ನವದೆಹಲಿ, ಜೂನ್ 2: ಈ ವರ್ಷದ ಅಂತ್ಯಕ್ಕೆ ಅಂದರೆ ಸೆಪ್ಟೆಂಬರ್ ವೇಳೆಗೆ 7 ವರ್ಷಗಳ ನಿಷೇಧ ಶಿಕ್ಷೆಯನ್ನು ಪೂರ್ಣಗೊಳಿಸಲಿರುವ ಭಾರತದ ಅನುಭವಿ ವೇಗಿ ಎಸ್ ಶ್ರೀಶಾಂತ್ ತನ್ನ ನೆಚ್ಚಿನ ಆಲ್ ಟೈಮ್ ಒಡಿಐ ತಂಡ ಪ್ರಕಟಿಸಿದ್ದಾರೆ. ಎರಡು ಬಾರಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಶ್ರೀಶಾಂತ್, ತನ್ನ ನೆಚ್ಚಿನ ಏಕದಿನ ತಂಡದಲ್ಲಿ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿಯನ್ನು ನಾಯಕರಾಗಿ ಆರಿಸಿದ್ದಾರೆ.
ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟದತ್ತ ಕರೆದೊಯ್ದಿದ್ದು 'ಈತ' ಎಂದ ಯೂಸುಫ್ ಪಠಾಣ್
ಸದ್ಯ ಕೊರೊನಾವೈರಸ್ ಲಾಕ್ಡೌನ್ನಲ್ಲಿರುವ ಶ್ರೀಶಾಂತ್, ಮನೆಯಲ್ಲೇ ಜಿಮ್ ಮಾಡುತ್ತ, ಸಣ್ಣಗೆ ದೈಹಿಕ ವ್ಯಾಯಾಮ ಮಾಡುತ್ತ ಫಿಟ್ನೆಸ್ ಕಾಯ್ದುಕೊಳ್ಳುತ್ತಿದ್ದಾರೆ. ಲಾಕ್ ಡೌನ್ ಸಂಪೂರ್ಣ ಸಡಿಲಿಕೆಯಾದ ಬಳಿಕ, ನಿಷೇಧ ಕೊನೆಗೊಂಡ ಬಳಿಕ ಕ್ರಿಕೆಟ್ನಲ್ಲಿ ತೊಡಗಿಕೊಳ್ಳುವ ಯೋಜನೆಯಲ್ಲಿ ಕೇರಳ ವೇಗಿ ಶ್ರೀಶಾಂತ್ ಇದ್ದಾರೆ.
ಏಕದಿನದಲ್ಲಿ ವೇಗದ 10,000 ರನ್ ದಾಖಲೆ ಬರೆದ ಟಾಪ್ 5 ಬ್ಯಾಟ್ಸ್ಮನ್ಗಳು
ಶ್ರೀಶಾಂತ್ ಆರಿಸಿದ ತಂಡದಲ್ಲಿ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್, ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ, ದಕ್ಷಿಣ ಆಫ್ರಿಕಾ ಆಲ್ ರೌಂಡರ್ ಜಾಕ್ ಕ್ಯಾಲೀಸ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸೇರಿದಂತೆ ದಂತಕತೆಗಳು ಹೆಚ್ಚಿದ್ದಾರೆ. ಈ ತಂಡ ಬಲಿಷ್ಠವಾಗಿಯೂ ಇದೆ.
ಜಾರ್ಜ್ ಅಂತ್ಯಕ್ರಿಯೆಯ ವೆಚ್ಚ ಭರಿಸಲು ಮುಂದಾದ ಬಾಕ್ಸರ್ ಫ್ಲಾಯ್ಡ್ ಮೇವೆದರ್
ಶ್ರೀಶಾಂತ್ ನೆಚ್ಚಿನ ಆಲ್ ಟೈಮ್ ಒಡಿಐ XI
ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ (ಸಿ), ಬ್ರಿಯಾನ್ ಲಾರಾ, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಯುವರಾಜ್ ಸಿಂಗ್, ಎಂಎಸ್ ಧೋನಿ (ವಿಕೆ), ಜಾಕ್ ಕ್ಯಾಲಿಸ್, ಶೇನ್ ವಾರ್ನ್, ಅಲನ್ ಡೊನಾಲ್ಡ್, ಗ್ಲೆನ್ ಮೆಕ್ಗ್ರಾತ್, ಶ್ರೀಶಾಂತ್ (12ನೇ ವ್ಯಕ್ತಿ).