ಉತ್ತಮ ಪ್ರದರ್ಶನ ನೀಡದ ಪಂತ್
ಏಷ್ಯಾಕಪ್ ಸೂಪರ್ 4 ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಬದಲಿಗೆ ರಿಷಬ್ ಪಂತ್ಗೆ ಅವಕಾಶ ನೀಡಿದರು. ಅದನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ರಿಷಬ್ ಪಂತ್ ವಿಫಲರಾದರು. ಅದರಲ್ಲೂ ಮುಖ್ಯವಾದ ಪಂದ್ಯಗಳಲ್ಲಿ ಪಂತ್ರಿಂದ ಉತ್ತಮ ಪ್ರದರ್ಶನ ಬಂದಿಲ್ಲ ಎಂದು ಹೇಳಿದರು.
ಮತ್ತೊಂದೆಡೆ, ಅನುಭವಿ ವಿಕೆಟ್ಕೀಪರ್ ದಿನೇಶ್ ಕಾರ್ತಿಕ್, ಅವಕಾಶ ಸಿಕ್ಕಾಗಲೆಲ್ಲಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ದಿನೇಶ್ ಕಾರ್ತಿಕ್ರನ್ನು ಕೂರಿಸಿದರೆ ಆತನಿಗೆ ಅನ್ಯಾಯ ಮಾಡಿದಂತೆ ಎಂದು ಸೋಧಿ ಹೇಳಿದ್ದಾರೆ.
ಕಾರ್ತಿಕ್ ಬೇಡ, ಪಂತ್ ಓಕೆ: ಟಿ20 ವಿಶ್ವಕಪ್ಗಾಗಿ ಮಾಜಿ ಕ್ರಿಕೆಟಿಗನ ಆಯ್ಕೆಯ ಆಡುವ 11ರ ಬಳಗ
ಈಗ ಪರಿಸ್ಥಿತಿ ಬದಲಾಗಿದೆ
ರಿಷಬ್ ಪಂತ್ ಅಥವಾ ದಿನೇಶ್ ಕಾರ್ತಿಕ್ ಯಾರು ಮೊದಲ ಆಯ್ಕೆ ಎನ್ನುವ ಗೊಂದಲದ ಬಗ್ಗೆ ಉತ್ತರ ನೀಡಿದರ ಅವರು, "ಏಷ್ಯಾ ಕಪ್ಗೆ ಮೊದಲು, ನನಗೆ ಯಾವಾಗಲೂ ರಿಷಭ್ ಪಂತ್ ಮೊದಲ ಆಯ್ಕೆಯಾಗಿದ್ದರು. ಆದರೆ ಈಗ ತಂಡವು ದಿನೇಶ್ ಕಾರ್ತಿಕ್ಗೆ ಬೆಂಬಲ ನೀಡಬೇಕೆಂದು ನಾನು ಭಾವಿಸುತ್ತೇನೆ." ಎಂದು ಹೇಳಿದ್ದಾರೆ.
ರಿಷಬ್ ಪಂತ್ ಕೂಡ ಸಿಕ್ಸರ್ ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಅವರಿಗೆ ಈಗಾಗಲೇ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ. ಆದರೂ ಅವರು ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಸ್ಥಿರವಾದ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಸೋಧಿ ಹೇಳಿದ್ದಾರೆ.
ಹಲವು ಪಂದ್ಯಗಳನ್ನು ಡಿಕೆ ಗೆಲ್ಲಿಸಿದ್ದಾರೆ
"ನಾವು ಸೋಲುತ್ತೇವೆ ಎಂದು ಭಾವಿಸಿದ ಕೆಲವು ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದ್ದರಿಂದ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ದಿನೇಶ್ ಕಾರ್ತಿಕ್ಗೆ ಎಲ್ಲಾ ಮೂರು ಪಂದ್ಯಗಳಲ್ಲಿ ಅವಕಾಶ ನೀಡುವ ಮೂಲಕ ಅವರ ಅರ್ಹತೆಯನ್ನು ಪರೀಕ್ಷಿಸಬೇಕು" ಎಂದು ರೀತೀಂದರ್ ಸೋಧಿ ಒತ್ತಾಯಿಸಿದ್ದಾರೆ.
ದಿನೇಶ್ ಕಾರ್ತಿಕ್ರನ್ನು ತಂಡಕ್ಕೆ ಆಯ್ಕೆ ಮಾಡಲು ಅವರಿಗೆ ಆಡಲು ಸೂಕ್ತ ಅವಕಾಶ ಕೊಡದಿದ್ದರೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸ್ಪಿನ್ನರ್ ವಿರುದ್ಧ ಪಂತ್ ಕಳಪೆ ಪ್ರದರ್ಶನ
ಏಷ್ಯಾ ಕಪ್ನಲ್ಲಿ ಎಡಗೈ ಸ್ಪಿನ್ನರ್ಗಳ ವಿರುದ್ಧ ಪಂತ್ ಅವರನ್ನು ಕಳುಹಿಸುವ ಕ್ರಮವು ಹೇಗೆ ಕೆಲಸ ಮಾಡಲಿಲ್ಲ ಎಂಬುದರ ಕುರಿತು ಸೋಧಿ ಮಾತನಾಡಿದರು. ಪಂತ್ ಎಡಗೈ ಸ್ಪಿನ್ನರ್ಗಳ ವಿರುದ್ಧ ಸಾಕಷ್ಟು ಕಳಪೆ ದಾಖಲೆಯನ್ನು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
"ರಿಷಬ್ ಪಂತ್ ಎಡಗೈ ಸ್ಪಿನ್ನರ್ಗಳನ್ನು ಎದುರಿಸಬಹುದು. ಆದರೆ ಅದನ್ನು ಯಾವಾಗ ಮಾಡುತ್ತಾರೆ? ಅದಕ್ಕಾಗಿಯೇ ಅವರನ್ನು ತಂಡದಲ್ಲಿ ಆಡಿಸುತ್ತಿರುವುದು. ಮತ್ತೊಂದೆಡೆ ದಿನೇಶ್ ಕಾರ್ತಿಕ್ ವಿವಿಧ ಹೊಡೆತಗಳನ್ನು ಹೊಂದಿದ್ದಾರೆ ಮತ್ತು ಬೌಲರ್ಗಳ ಮೇಲೆ ಪ್ರಾಬಲ್ಯ ಸಾಧಿಸಬಹುದು. ಹಾಗಾಗಿ ಆಸ್ಟ್ರೇಲಿಯಾ ವಿರುದ್ಧದ ಭಾರತದ ಪ್ಲೇಯಿಂಗ್ ಇಲೆವೆನ್ನಲ್ಲಿ ಪಂತ್ ಬದಲಿಗೆ ದಿನೇಶ್ ಕಾರ್ತಿಕ್ಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ,