ನವದೆಹಲಿ: ಟೀಮ್ ಇಂಡಿಯಾದ ಯುವ ಬ್ಯಾಟ್ಸ್ಮನ್ ಶ್ರೇಯಸ್ ಐಯ್ಯರ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಎರಡನೇ ದಂತದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಗಾಯಕ್ಕೀಡಾಗಿದ್ದ ಶ್ರೇಯಸ್ ಐಯ್ಯರ್, ಭಾರತದಲ್ಲಿ ನಡೆದಿದ್ದ ಮೊದಲ ಹಂತದ ಐಪಿಎಲ್ನಲ್ಲಿ ಆಡಿರಲಿಲ್ಲ.
ಟೀಮ್ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿಯ ಒಪ್ಪಂದ ಶೀಘ್ರ ಕೊನೆ!
ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿದ್ದ ಶ್ರೇಯಸ್ ಐಯ್ಯರ್ ಗಾಯಗೊಂಡು 2021ರ ಐಪಿಎಲ್ನ ಆರಂಭಿಕ ಪಂದ್ಯಗಳಲ್ಲಿ ಹೊರಗುಳಿದಿದ್ದರಿಂದ ಡೆಲ್ಲಿ ನಾಯಕತ್ವ ರಿಷಭ್ ಪಂತ್ ವಹಿಸಿಕೊಂಡಿದ್ದರು. ಈಗ ಮತ್ತೆ ಐಯ್ಯರ್ ತಂಡ ಸೇರಿಕೊಳ್ಳಲಿದ್ದಾರೆ. ಆದರೆ ತಂಡದ ನಾಯಕತ್ವದ ಬಗ್ಗೆ ಗ್ಯಾರಂಟಿಯಿಲ್ಲ ಎಂದು ಐಯ್ಯರ್ ಹೇಳಿದ್ದಾರೆ.
ಐಪಿಎಲ್ ಈ ಸೀಸನ್ ಆರಂಭಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ಶ್ರೇಯಸ್ ಐಯ್ಯರ್ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಆ ಬಳಿಕ ಐಪಿಎಲ್ ಸೇರಿ ಯಾವುದೇ ಪಂದ್ಯಗಳಲ್ಲಿ ಶ್ರೇಯಸ್ಗೆ ಆಡಲಾಗಿರಲಿಲ್ಲ. ಈಗ ಶ್ರೇಯಸ್ ಚೇತರಿಸಿಕೊಂಡಿದ್ದು, ಮತ್ತೆ ಐಪಿಎಲ್ ಆಡುವುದಾಗಿ ಖಾತರಿಪಡಿಸಿದ್ದಾರೆ.
ಐಪಿಎಲ್: ಮುಂದಿನ ಆವೃತ್ತಿಗೆ 2 ಹೊಸ ತಂಡಗಳು, ನೀಲ ನಕಾಶೆಯ ಸಂಪೂರ್ಣ ಮಾಹಿತಿ
"ನನ್ನ ಭುಜದ ಗಾಯ ಗುಣವಾಗಿದೆ. ಚೇತರಿಕೆಗಾಗಿ ಅಭ್ಯಾಸ ನಡೆಯುತ್ತದೆ. ಹೆಚ್ಚೆಂದರೆ ಸಂಪೂರ್ಣ ಸುಧಾರಿಸಲು ಒಂದು ತಿಂಗಳು ಬೇಕಾಗಬಹುದು. ಐಪಿಎಲ್ನಲ್ಲಿ ನಾನು ಆಡುತ್ತೇನೆ, ಆದರೆ ನಾಯಕತ್ವದ ಬಗ್ಗೆ ನನಗೆ ಖಾತರಿಯಿಲ್ಲ," ಎಂದು 26ರ ಹರೆಯದ ಶ್ರೇಯಸ್ ಹೇಳಿದ್ದಾರೆ. ಸೆಪ್ಟೆಂಬರ್ನಲ್ಲಿ ಯುಎಇಯಲ್ಲಿ ಐಪಿಎಲ್ ಎರಡನೇ ಹಂತ ಆರಂಭಗೊಳ್ಳಲಿದೆ.