ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೆಮಿಫೈನಲ್ನಲ್ಲಿ ಇಂದು ಕರ್ನಾಟಕ ತಂಡವು ವಿದರ್ಭ ತಂಡದ ಸವಾಲನ್ನು ಸ್ವೀಕರಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಮನೀಷ್ ಪಾಂಡೆ ಬಳಗ ಗೆದ್ದು ಫೈನಲ್ಗೇರಲು ಎದುರು ನೋಡುತ್ತಿದೆ.
ಕ್ವಾರ್ಟರ್ಫೈನಲ್ನಲ್ಲಿ ಬಂಗಾಳ ವಿರುದ್ಧ ರೋಚಕ ಗೆಲುವು ಸಾಧಿಸಿರುವ ಕರ್ನಾಟಕ ತಂಡ ಸೂಪರ್ ಓವರ್ನಲ್ಲಿ ಪಂದ್ಯ ಗೆದ್ದು ಸೆಮೀಸ್ಗೆ ಎಂಟ್ರಿ ನೀಡಿತು. ಈಗಾಗಲೇ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಕರ್ನಾಟಕವು ಮೂರನೇ ಬಾರಿಗೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.
ಕರ್ನಾಟಕವು ಈ ಮೊದಲಿನಂತೆ ಬ್ಯಾಟಿಂಗ್ ವಿಭಾಗದ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ಆದ್ರೆ ಈ ಬಾರಿ ಟೂರ್ನಿಯಲ್ಲಿ ಈವರೆಗೂ ಅಜೇಯವಾಗಿ ಉಳಿದಿರುವ ವಿದರ್ಭ ತಂಡ ಸೆಮಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ದೊಡ್ಡ ಸವಾಲೊಡ್ಡಲಿದೆ. ಹೀಗಾಗಿ ಕರ್ನಾಟಕದ ಪ್ಲೇಯಿಂಗ್ ಇಲೆವೆನ್ನಲ್ಲಿ ಕೆಲ ಬದಲಾವಣೆ ಆಗಬಹುದು.
ಟೀಂ ಇಂಡಿಯಾಗೆ 7 ವಿಕೆಟ್ಗಳ ಭರ್ಜರಿ ಗೆಲುವು: ನ್ಯೂಜಿಲೆಂಡ್ ವಿರುದ್ಧ T20 ಸರಣಿ ಮುಡಿಗೇರಿಸಿಕೊಂಡ ಭಾರತ
ಕಳೆದೆರಡು ಇನ್ನಿಂಗ್ಸ್ಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಬಿ.ಆರ್. ಶರತ್ ವಿಫಲರಾಗಿದ್ದಾರೆ. ಹೀಗಾಗಿ ಈ ಕ್ರಮಾಂಕದಲ್ಲಿ ಬದಲಾವಣೆ ಸಾಧ್ಯತೆಯಿದೆ. ಮಧ್ಯಮ ಕ್ರಮಾಂಕದಲ್ಲಿ ಯುವ ಆಟಗಾರ ಅಭಿನವ್ ಮನೋಹರ್ ತಂಡದ ಕೈ ಹಿಡಿಯುತ್ತಿರುವುದು ಬಲ ಹೆಚ್ಚಿಸಿದೆ. ನಾಯಕ ಮನೀಷ್ ಪಾಂಡೆ ಮತ್ತು ಅನುಭವಿ ಕರುಣ್ ನಾಯರ್ ಉತ್ತಮ ಫಾರ್ಮ್ನಲ್ಲಿದ್ದಾರೆ.
ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲಿ ಎಂಬಿ ದರ್ಶನ್, ವಿದ್ಯಾಧರ್ ಪಾಟೀಲ ಮತ್ತು ವಿಜಯಕುಮಾರ್ ವೈಶಾಖ ಇನ್ನಷ್ಟು ಪ್ರಬಲ ದಾಳಿ ನಡೆಸಿದ್ದೇ ಆದಲ್ಲಿ ಎದುರಾಳಿಯನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಬಹುದು. ಸೆಮಿಫೈನಲ್ನಲ್ಲಿ ಅನುಭವಿ ಆಲ್ರೌಂಡರ್ ಶ್ರೇಯಸ್ ಗೋಪಾಲ್ಗೂ ಮಣೆ ಹಾಕಬಹುದು.
ಇನ್ನು ವಿದರ್ಭ ತಂಡವು ಅಕ್ಷಯ್ ವಾಡ್ಕರ್ ನೇತೃತ್ವದಲ್ಲಿ ಈ ಬಾರಿಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನಿಡುತ್ತಾ ಬಂದಿದೆ. ಕ್ವಾರ್ಟರ್ಫೈನಲ್ನಲ್ಲಿ ವಿದರ್ಭ ತಂಡ ರಾಜಸ್ಥಾನ ತಂಡವನ್ನು ಮಣಿಸಿ ಸೆಮಿಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಎದುರಾಳಿಯನ್ನ 84 ರನ್ಗಳಿಗೆ ಕಟ್ಟಿಹಾಕಿದ್ದ ವಿದರ್ಭ ಕರ್ನಾಟಕದೆದುರು ಅಂತಹದ್ದೇ ಪ್ರದರ್ಶನ ನೀಡುವ ಲೆಕ್ಕಾಚಾರ ಹಾಕಿಕೊಂಡಿದೆ. ಆದರೆ ವಿದರ್ಭ ಗ್ರೂಪ್ ಸ್ಟೇಜ್ನಲ್ಲಿ ಅಂತಹ ದೊಡ್ಡ ಮಟ್ಟದ ಸವಾಲನ್ನು ಎದುರಿಸಿಲ್ಲ.
ವಿದರ್ಭ ತಂಡದ ಬ್ಯಾಟಿಂಗ್ ಶಕ್ತಿ ಗಣೇಶ್ ಸತೀಶ್ ತಂಡದ ಕೀ ಪ್ಲೇಯರ್ ಆಗಿದ್ದಾರೆ. ಇವರ ಜೊತೆಗೆ ಅಕ್ಷಯ್ ತೈಡೆ, ಅಕ್ಷಯ್ ವಾಡಕರ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಬೌಲಿಂಗ್ನಲ್ಲಿ ಅಕ್ಷಯ್ ಕಾರ್ನೆವಾರ್ ಹಾಗೂ ಅಕ್ಷಯ್ ವಾಖರ್ ಅವರ ಬೌಲಿಂಗ್ ದಾಳಿಯ ವಿರುದ್ಧ ಕರ್ನಾಟಕ ತಂಡದ ಪ್ರದರ್ಶನ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.
ಕರ್ನಾಟಕ ತಂಡ: ಮನೀಶ್ ಪಾಂಡೆ (ನಾಯಕ), ಕೆಸಿ ಕರಿಯಪ್ಪ, ದರ್ಶನ್ ಎಂಬಿ, ಪ್ರವೀಣ್ ದುಬೆ, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ಪ್ರತೀಕ್ ಜೈನ್, ಅನಿರುದ್ಧ ಜೋಶಿ, ರೋಹನ್ ಕದಂ, ಕರುಣ್ ನಾಯರ್, ಅಭಿನವ್ ಮನೋಹರ್, ವಿದ್ಯಾಧರ್ ಪಾಟೀಲ್, ಪ್ರಸಿದ್ಧ್ ಕೃಷ್ಣ, ಶರತ್ ಬಿಆರ್, ಕೃಷ್ಣಮೂರ್ತಿ ಸಿದ್ಧಾರ್ಥ್, ಜಗದೇಶ ಸುಚಿತ್, ಜಗದೇಶ್ , ನಿಹಾಲ್ ಉಳ್ಳಾಲ್, ವಿಜಯ್ ಕುಮಾರ್ ವೈಶಾಕ್, ರಿತೇಶ್ ಭಟ್ಕಳ್, ವಿ ಕೌಶಿಕ್, ಆದಿತ್ಯ ಸೋಮಣ್ಣ, ರವಿಕುಮಾರ್ ಸಮರ್ಥ್
ವಿದರ್ಭ ತಂಡ: ಅಕ್ಷಯ್ ವಾಡ್ಕರ್ (ನಾಯಕ), ಸಿದ್ಧೇಶ್ ವಾಥ್, ಶುಭಂ ದುಬೆ, ಹರ್ಷ್ ದುಬೆ, ಗಣೇಶ್ ಸತೀಶ್, ಅಕ್ಷಯ್ ಕರ್ನೇವರ್, ದರ್ಶನ್ ನಲ್ಕಂಡೆ, ಸಿದ್ಧೇಶ್ ನೇರಲ್, ಯಶ್ ರಾಥೋಡ್, ಸಂಜಯ್ ರಘುನಾಥ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಅಥರ್ವ ತೈದೆ, ಆದಿತ್ಯ ಠಾಕರೆ, ಅಕ್ಷಯ್ ವಾಖರೆ, ಅಪೂರ್ವ್ ವಾಂಖಡೆ, ಉಮೇಶ್ ಯಾದವ್, ಯಶ್ ಠಾಕೂರ್, ಪಿ ರೇಖಾಡೆ, ಗಣೇಶ್ ಭೋಸ್ಲೆ, ಸೂರಜ್ ರೈ, ಲಲಿತ್ ಎಂ ಯಾದವ್