ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಜೊತೆಗಿನ ಒಪ್ಪಂದದ ವಿವಾದದ ಹೊರತಾಗಿಯೂ ಶ್ರೀಲಂಕಾ ಕ್ರಿಕೆಟ್ ಆಟಗಾರರು ಈ ತಿಂಗಳು ಇಂಗ್ಲೆಂಡ್ಗೆ ಪ್ರವಾಸ ಕೈಗೊಳ್ಳಲು ಒಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವೇತನ ಒಪ್ಪಂದಕ್ಕೆ ಸಂಬಂಧಿಸಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಮತ್ತು ಅಲ್ಲಿನ ಆಟಗಾರರ ಮಧ್ಯೆ ಅಸಮಾಧಾನ ಇದೆ.
ಸರ್ಕಾರಿ ಹುದ್ದೆ ಹೊಂದಿರುವ ಭಾರತೀಯ 7 ಖ್ಯಾತ ಕ್ರಿಕೆಟಿಗರಿವರು!
ಕಡಿಮೆ ಸಂಬಳ ಪಡೆದು ಹೆಚ್ಚು ಪ್ರದರ್ಶನ ನೀಡಬೇಕು ಎನ್ನುವ ರೀತಿಯಲ್ಲಿರುವ ಶ್ರೀಲಂಕಾ ಕ್ರಿಕೆಟ್ ಬೋರ್ಡ್ನ ಹೊಸ ಒಪ್ಪಂದಕ್ಕೆ ಅಲ್ಲಿನ ಆಟಗಾರರು ಒಪ್ಪಿಗೆ ನೀಡಿಲ್ಲ. ಟೆಸ್ಟ್ ನಾಯಕ ದಿಮುತ್ ಕರುಣರತ್ನೆ ಮತ್ತು ಏಕದಿನ ನಾಯಕ ಕುಸಾಲ್ ಪೆರೆರಾ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಈ ಸಮಸ್ಯೆ ಇನ್ನೂ ಬಗೆ ಹರಿಯದೆ ಉಳಿದುಕೊಂಡಿದೆ.
ನೂತನ ಒಪ್ಪಂದ ಪಾರದರ್ಶಕವಾಗಿಲ್ಲ ಎಂದು ಆಟಗಾರರು ಭಾವಿಸಿದ್ದಾರೆ ಎಂದು ಶ್ರೀಲಂಕಾದ ಮಾಧ್ಯಗಳಲ್ಲಿ ವರದಿಯಾಗಿರುವುದಾಗಿ ತಿಳಿದು ಬಂದಿದೆ. 'ಅವರು ಹೊಸ ಒಪ್ಪಂದಕ್ಕೆ ಸಹಿ ಹಾಕದೆಯೇ ಇಂಗ್ಲೆಂಡ್ ಪ್ರವಾಸ ಸರಣಿಯನ್ನು ಆಡಲಿದ್ದಾರೆ,' ಎಂದು ಆಟಗಾರರ ಪ್ರತಿನಿಧಿ ಇಎಸ್ಪಿಎನ್ಕ್ರಿಕ್ಇನ್ಫೋಗೆ ಮಾಹಿತಿ ನೀಡಿದ್ದಾರೆ.
ಐಪಿಎಲ್ 2021 ಪುನರಾರಂಭ, ಫೈನಲ್ನ ಪಕ್ಕಾ ದಿನಾಂಕ ಪ್ರಕಟ!
'ಲಂಕಾ ಆಟಗಾರರು ಸ್ವಯಂ ಪ್ರೇರಿತ ಘೋಷಣೆಗೆ ಸಹಿ ಹಾಕಿದ್ದಾರೆ. ಆದರೆ ಇದರಲ್ಲಿ ಆಟಗಾರರ ಗಳಿಕೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹಾಗಂತ ಆಟಗಾರರು ಯಾವತ್ತಿಗೂ ತಂಡಕ್ಕಾಗಿ ಆಡಲು ಬದ್ಧರಾಗಿದ್ದಾರೆ,' ಎಂದು ಆ ಪ್ರತಿನಿಧಿ ಹೇಳಿದ್ದಾರೆ.
ಶ್ರೀಲಂಕಾ-ಇಂಗ್ಲೆಂಡ್ ಸರಣಿ ಜೂನ್ 23ರಿಂದ ಆರಂಭಗೊಳ್ಳಲಿದೆ. ಪ್ರವಾಸ ಸರಣಿಯು ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಐ ಪಂದ್ಯಗಳನ್ನು ಒಳಗೊಂಡಿರಲಿದೆ. ಭಾರತ-ನ್ಯೂಜಿಲೆಂಡ್ ಟೆಸ್ಟ್ ಮುಗಿಯುತ್ತಲೇ ಲಂಕಾ-ಇಂಗ್ಲೆಂಡ್ ಸರಣಿ ಆರಂಭವಾಗಲಿದೆ.