ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SMAT 2021 ಫೈನಲ್: ಇಂದು ಕರ್ನಾಟಕ-ತಮಿಳುನಾಡು ಮುಖಾಮುಖಿ

SMAT FINAL 2021

ಬಹುನಿರೀಕ್ಷಿತ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಫೈನಲ್‌ನಲ್ಲಿ ಇಂದು ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಮೂರನೇ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ವಿದರ್ಭವನ್ನ ಸೋಲಿಸಿ ಫೈನಲ್‌ಗೇರಿದ್ದ ಮನೀಷ್ ಪಾಂಡೆ ತಂಡ ಒಂದೆಡೆಯಾದ್ರೆ, ಹೈದ್ರಾಬಾದ್‌ ತಂಡವನ್ನ ಸುಲಭವಾಗಿ ಮಣಿಸಿ ವಿಜಯ್‌ಶಂಕರ್ ಪಡೆ ಫೈನಲ್‌ಗೆ ಪ್ರವೇಶಿಸಿದೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮಧ್ಯಾಹ್ನ 12 ಗಂಟೆಗೆ ಫೈನಲ್ ಪಂದ್ಯ ಶುರುವಾಗಲಿದ್ದು, ಉಭಯ ತಂಡಗಳು ರಣತಂತ್ರದೊಂದಿಗೆ ಕಣಕ್ಕಿಳಿಯಲಿವೆ. ದಕ್ಷಿಣ ಭಾರತದ ಎರಡು ತಂಡಗಳು ಮತ್ತೊಮ್ಮೆ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ವಿಶೇಷ.

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಇತಿಹಾಸದಲ್ಲಿ ಉಭಯ ತಂಡಗಳು ಎರಡು ಬಾರಿ ಪ್ರಶಸ್ತಿಯನ್ನು ಗೆದ್ದು ಬೀಗಿವೆ. ಕಳೆದ ಬಾರಿ 2019-20ರಲ್ಲಿ ಎರಡೂ ತಂಡಗಳು ಫೈನಲ್‌ನಲ್ಲಿ ಎದುರಾಗಿದ್ದವು. ಈ ಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ಮೇಲುಗೈ ಸಾಧಿಸಿ ಟ್ರೋಫಿ ಮುಡಿಗೇರಿಸಿಕೊಂಡಿತು.

ಸತತ ಮೂರನೇ ಬಾರಿಗೆ ಫೈನಲ್ ಪ್ರವೇಸಿರುವ ತಮಿಳುನಾಡು

ಸತತ ಮೂರನೇ ಬಾರಿಗೆ ಫೈನಲ್ ಪ್ರವೇಸಿರುವ ತಮಿಳುನಾಡು

ಹೌದು, ತಮಿಳುನಾಡು ಒಟ್ಟಾರೆ ನಾಲ್ಕನೇ ಬಾರಿ ಹಾಗೂ ಸತತ ಮೂರನೇ ಬಾರಿಗೆ SMAT ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ಕಳೆದ ಬಾರಿಯ ಚಾಂಪಿಯನ್ ತಂಡವಾಗಿರುವ ತಮಿಳುನಾಡು ತಂಡ ಟ್ರೋಫಿಯನ್ನು ಉಳಿಸಿಕೊಳ್ಳುವ ಇರಾದೆಯಲ್ಲಿದೆ.

Video: ದೀಪಕ್ ಚಹಾರ್‌ ಸಿಡಿಸಿದ ಸಿಕ್ಸರ್‌ಗೆ, ಸೆಲ್ಯೂಟ್ ಹೊಡೆದ ರೋಹಿತ್ ಶರ್ಮಾ!

ಬ್ಯಾಟಿಂಗ್ ಮೇಲೆ ಹೆಚ್ಚು ಅವಲಂಬಿತವಾಗಿರುವ ಕರ್ನಾಟಕ

ಬ್ಯಾಟಿಂಗ್ ಮೇಲೆ ಹೆಚ್ಚು ಅವಲಂಬಿತವಾಗಿರುವ ಕರ್ನಾಟಕ

ಕರ್ನಾಟಕ ತಂಡವು ಅನನುಭವಿ ಬೌಲಿಂಗ್ ತಂಡವನ್ನು ಹೊಂದಿದ್ದು, ಬ್ಯಾಟಿಂಗ್ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ಮನೀಷ್ ಪಾಂಡೆ , ರೋಹನ್ ಕದಂ, ಕರುಣ್ ನಾಯರ್, ಅಭಿನವ್ ಮನೋಹರ್ ಉತ್ತಮ ಲಯದಲ್ಲಿದ್ದಾರೆ. ಪ್ರಿ ಕ್ವಾರ್ಟರ್ ಫೈನಲ್ ಮತ್ತು ಕ್ವಾರ್ಟರ್ ಫೈನಲ್‌ನಲ್ಲಿ ಉತ್ತಮ ಬ್ಯಾಟಿಂಗ್ ಜೊತೆಗೆ ಮನೀಷ್‌ರ ಚುರುಕು ಫೀಲ್ಡಿಂಗ್ ಕಾಣಬಹುದು.

ಆದರೆ ಬೌಲಿಂಗ್‌ನಲ್ಲಿ ಕರ್ನಾಟಕ ಸ್ವಲ್ಪ ವೀಕ್‌ ಆದಂತಿದೆ. ಯುವ ಬೌಲರ್‌ಗಳಾದ ವಿದ್ಯಾದರ ಪಾಟೀಲ, ವಿಜಯಕುಮಾರ್ ವೈಶಾಖ, ಎಂ.ಬಿ ದರ್ಶನ್ ತಮಿಳುನಾಡು ವಿರುದ್ಧ ಉತ್ತಮ ಬೌಲಿಂಗ್ ಪ್ರದರ್ಶಿಸಬೇಕಿದೆ.

ಟಿ20I ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ವಿಶ್ವದಾಖಲೆ: ವಿರಾಟ್ ಕೊಹ್ಲಿ ದಾಖಲೆ ಮುರಿದ ಹಿಟ್‌ಮ್ಯಾನ್

ತಮಿಳುನಾಡು ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲೂ ಬಲಿಷ್ಠವಾಗಿದೆ

ತಮಿಳುನಾಡು ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲೂ ಬಲಿಷ್ಠವಾಗಿದೆ

ವಿಜಯ್ ಶಂಕರ್ ನಾಯಕತ್ವದ ತಮಿಳುನಾಡು ತಂಡಕ್ಕೆ ಶಾರೂಖ್ ಖಾನ್, ನಾಯಕ ವಿಜಯ್ ಶಂಕರ್, ಎಸ್‌. ಜಗದೀಶನ್ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಬಲ್ಲರು. ಇನ್ನು ಸೆಮಿಫೈನಲ್‌ನಲ್ಲಿ ಐದು ವಿಕೆಟ್ ಪಡೆದ ಪಿ. ಸರವಣನ್ ಮತ್ತು ಸಂದೀಪ್ ವರಿಯರ್ ಪ್ರಮುಖ ಬೌಲರ್‌ಗಳಾಗಿದ್ದು, ಗಾಯದಿಂದಾಗಿ ಕಳೆದೆರಡು ಪಂದ್ಯಗಳಿಂದ ಹೊರಗುಳಿದಿದ್ದ ಟಿ. ನಟರಾಜನ್ ಫೈನಲ್‌ನಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

2017ರಿಂದ ತಮಿಳುನಾಡು ವಿರುದ್ಧ ಸೋತಿಲ್ಲ

2017ರಿಂದ ತಮಿಳುನಾಡು ವಿರುದ್ಧ ಸೋತಿಲ್ಲ

ಕರ್ನಾಟಕ ತಂಡವು 2017ರಿಂದ ತಮಿಳುನಾಡು ತಂಡದ ವಿರುದ್ಧ ಸೋಲನ್ನ ಕಾಣದಿರುವುದು ವಿಶೇಷ. ಹೀಗಾಗಿ 2021ರ ಟೂರ್ನಿಯಲ್ಲೂ ಈ ದಾಖಲೆಯನ್ನು ಮುಂದುವರಿಸಿಕೊಂಡು ಹೋಗುವ ಛಲದಲ್ಲಿದೆ.

ಉಭಯ ತಂಡಗಳು ಇದುವರೆಗೂ 10 ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಕರ್ನಾಟಕ 6 ಪಂದ್ಯದಲ್ಲಿ ಜಯ ಸಾಧಿಸಿದರೆ, ತಮಿಳುನಾಡು 3 ಪಂದ್ಯವನ್ನ ಗೆದ್ದಿದೆ ಮತ್ತು 1 ಪಂದ್ಯ ಟೈ ಆಗಿದೆ.

ಇನ್ನು ಕರ್ನಾಟಕ ತಂಡವು 2018-19, 2019-20ರಲ್ಲಿ ಪ್ರಶಸ್ತಿಯನ್ನ ಗೆದ್ದಿದ್ದು, ತಮಿಳುನಾಡು 2006-07, 2020-21ರಲ್ಲಿ ಟ್ರೋಫಿ ಗೆದ್ದುಕೊಂಡಿದೆ.

ಕರ್ನಾಟಕ ಮತ್ತು ತಮಿಳುನಾಡು ತಂಡಗಳು

ಕರ್ನಾಟಕ ಮತ್ತು ತಮಿಳುನಾಡು ತಂಡಗಳು

ಕರ್ನಾಟಕ ತಂಡ: ಮನೀಶ್ ಪಾಂಡೆ (ನಾಯಕ), ಕೆಸಿ ಕರಿಯಪ್ಪ, ದರ್ಶನ್ ಎಂಬಿ, ಪ್ರವೀಣ್ ದುಬೆ, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ಪ್ರತೀಕ್ ಜೈನ್, ಅನಿರುದ್ಧ ಜೋಶಿ, ರೋಹನ್ ಕದಂ, ಕರುಣ್ ನಾಯರ್, ಅಭಿನವ್ ಮನೋಹರ್, ವಿದ್ಯಾಧರ್ ಪಾಟೀಲ್, ಪ್ರಸಿದ್ಧ್ ಕೃಷ್ಣ, ಶರತ್ ಬಿಆರ್, ಕೃಷ್ಣಮೂರ್ತಿ ಸಿದ್ಧಾರ್ಥ್, ಜಗದೇಶ ಸುಚಿತ್, ಜಗದೇಶ್ , ನಿಹಾಲ್ ಉಳ್ಳಾಲ್, ವಿಜಯ್ ಕುಮಾರ್ ವೈಶಾಕ್, ರಿತೇಶ್ ಭಟ್ಕಳ್, ವಿ ಕೌಶಿಕ್, ಆದಿತ್ಯ ಸೋಮಣ್ಣ, ರವಿಕುಮಾರ್ ಸಮರ್ಥ್

ತಮಿಳುನಾಡು ತಂಡ: ವಿಜಯ ಶಂಕರ್ (ನಾಯಕ), ಹರಿನಿಶಾಂತ್, ಎನ್. ಜಗದೀಶನ್ (ವಿಕೆಟ್ ಕೀಪರ್), ಸಂಜಯ್ ಯಾದವ್, ಶಾರೂಖ್ ಖಾನ್, ಎಂ. ಮೊಹಮ್ಮದ್ , ಮುರುಗನ್ ಅಶ್ವಿನ್, ರವಿ ಶ್ರೀನಿವಾಸನ್ ಸಾಯಿಕಿಶೋರ್, ಪಿ. ಸರವಣಕುಮಾರ್, ಸಂದೀಪ್ ವರಿಯರ್, ಜೆ. ಕೌಶಿಕ್, ಜಗದೀಶನ್ ಕೌಶಿಕ್, ಗಂಗಾಶ್ರೀಧರ್ ರಾಜು, ಆದಿತ್ಯ ಗಣೇಶ್, ಆರ್. ಸಿಲಂಬರಸನ್, ಆರ್‌. ವಿವೇಕ್, ಮಣಿಮಾರನ್ ಸಿದ್ಧಾರ್ಥ್‌, ತಂಗವೇಲು ನಟರಾಜನ್.

ಹಾರ್ದಿಕ್ ಪಾಂಡ್ಯ ಅವರ ಕ್ರಿಕೆಟ್ ಭವಿಷ್ಯ ಈಗ ಕೆತ್ತಲಾಗಿದೆ | Oneindia Kannada

Story first published: Monday, November 22, 2021, 15:23 [IST]
Other articles published on Nov 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X