ಸತತ ಮೂರನೇ ಬಾರಿಗೆ ಫೈನಲ್ ಪ್ರವೇಸಿರುವ ತಮಿಳುನಾಡು
ಹೌದು, ತಮಿಳುನಾಡು ಒಟ್ಟಾರೆ ನಾಲ್ಕನೇ ಬಾರಿ ಹಾಗೂ ಸತತ ಮೂರನೇ ಬಾರಿಗೆ SMAT ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ಕಳೆದ ಬಾರಿಯ ಚಾಂಪಿಯನ್ ತಂಡವಾಗಿರುವ ತಮಿಳುನಾಡು ತಂಡ ಟ್ರೋಫಿಯನ್ನು ಉಳಿಸಿಕೊಳ್ಳುವ ಇರಾದೆಯಲ್ಲಿದೆ.
Video: ದೀಪಕ್ ಚಹಾರ್ ಸಿಡಿಸಿದ ಸಿಕ್ಸರ್ಗೆ, ಸೆಲ್ಯೂಟ್ ಹೊಡೆದ ರೋಹಿತ್ ಶರ್ಮಾ!
ಬ್ಯಾಟಿಂಗ್ ಮೇಲೆ ಹೆಚ್ಚು ಅವಲಂಬಿತವಾಗಿರುವ ಕರ್ನಾಟಕ
ಕರ್ನಾಟಕ ತಂಡವು ಅನನುಭವಿ ಬೌಲಿಂಗ್ ತಂಡವನ್ನು ಹೊಂದಿದ್ದು, ಬ್ಯಾಟಿಂಗ್ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ಮನೀಷ್ ಪಾಂಡೆ , ರೋಹನ್ ಕದಂ, ಕರುಣ್ ನಾಯರ್, ಅಭಿನವ್ ಮನೋಹರ್ ಉತ್ತಮ ಲಯದಲ್ಲಿದ್ದಾರೆ. ಪ್ರಿ ಕ್ವಾರ್ಟರ್ ಫೈನಲ್ ಮತ್ತು ಕ್ವಾರ್ಟರ್ ಫೈನಲ್ನಲ್ಲಿ ಉತ್ತಮ ಬ್ಯಾಟಿಂಗ್ ಜೊತೆಗೆ ಮನೀಷ್ರ ಚುರುಕು ಫೀಲ್ಡಿಂಗ್ ಕಾಣಬಹುದು.
ಆದರೆ ಬೌಲಿಂಗ್ನಲ್ಲಿ ಕರ್ನಾಟಕ ಸ್ವಲ್ಪ ವೀಕ್ ಆದಂತಿದೆ. ಯುವ ಬೌಲರ್ಗಳಾದ ವಿದ್ಯಾದರ ಪಾಟೀಲ, ವಿಜಯಕುಮಾರ್ ವೈಶಾಖ, ಎಂ.ಬಿ ದರ್ಶನ್ ತಮಿಳುನಾಡು ವಿರುದ್ಧ ಉತ್ತಮ ಬೌಲಿಂಗ್ ಪ್ರದರ್ಶಿಸಬೇಕಿದೆ.
ಟಿ20I ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ವಿಶ್ವದಾಖಲೆ: ವಿರಾಟ್ ಕೊಹ್ಲಿ ದಾಖಲೆ ಮುರಿದ ಹಿಟ್ಮ್ಯಾನ್
ತಮಿಳುನಾಡು ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಬಲಿಷ್ಠವಾಗಿದೆ
ವಿಜಯ್ ಶಂಕರ್ ನಾಯಕತ್ವದ ತಮಿಳುನಾಡು ತಂಡಕ್ಕೆ ಶಾರೂಖ್ ಖಾನ್, ನಾಯಕ ವಿಜಯ್ ಶಂಕರ್, ಎಸ್. ಜಗದೀಶನ್ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಬಲ್ಲರು. ಇನ್ನು ಸೆಮಿಫೈನಲ್ನಲ್ಲಿ ಐದು ವಿಕೆಟ್ ಪಡೆದ ಪಿ. ಸರವಣನ್ ಮತ್ತು ಸಂದೀಪ್ ವರಿಯರ್ ಪ್ರಮುಖ ಬೌಲರ್ಗಳಾಗಿದ್ದು, ಗಾಯದಿಂದಾಗಿ ಕಳೆದೆರಡು ಪಂದ್ಯಗಳಿಂದ ಹೊರಗುಳಿದಿದ್ದ ಟಿ. ನಟರಾಜನ್ ಫೈನಲ್ನಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
2017ರಿಂದ ತಮಿಳುನಾಡು ವಿರುದ್ಧ ಸೋತಿಲ್ಲ
ಕರ್ನಾಟಕ ತಂಡವು 2017ರಿಂದ ತಮಿಳುನಾಡು ತಂಡದ ವಿರುದ್ಧ ಸೋಲನ್ನ ಕಾಣದಿರುವುದು ವಿಶೇಷ. ಹೀಗಾಗಿ 2021ರ ಟೂರ್ನಿಯಲ್ಲೂ ಈ ದಾಖಲೆಯನ್ನು ಮುಂದುವರಿಸಿಕೊಂಡು ಹೋಗುವ ಛಲದಲ್ಲಿದೆ.
ಉಭಯ ತಂಡಗಳು ಇದುವರೆಗೂ 10 ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಕರ್ನಾಟಕ 6 ಪಂದ್ಯದಲ್ಲಿ ಜಯ ಸಾಧಿಸಿದರೆ, ತಮಿಳುನಾಡು 3 ಪಂದ್ಯವನ್ನ ಗೆದ್ದಿದೆ ಮತ್ತು 1 ಪಂದ್ಯ ಟೈ ಆಗಿದೆ.
ಇನ್ನು ಕರ್ನಾಟಕ ತಂಡವು 2018-19, 2019-20ರಲ್ಲಿ ಪ್ರಶಸ್ತಿಯನ್ನ ಗೆದ್ದಿದ್ದು, ತಮಿಳುನಾಡು 2006-07, 2020-21ರಲ್ಲಿ ಟ್ರೋಫಿ ಗೆದ್ದುಕೊಂಡಿದೆ.
ಕರ್ನಾಟಕ ಮತ್ತು ತಮಿಳುನಾಡು ತಂಡಗಳು
ಕರ್ನಾಟಕ ತಂಡ: ಮನೀಶ್ ಪಾಂಡೆ (ನಾಯಕ), ಕೆಸಿ ಕರಿಯಪ್ಪ, ದರ್ಶನ್ ಎಂಬಿ, ಪ್ರವೀಣ್ ದುಬೆ, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ಪ್ರತೀಕ್ ಜೈನ್, ಅನಿರುದ್ಧ ಜೋಶಿ, ರೋಹನ್ ಕದಂ, ಕರುಣ್ ನಾಯರ್, ಅಭಿನವ್ ಮನೋಹರ್, ವಿದ್ಯಾಧರ್ ಪಾಟೀಲ್, ಪ್ರಸಿದ್ಧ್ ಕೃಷ್ಣ, ಶರತ್ ಬಿಆರ್, ಕೃಷ್ಣಮೂರ್ತಿ ಸಿದ್ಧಾರ್ಥ್, ಜಗದೇಶ ಸುಚಿತ್, ಜಗದೇಶ್ , ನಿಹಾಲ್ ಉಳ್ಳಾಲ್, ವಿಜಯ್ ಕುಮಾರ್ ವೈಶಾಕ್, ರಿತೇಶ್ ಭಟ್ಕಳ್, ವಿ ಕೌಶಿಕ್, ಆದಿತ್ಯ ಸೋಮಣ್ಣ, ರವಿಕುಮಾರ್ ಸಮರ್ಥ್
ತಮಿಳುನಾಡು ತಂಡ: ವಿಜಯ ಶಂಕರ್ (ನಾಯಕ), ಹರಿನಿಶಾಂತ್, ಎನ್. ಜಗದೀಶನ್ (ವಿಕೆಟ್ ಕೀಪರ್), ಸಂಜಯ್ ಯಾದವ್, ಶಾರೂಖ್ ಖಾನ್, ಎಂ. ಮೊಹಮ್ಮದ್ , ಮುರುಗನ್ ಅಶ್ವಿನ್, ರವಿ ಶ್ರೀನಿವಾಸನ್ ಸಾಯಿಕಿಶೋರ್, ಪಿ. ಸರವಣಕುಮಾರ್, ಸಂದೀಪ್ ವರಿಯರ್, ಜೆ. ಕೌಶಿಕ್, ಜಗದೀಶನ್ ಕೌಶಿಕ್, ಗಂಗಾಶ್ರೀಧರ್ ರಾಜು, ಆದಿತ್ಯ ಗಣೇಶ್, ಆರ್. ಸಿಲಂಬರಸನ್, ಆರ್. ವಿವೇಕ್, ಮಣಿಮಾರನ್ ಸಿದ್ಧಾರ್ಥ್, ತಂಗವೇಲು ನಟರಾಜನ್.