ಮಾಲಿಂಗಗೆ ವಿದಾಯದ ಪಂದ್ಯ
ಬಾಂಗ್ಲಾದೇಶ ವಿರುದ್ಧದ ಸರಣಿಯ ಮೊದಲ ಪಂದ್ಯ ಶ್ರೀಲಂಕಾದ ಅನುಭವಿ ವೇಗದ ಬೌಲರ್ ಲಸಿತ್ ಮಾಲಿಂಗ ಅವರ ಏಕದಿನ ಕ್ರಿಕೆಟ್ ವೃತ್ತಿ ಬದುಕಿನ ಅಂತಿಮ ಪಂದ್ಯವಾಗಿದೆ. ಈ ಪಂದ್ಯದ ಮೂಲಕ ಮಾಲಿಂಗ ಒಡಿಐ ಕ್ರಿಕೆಟ್ನಿಂದ ನಿವೃತ್ತಿ ಹೊಂದುತ್ತಿರುವ ಸಂಗತಿಯನ್ನು ನಾಯಕ ಕರುಣಾರತ್ನೆ ಈಗಾಗಲೇ ಖಾತ್ರಿ ಪಡಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಮಾಲಿಂಗ್ ವೃತ್ತಿ ಬದುಕು ಮುಂದುವರಿಸುವ ಕಡೆಗೆ ಎದುರು ನೋಡುತ್ತಿದ್ದಾರೆ. ಸರಣಿಯ ಅಂತಿಮ ಎರಡು ಪಂದ್ಯಗಳಲ್ಲಿ ಮಾಲಿಂಗ ಸ್ಥಾನದಲ್ಲಿ ದಸುನ್ ಶನಕ ಕಣಕ್ಕಿಳಿಯಲಿದ್ದಾರೆ.
ಏಕದಿನ ಸರಣಿಗೆ ಶ್ರೀಲಂಕಾ ತಂಡ
ದಿಮುತ್ ಕರುಣಾರತ್ನೆ (ನಾಯಕ), ಕುಶಲ್ ಪೆರೆರಾ, ಅವಿಷ್ಕ ಫರ್ನಾಂಡೊ, ಕುಶಲ್ ಮೆಂಡಿಸ್, ಏಂಜಲೊ ಮ್ಯಾಥ್ಯೂಸ್, ಲಾಹಿರು ತಿರಿಮನ್ನೆ, ಶೆಹಾನ್ ಜಯಸೂರ್ಯ, ಧನಂಜಯ ಡಿ'ಸಿಲ್ವಾ, ವಹಿಂದು ಹಸರಂಗ, ಅಖಿಲ ಧನಂಜಯ, ಲಸಿತ್ ಮಾಲಿಂಗ(ಮೊದಲ ಪಂದ್ಯಕ್ಕೆ), ನುವಾನ್ ಪ್ರದೀಪ್, ಲಾಹಿರು ಕುಮಾರ, ತಿಸಾರ ಪೆರೆರಾ,ಇಸುರು ಉದನಾ, ಕಸುನ್ ರಂಜಿತಾ, ದಸುನ್ ಶನಕ (2 ಮತ್ತು 3ನೇ ಪಂದ್ಯಕ್ಕೆ).
ಬಾಂಗ್ಲಾದೇಶ ತಂಡ
ಮಶ್ರಫೆ ಮೊರ್ತಾಝ (ನಾಯಕ), ತಮಿಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಮುಷ್ಫಿಕರ್ ರಹೀಮ್, ಮಹ್ಮುದುಲ್ಲಾ ರಿಯಾದ್, ಮೊಹಮ್ಮದ್ ಮಿಥುನ್, ಮೊಸಾದೆಕ್ ಹುಸೇನ್, ಸಬ್ಬೀರ್ ರೆಹಮಾನ್, ರುಬೆಲ್ ಹುಸೇನ್, ಮುಸ್ತಾಫಿಝುರ್ ರೆಹಮಾನ್, ಅನಾಮುಲ್ ಹಕ್, ಮೆಹ್ದಿ ಹಸನ್ ಮಿರಾಝ್, ಮೊಹಮ್ಮದ್ ಸೈಫುದ್ದೀನ್ ಮತ್ತು ತೈಜುಲ್ ಇಸ್ಲಾಮ್.
ಲಸಿತ್ ಏಕದಿನ ಕ್ರಿಕೆಟ್ ಸಾಧನೆ
225 ಪಂದ್ಯ
335 ವಿಕೆಟ್
6/38 ಶ್ರೇಷ್ಠ ಸಾಧನೆ
29.02 ಸರಾಸರಿ
5.36 ಎಕಾನಮಿ
32.4 ಸ್ಟ್ರೈಕ್ ರೇಟ್