ಕೋಚ್ ಹುದ್ದೆಯ ನೇಮಕದ ಬಗ್ಗೆ ಮಾತನಾಡಿದ ಗಂಗೂಲಿ
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟೀಮ್ ಇಂಡಿಯಾ ಕೋಚ್ ಹುದ್ದೆಯ ಬಗ್ಗೆ ಮಾತನಾಡಿದರು. ಟೀಮ್ ಇಂಡಿಯಾ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ನೇಮಕಕ್ಕೆ ಕಾರಣವಾದ ಸಂಗತಿಯೇನೆಂದು ತಮಾಷೆಯಾಗಿ ವಿವರಿಸಿದ್ದಾರೆ. ಓರ್ವ ವ್ಯಕ್ತಿ ನೀಡಿದ ದೂರಿನ ಕಾರಣಕ್ಕಾಗಿ ರಾಹುಲ್ ದ್ರಾವಿಡ್ಗೆ ಈ ಕೋಚ್ ಹುದ್ದೆಯ ಜವಾಬ್ಧಾರಿಯನ್ನು ನೀಡಲಾಯಿತು ಎಂದಿದ್ದಾರೆ ಗಂಗೂಲಿ.
ಸೌರವ್ ಗಂಗೂಲಿಗೆ ದೂರು ನೀಡಿದ ಆ ವ್ಯಕ್ತಿ ಯಾರು?
ಬಿಸಿಸಿಐ ಅಧಕ್ಷನಾಗಿರುವ ಸೌರವ್ ಗಂಗೂಲಿ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ನೇಮಕವಾದ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ರಾಹುಲ್ ದ್ರಾವಿಡ್ ಮಗನಿಂದಲೇ ತನಗೆ ಕರೆಯೊಂದು ಬಂದಿತ್ತು. ಆ ಕರೆಯಲ್ಲಿ ದ್ರಾವಿಡ್ ಬಗ್ಗೆ ಅವರ ಪುತ್ರ ದೂರನ್ನು ನೀಡಿದ್ದರು. ಹಾಗಾಗಿ ಆತನ ದೂರನ್ನು ಪರಿಗಣಿಸಿ ದ್ರಾವಿಡ್ಗೆ ಕರೆ ಮಾಡಿ ಕೋಚ್ ಹುದ್ದೆ ಸ್ವೀಕರಿಸಲು ಹೇಳಿದ್ದಾಗಿ ತಮಾಷೆಯಾಗಿ ಸೌರವ್ ಗಂಗೂಲಿ ಹೇಳಿಕೊಂಡಿದ್ದಾರೆ.
ಅಪ್ಪ ತುಂಬಾ ಸ್ಟ್ರಿಕ್ಟ್ ಎಂದಿದ್ದರಂತೆ ದ್ರಾವಿಡ್ ಪುತ್ರ
ಶಾರ್ಜಾದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾನಾಡಿದ ಸೌರವ್ ಗಂಗೂಲಿ "ನನಗೆ ಒಂದು ಕರೆ ಬಂದಿತ್ತು. ಅದರಲ್ಲಿ ನನ್ನ ತಂದೆ ನನ್ನ ಜೊತೆಗೆ ತುಂಬಾ ಸ್ಟ್ರಿಕ್ಟ್ ಆಗಿ ವರ್ತಿಸುತ್ತಾರೆ. ಹಾಗಾಗಿ ನೀವು ಅವರನ್ನು ದೂರವಿರುವಂತೆ ಮಾಡಬೇಕು ಎಂದಿದ್ದರು. ಆ ಕೂಡಲೇ ನಾನು ರಾಹುಲ್ ದ್ರಾವಿಡ್ಗೆ ಕರೆ ಮಾಡಿ ಈಗ ನಿಮಗೆ ರಾಷ್ಟ್ರೀಯ ತಂಡದಲ್ಲಿ ಕರ್ತವ್ಯ ನಿರ್ವಹಿಸುವ ಸಮಯ ಬಂದಿದೆ ಎಂದು ತಿಳಿಸಿದ್ದೆ" ಎಂದು ಸೌರವ್ ಗಂಗೂಲಿ ನಗೆ ಚಟಾಕಿಯನ್ನು ಹಾರಿಸಿದ್ದಾರೆ.
ನಾವು ಜೊತೆಯಾಗಿಯೇ ಬೆಳೆದೆವು
ಇನ್ನು ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಹಾಗೂ ತಮ್ಮ ನಡುವಿನ ಬಾಂಧವ್ಯವನ್ನು ಸೌರವ್ ಗಂಗೂಲಿ ಹೇಳಿಕೊಂಡಿದ್ದಾರೆ. "ನಾವು ಜೊತೆಯಾಗಿಯೇ ಬೆಳೆದೆವು. ಒಂದೆ ಸಮಯದಲ್ಲಿ ವೃತ್ತಿ ಜೀವನವನ್ನು ಆರಂಭಿಸಿದೆವು. ಬಹುತೇಕ ಕಾಲ ಜೊತೆಯಾಗಿ ಆಟವಾಡುತ್ತಾ ಕಾಲ ಕಳೆದೆವು. ಹಾಗಾಗಿ ಆತನನ್ನು ಕೋಚ್ ಆಗಿ ಬಯಸುವುದು ಹಾಗೂ ಆ ಹುದ್ದೆಗೆ ಸ್ವಾಗತಿಸುವುದು ನನಗೆ ಬಹಳ ಸುಲಭವಾಯಿತು" ಎಂದಿದ್ದಾರೆ ಸೌರವ್ ಗಂಗೂಲಿ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿದ ಬಳಿಕ ರಾಹುಲ್ ದ್ರಾವಿಡ್ ಅಂಟರ್ 19 ಹಾಗೂ ಭಾರತ ಎ ತಂಡಕ್ಕೆ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ 2019ರಿಂದ 2021ರವರೆಗೆ ಎನ್ಸಿಎನಲ್ಲಿ ಮುಖ್ಯಸ್ಥರಾಗಿ ಜವಾಬ್ಧಾರಿ ವಹಿಸಿಕೊಂಡಿದ್ದರು. ಇದೀಯ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಸ್ಥಾನವನ್ನು ವಹಿಸಿಕೊಂಡಿದ್ದಾರೆ.,