ಕೊಲಂಬೋ, ಮಾರ್ಚ್ 31: ಶ್ರೀಲಂಕಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ದಿಮುತ್ ಕರುಣರತ್ನೆ ಅವರನ್ನು ಭಾನುವಾರ (ಮಾರ್ಚ್ 31) ಮುಂಜಾನೆ ಕೊಲಂಬೋದಲ್ಲಿ ಬಂದಿಸಲಾಗಿದೆ. ಕುಡಿದು ವಾಹನ ಚಲಾಯಿಸಿದ ಆರೋಪದ ಮೇಲೆ ಕರುಣರತ್ನೆ ಅವರನ್ನು ಬಂಧಿಸಲಾಗಿತ್ತು.
ಐಪಿಎಲ್: ಶಾ ಬ್ಯಾಟಿಂಗ್ ಸೊಗಸು, ಪಂದ್ಯ ಟೈ, ಡೆಲ್ಲಿಗೆ ಸೂಪರ್ ಗೆಲುವು!
ಪೊಲೀಸರ ಪ್ರಕಾರ, ಭಾನುವಾರ 5:40 amಗೆ ಕರುಣರತ್ನೆ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಅನಂತರ ದಿಮುತ್ಗೆ ಬೇಲ್ ಲಭಿಸಿತ್ತು. ಕರುಣರತ್ನೆ ಅವರಿಂದಾಗಿ ಆದ ವಾಹನ ಅಪಘಾತದಿಂದ ಮತ್ತೊಂದು ವಾಹನದ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎನ್ನಲಾಗಿದೆ.
#BREAKING@OfficialSLC Cricket Test Captain Dimuth Karunaratne was arrested today following an accident while driving drunk in Borella!
— Crickpost.com (@crickpostnews) March 31, 2019
The vehicle of the cricketer had crashed into a three-wheeler injuring the driver of the three-wheeler.
Karunaratne was later released on bail. pic.twitter.com/FlwpeJ06JM
ಕರುಣರತ್ನೆ ಮುಂದಾಳತ್ವದ ಶ್ರೀಲಂಕಾ ತಂಡ ಶುಕ್ರವಾರ (ಮಾರ್ಚ್ 29) ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿತ್ತು. ಲಸಿತ್ ಮಾಲಿಂಗ ಗಮನಾರ್ಹ ಪ್ರದರ್ಶನ ನೀಡದಿದ್ದರಿಂದ ಶ್ರೀಲಂಕಾ ನಿಗದಿತ ಓವರ್ ನಾಯಕತ್ವವೂ ಕರುಣರತ್ನೆ ಪಾಲಿಗೆ ಸಿಗಲಿದೆ ಎಂಬ ಗಾಳಿ ಸುದ್ದಿ ಸದ್ಯ ಹರಿದಾಡುತ್ತಿತ್ತು.