ಗಂಗೂಲಿ ನಾಯಕತ್ವದ ಗುಣಗಳ ಕುರಿತು ಪಾರ್ಥೀವ್ ಪಟೇಲ್ ಗುಣಗಾನ
ಸೌರವ್ ಗಂಗೂಲಿ ನಾಯಕತ್ವದಲ್ಲಿ ಆಡಿದ್ದ ಪಾರ್ಥೀವ್ ಪಟೇಲ್, ಗಂಗೂಲಿ ಆಟಗಾರರನ್ನ ನಿರ್ವಹಣೆಯ ಕೌಶಲ್ಯದ ಕುರಿತು ಹೊಗಳಿಕೆಯ ಮಾತನಾಡಿದ್ದಾರೆ. ಗಂಗೂಲಿ ತಂಡವನ್ನ ಗೆದ್ದಾಗ ಮತ್ತು ಸೋತಾಗ ತೆಗೆದುಕೊಂಡು ಹೋಗುತ್ತಿದ್ದ ರೀತಿಯನ್ನು ವಿವರಿಸಿದ್ರು. ಜೊತೆಗೆ ಒಂದು ವಿಶೇಷ ಸಂಗತಿಯನ್ನ ಸಹ ಬಿಚ್ಚಿಟ್ಟಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ 2022: 10,000 ಮೀಟರ್ ನಡಿಗೆಯಲ್ಲಿ ಬೆಳ್ಳಿ ಪದಕ ಗೆದ್ದ ಪ್ರಿಯಾಂಕಾ
146 ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸಿದ್ದ ಗಂಗೂಲಿ
ಸೌರವ್ ಗಂಗೂಲಿ ಅತಿ ಹೆಚ್ಚು ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸಿದ ಎರಡನೇ ನಾಯಕರಾಗಿದ್ದಾರೆ. 1999ರಿಂದ 2005ರವರೆಗೆ 146 ಏಕದಿನ ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದ ಸೌರವ್, ಮೊಹಮ್ಮದ್ ಅಜರುದ್ದೀನ್ ಬಳಿಕ ಅತಿ ಹೆಚ್ಚು ಒಡಿಐ ಪಂದ್ಯದ ನಾಯಕರಾಗಿದ್ದಾರೆ.
146 ಏಕದಿನ ಪಂದ್ಯಗಳಲ್ಲಿ ಭಾರತವನ್ನು 76 ಪಂದ್ಯಗಳಲ್ಲಿ ಗೆಲುವಿನ ದಡ ತಲುಪಿಸಿರುವ ಕೀರ್ತಿ ಸೌರವ್ ಗಂಗೂಲಿಗಿದೆ. ಆದರೆ ಈ ಅಂಕಿಅಂಶಗಳ ಜೊತೆಗೆ, ಗಂಗೂಲಿ ಅತ್ಯುತ್ತಮ ಮ್ಯಾನೇಜ್ಮೆಂಟ್ ಸಾಮರ್ಥ್ಯಗಳನ್ನು ಹೊಂದಿದ್ದರು ಮತ್ತು ಪ್ರತಿಯೊಬ್ಬರನ್ನು ಸಮಾಧಾನಪಡಿಸುವಲ್ಲಿ ಪರಿಣತರಾಗಿದ್ದರು ಎಂದು ಭಾರತದ ಮಾಜಿ ಬ್ಯಾಟ್ಸ್ಮನ್ ಪಾರ್ಥಿವ್ ಪಟೇಲ್ ಹೇಳಿದ್ದಾರೆ.
ಮಾಜಿ ಕ್ರಿಕೆಟಿಗ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ- ನಟಿ ನಗ್ಮಾ ನಡುವಿನ ಲವ್ ಸ್ಟೋರಿ & ಬ್ರೇಕಪ್!
ಸೌರವ್ ಗಂಗೂಲಿ ಹಾಗೂ ಮಾರಿಗೋಲ್ಡ್ ಬಿಸ್ಕೆಟ್ ಕುರಿತು ಪಟೇಲ್ ಮಾತು
"ನಮ್ಮ ದಿನ ಅಥವಾ ಆಟವು ಸರಿಯಾಗಿ ನಡೆಯದಿದ್ದರೂ ಅವರು ಎಲ್ಲರಿಗೂ ಸಂತೋಷವನ್ನುಂಟುಮಾಡುತ್ತಿದ್ದರು. ಅವರು ಯಾವಾಗಲೂ ತಮ್ಮೊಂದಿಗೆ ಮಾರಿಗೋಲ್ಡ್ ಬಿಸ್ಕೆಟ್ಗಳನ್ನು ಕೊಂಡೊಯ್ಯುತ್ತಿದ್ದಲ್ಲದೆ, ಎಲ್ಲರಿಗೂ ನೀಡುತ್ತಿದ್ದರು, "ಎಂದು ಪಟೇಲ್ 'ಕ್ರಿಕ್ಚಾಟ್ ಪವರ್ಡ್ ಬೈ ಪ್ಯಾರಿಮ್ಯಾಚ್'ನ ಆಡಿಯೊ ಚಾಟ್ರೂಮ್ ಸೆಷನ್ನಲ್ಲಿ ಹೇಳಿದರು.
ತಂಡವನ್ನ ಆಯ್ಕೆ ಮಾಡುವುದರ ಮೇಲೆ ಟಿ20 ವಿಶ್ವಕಪ್ ಫಲಿತಾಂಶ ಹೊರಬರಲಿದೆ!
ಸೌರವ್ ಗಂಗೂಲಿ ನಾಯಕತ್ವದ ಕುರಿತಾಗಿ ಮಾತನಾಡಿದ್ದರ ಜೊತೆಗೆ, ಪ್ರಸ್ತುತ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ತಂಡವು ಟಿ20 ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದಲ್ಲಿ ಸಾಕಷ್ಟು ಪರಿಶ್ರಮ ಪಡಬೇಕಿದೆ ಎಂದಿದ್ದಾರೆ.
"ಭಾರತದ ಫಲಿತಾಂಶವು ತಂಡದ ಆಯ್ಕೆಯ ಮೇಲೆ ಅವಲಂಬಿತವಾಗಿರುತ್ತದೆ. ಐಸಿಸಿ ಪುರುಷರ ಟಿ20 ವಿಶ್ವಕಪ್ಗೆ ಆದರ್ಶ ತಂಡವನ್ನು ಆಯ್ಕೆ ಮಾಡುವುದು ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅವರ ಪ್ರಮುಖ ಕೆಲಸವಾಗಿದೆ ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.
"ತಂಡವು ಉತ್ತಮವಾಗಿದೆ ಎಂದು ತೋರುತ್ತಿದೆ, ಆಸ್ಟ್ರೇಲಿಯಾವು ಭಾರತಕ್ಕೆ ಸವಾಲಾಗಬಹುದು. ಕಳೆದ ವಿಶ್ವಕಪ್ನಿಂದ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಬಲಗೊಂಡಿದ್ದರೂ, ಆಸ್ಟ್ರೇಲಿಯಾ ಹೆಚ್ಚು ಪ್ರಬಲ ಪ್ರತಿಸ್ಪರ್ಧಿಯಾಗಿ ಕಾಣುತ್ತದೆ'' ಎಂದು ಪಾರ್ಥೀವ್ ಅಭಿಪ್ರಾಯ ಪಟ್ಟಿದ್ದಾರೆ.