ಸಚಿನ್ ಬಗ್ಗೆ ಶ್ರೀರೆಡ್ಡಿ ಹೇಳಿರುವುದೇನು?
''ರೋಮ್ಯಾಂಟಿಕ್ ಕ್ರಿಕೆಟರ್ ಎಂದೇ ಗುರುತಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವರು, ಹೈದರಾಬಾದ್ ಗೆ ಬಂದಿದ್ದಾಗ ಅವರ ಜೊತೆ ಚಾರ್ಮಿಂಗ್ ಹುಡುಗಿ ರೋಮ್ಯಾನ್ಸ್ ಮಾಡಿದ್ದರು. ಚಾಮುಂಡೇಶ್ವರ್ ಸ್ವಾಮಿ ಇವರಿಗೆ ಮಧ್ಯವರ್ತಿಯಾಗಿದ್ದರು. ಗ್ರೇಟ್ ವ್ಯಕ್ತಿಗಳು ಅದ್ಭುತವಾಗಿ ಆಟವಾಡ್ತಾರೆ, ಅಂದ್ರೆ ರೋಮ್ಯಾನ್ಸ್ ಚೆನ್ನಾಗಿ ಮಾಡ್ತಾರೆ'' ಎಂದು ವ್ಯಂಗ್ಯ ಮಾಡಿದ್ದಾರೆ'' ಎಂದು ಬರೆದುಕೊಂಡಿದ್ದಾರೆ.
ಮುಖಕ್ಕೆ ಮಂಗಳಾರತಿ
ಸಚಿನ್ ಅವರ ಬಗ್ಗೆ ಈ ರೀತಿ ಕಾಮೆಂಟ್ ಮಾಡಿದ ಶ್ರೀರೆಡ್ಡಿ ಕ್ರಿಕೆಟ್ ದೇವರ ಅಭಿಮಾನಿಗಳು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. 'ನಿನ್ನ ಪಬ್ಲಿಸಿಟಿಗೋಸ್ಕರ ಸಚಿನ್ ಅಂತಹ ದಿಗ್ಗಜನ ಹೆಸರು ದುರ್ಬಳಕೆ ಮಾಡಿಕೊಳ್ಳುವುದು ಸರಿಯಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇಷ್ಟು ದಿನ ನೀನು ಆರೋಪ ಮಾಡಿದ್ದಾಗ ಅದರಲ್ಲಿ ಏನೋ ವಿಷ್ಯವಿದೆ ಎಂದು ಕೊಂಡಿದ್ದೆ. ಆದ್ರೆ, ಇಂದು ನೀನು ಬರಿ ಸುಳ್ಳು ಎಂದು ಗೊತ್ತಾಗಿದೆ' ಎಂದು ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ.
ಸಚಿನ್ ಬಗ್ಗೆ ಮಾತನಾಡಲು ನಾಚಿಕೆಯಾಗಬೇಕು
'ನೀನು ಯಾರ ಬಗ್ಗೆ ಬೇಕಾದರೂ ಮಾತಾಡು. ಅದು ನಿನ್ನ ಹಕ್ಕು. ಆದ್ರೆ, ನಮ್ಮ ಸಚಿನ್ ಬಗ್ಗೆ ಮಾತನಾಡುವ ಹಕ್ಕಿಲ್ಲ ನಿನಗೆ. ಅವರು ನಮ್ಮ ಹೃದಯದಲ್ಲಿದ್ದಾರೆ. ಅವರ ಬಗ್ಗೆ ನಿನಗೆ ಗೊತ್ತಿಲ್ಲ. ನಿಮ್ಮ ರಾಜ್ಯದಲ್ಲೂ ಅವರೊಂದು ಗ್ರಾಮವನ್ನ ದತ್ತು ಪಡೆದಿದ್ದಾರೆ. ಹೋಗಿ ಆ ಊರನ್ನ ನೋಡಿ. ಸಚಿನ್ ಅವರ ಬಗ್ಗೆ ಮಾತನಾಡಲು ನಿಮಗೆ ನಾಚಿಕೆಯಾಗಬೇಕು. ನೀವು ನಿಜವಾದ ಭಾರತೀಯರಾಗಿದ್ದರೇ ಸಚಿನ್ ಬಗ್ಗೆ ಹೀಗೆ ಮಾತನಾಡುತ್ತಿರಲಿಲ್ಲ'' ಎಂದು ಬೈಯುತ್ತಿದ್ದಾರೆ.
ಇಂತವರನ್ನ ಪ್ರೋತ್ಸಾಹಿಸಬೇಡಿ
'ಸಚಿನ್ ಅವರು 18 ವರ್ಷವಿದ್ದಾಗಲೇ ಅವರ ಹಿಂದೆ ಎಷ್ಟೋ ಹುಡುಗಿಯರು ಬಿದ್ದಿದ್ದರು. ಅವರು ಮನಸ್ಸು ಮಾಡಿದ್ರೆ ಅಂದೇ ಬೇರೆ ಜೀವನ ಮಾಡಬಹುದಿತ್ತು. ಆದ್ರೆ, ಅವರೊಬ್ಬ ಜಂಟಲ್ ಮ್ಯಾನ್. ಇಂತವ ಕ್ರೂರ ಮನಸ್ಸಿನ ವ್ಯಕ್ತಿಗಳನ್ನ ಯಾರೂ ಪ್ರೋತ್ಸಾಹಿಸಬೇಡಿ'' ಎಂದು ಮನವಿ ಮಾಡುತ್ತಿದ್ದಾರೆ.
ದೂರು ನೀಡಲು ನಿರ್ಧಾರ
'ಸಚಿನ್ ತೆಂಡೂಲ್ಕರ್ ಅವರ ಬಗ್ಗೆ ಶ್ರೀರೆಡ್ಡಿ ನೀಡಿರುವ ಈ ಹೇಳಿಕೆಯನ್ನ ಖಂಡಿಸಿ, ವ್ಯಕ್ತಿಯೊಬ್ಬ ಮುಂಬೈನಲ್ಲಿ ದೂರು ನೀಡಲು ನಿರ್ಧರಿಸಿರುವುದಾಗಿ ಹೇಳಿದ್ದಾನೆ. ಯಾವಾಗಲೂ ಪ್ರಚಾರಕ್ಕಾಗಿ ಹೀಗೆ ಮಾಡ್ತಾರೆ. ಈ ಸಲ ಈಕೆಗೆ ಬುದ್ದಿಕಲಿಸಬೇಕಾಗಿದೆ'' ಎಂದಿದ್ದಾರೆ.