿಗೆ ಪ್ರತಿಕ್ರಿಯಿಸಿದ್ದ ಅಖ್ತರ್, 'ನಮ್ಮ ಪ್ರಾರ್ಥನೆ ಆಲಿಸುವವನು ಮೇಲಿದ್ದಾನೆ. ದೇವರು ಯಾರು ಹೇಳಿದ್ದು ಕೇಳುತಾನೆ ಅಂತ ಯಾರಿಗೆ ಗೊತ್ತು, ಅದು ದೇವರಿಗೆ ಬಿಟ್ಟಿದ್ದು. ನಿಮ್ಮನ್ನ ಲೇಬಲ್ ಮಾಡುವುದರಿಂದ ಯಾರೂ ಲೇಬಲ್ ಆಗಲ್ಲ. ದೇವರು ನಿಮ್ಮನ್ನು ಕಾಪಾಡಲಿ' ಎಂದು ಬರೆದುಕೊಂಡಿದ್ದಾರೆ.
ಶೋಯೆಬ್ ಮತ್ತೊಂದು ಟ್ವೀಟ್
ಮರುದಿನ ಅಂದರೆ ಜುಲೈ 12ರ ಬೆಳಿಗ್ಗೆ ಅಖ್ತರ್ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಹಿಂದಿನ ದಿನದ ಟ್ವೀಟ್ಗೆ ಮತ್ತೊಂದು ಕುಟುಕಿನಂತೆ ತೋರುತ್ತದೆ. 'ಶ್ರೇಷ್ಠ ಮನಸ್ಸುಗಳು ವಿಚಾರಗಳನ್ನು ಚರ್ಚಿಸುತ್ತವೆ; ಸಾಧಾರಣ ಮನಸ್ಸುಗಳು ಸಂಗತಿಗಳನ್ನು ಚರ್ಚಿಸುತ್ತವೆ; ಸಣ್ಣ ವ್ಯಕ್ತಿಗಳು ಬೇರೆ ವ್ಯಕ್ತಿಗಳ ಬಗ್ಗೆ ಮಾತನಾಡುತ್ತಾರೆ. ಶುಭ ಮುಂಜಾನೆ' ಎಂದು ಅಖ್ತರ್ ಟ್ವೀಟ್ನಲ್ಲಿ ಬರೆದಿದ್ದಾರೆ.