ಶ್ರೇಷ್ಠ ಆಟಗಾರ
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಯುವಿ ಬಗ್ಗೆ ಮಾತನಾಡುತ್ತ, 'ಚುಟುಕು ಮಾದರಿ ಕ್ರಿಕೆಟ್ನಲ್ಲಿ ದೇಶದಲ್ಲೇ ಶ್ರೇಷ್ಠ ಆಟಗಾರ ಯುವರಾಜ್' ಎಂದು ಕೊಂಡಾಡಿದ್ದಾರೆ. ಯುವಿ ಮುಂಬೈ ಪಾಲಾಗಿದ್ದರ ಬಗ್ಗೆ ಗಂಗೂಲಿ ಟ್ವಿಟರ್ ನಲ್ಲಿ ಖುಷಿ ವ್ಯಕ್ತ ಪಡಿಸಿದ್ದಾರೆ.
ಸಿಕ್ಸ್ ಸಿಕ್ಸ್ ಶೂರ
ಯುವರಾಜ್ ವಿಶ್ವದಾದ್ಯಂತ ಹೆಚ್ಚು ಖ್ಯಾತಿಯಾಗಿದ್ದು ಸಿಕ್ಸ್ ಸಿಕ್ಸ್ ಮೂಲಕ. ಡರ್ಬನ್ನಲ್ಲಿ ನಡೆದಿದ್ದ ಐಸಿಸಿ ವರ್ಲ್ಡ್ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸ್ಟುವರ್ಟ್ ಬ್ರಾಡ್ ಓವರ್ನಲ್ಲಿ ಆರು ಎಸೆತಗಳಿಗೆ ಆರು ಸಿಕ್ಸರ್ ಬಾರಿಸಿದರು. ಈ ಪಂದ್ಯದಲ್ಲಿ ಯುವಿ ಕೇವಲ 16 ಎಸೆತಗಳಿಗೆ 58 ರನ್ ಸಿಡಿಸಿದ್ದರು. ಪಂದ್ಯವನ್ನು ಭಾರತ 18 ರನ್ಗಳಿಂದ ಜಯಿಸಿತ್ತು.
ಅತೀವ ಖುಷಿಯಾಯ್ತು
'ಯುವರಾಜ್ ಅವರನ್ನು ಮುಂಬೈ ಆರಿಸಿದ್ದು ನೋಡಿ ತುಂಬಾ ಖುಷಿಯಾಯ್ತು. ಚುಟುಕು ಕ್ರಿಕೆಟ್ ನಲ್ಲಿ ಯುವರಾಜ್ ನಿಜಕ್ಕೂ ಶ್ರೇಷ್ಠ ಆಟಗಾರ. ಯುವಿಗೆ ನಾನು ಮನತುಂಬಿ ಹಾರೈಸುತ್ತೇನೆ' ಎಂದು ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದರು.
ಯುವಿಗೆ ಮೊದಲೇ ಗೊತ್ತಿತ್ತು
ಐಪಿಎಲ್ ಹರಾಜಿನ ವೇಳೆ ತಾನು ಆರಂಭಿಕ ಸುತ್ತುಗಳಲ್ಲಿ ಆಯ್ಕೆಯಾಗೋಲ್ಲ ಎಂಬುದು ಕೆಚ್ಚೆದೆಯ ಮಹರಾಜ ಯುವರಾಜ ಅವರಿಗೂ ಗೊತ್ತಿತ್ತಂತೆ. ಹರಾಜಿನ ಬಳಿಕ ಯುವಿ ಇದನ್ನು ಹೇಳಿಕೊಂಡಿದ್ದರು. ಈಗ ಫಾರ್ಮ್ ಕಳೆದುಕೊಂಡು ಅವಮಾನ ಅನುಭವಿಸಿದ್ದ ಯುವಿ 2015ರ ಐಪಿಎಲ್ ಆವೃತ್ತಿಯಲ್ಲಿ ಅತ್ಯಧಿಕ ಮೊತ್ತಕ್ಕೆ ಹರಾಜಾಗಿದ್ದರು. ಅಂತೂ ಯುವಿ ಈ ಬಾರಿ ಮುಂಬೈ ಪರ ಭರ್ಜರಿ ಬ್ಯಾಟ್ಬೀಸುವುದು ನಿರೀಕ್ಷಿತ. ಯಾಕೆಂದರೆ ಅವಮಾನಕ್ಕೆ ಸಿಡಿಸಿ ನಿಲ್ಲಿಸುವ ಶಕ್ತಿಯಿದೆ!