ಕಣ್ಣೆದುರೇ ಕುಸಿದ ಬಿದ್ದ ಮಹಿಳೆ
ಬಸ್ನ ಮುಂಬದಿಯ ಸೀಟ್ನಲ್ಲಿ ಕುಳಿತಿದ್ದ ತಮಿಮ್ ಮತ್ತು ಮಹಮದುಲ್ಲಾ ಇಬ್ಬರೂ ಅಲ್ಲಿ ನಡೆಯುತ್ತಿದ್ದ ಘಟನೆಯನ್ನು ಕಣ್ಣಾರೆ ವೀಕ್ಷಿಸುತ್ತಿದ್ದರು. ತೀವ್ರ ಆತಂಕಕ್ಕೊಳಗಾದ ತಮಿಮ್, ಯಾರೂ ಓಡಬೇಡಿ. ಎಲ್ಲರೂ ಸೀಟಿನಿಂದ ಈಚೆ ಬಂದು ಮಲಗಿಕೊಳ್ಳಿ ಎಂದು ಕೂಗಿದರು.
ಕೆಲವೇ ಕ್ಷಣಗಳ ಮುನ್ನ ಬಸ್ನ ಹಿಂಬದಿಯ ಕಿಟಕಿ ಬಳಿ ಕುಳಿತಿದ್ದ ಶ್ರೀನಿವಾಸ್ ಅವರಿಗೆ ಅಲ್ಲೇನೋ ನಡೆಯುತ್ತಿದೆ ಎಂಬುದರ ಸುಳಿವು ಸಿಕ್ಕಿತ್ತು. ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಏಕಾಏಕಿ ಕುಸಿದು ಬಿದ್ದರು. ಅವರು ತಲೆಸುತ್ತಿ ಬಿದ್ದಿರಬಹುದು ಎಂದು ಭಾವಿಸಿದ್ದೆ. ಆಕೆಗೆ ಸಹಾಯ ಮಾಡಲು ಕೂಡಲೇ ಬಸ್ಅನ್ನು ನಿಲ್ಲಿಸಿದೆವು. ಆಕೆಯ ಜತೆಗಿದ್ದ ಬಾಲಕನೊಬ್ಬ ಆಕೆಯನ್ನು ಮೇಲೆತ್ತುವಾಗ ರಕ್ತ ಹರಿದು ಬರುತ್ತಿತ್ತು. ಅಲ್ಲೇನೂ ಘಟನೆ ಸಂಭವಿಸುತ್ತಿದೆ ಎಂಬುದು ಅರ್ಥವಾಯಿತು. ಆಗಲೇ ತಮಿಮ್ ಎಲ್ಲರನ್ನೂ ಎಚ್ಚರಿಸಿದರು.
ಟೆಸ್ಟ್ ಕ್ರಿಕೆಟ್ : ಐರ್ಲೆಂಡ್ ವಿರುದ್ಧ ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ಜಯ
ನಿದ್ರೆಯೇ ಸುಳಿಯುತ್ತಿಲ್ಲ
ದಾಳಿ ನಡೆದು ಎರಡು ದಿನ ಕಳೆದರೂ ಶ್ರೀನಿವಾಸ್ ಅವರಿಗೆ ಇನ್ನೂ ಸರಿಯಾಗಿ ನಿದ್ರಿಸಲು ಸಾಧ್ಯವಾಗುತ್ತಿಲ್ಲ. ಬಾಂಗ್ಲಾದ ಆಟಗಾರರ ಪರಿಸ್ಥಿತಿಯೂ ಬೇರೆಯಾಗಿರಲಿಲ್ಲ. ತಮ್ಮ ವೈಯಕ್ತಿಕ ಕೊಠಡಿಗಳಿಗೆ ತೆರಳಲು ಸಾಧ್ಯವಾಗದೆ ಎಲ್ಲರೂ ನಾಯಕನ ಕೊಠಡಿಯಲ್ಲಿಯೇ ಬೆಳಗಿನ ಜಾವದವರೆಗೂ ಕುಳಿತು ಕಾಲ ಕಳೆದಿದ್ದರು.
ODI rankings: ಆಲ್ ರೌಂಡರ್ ಜಾಧವ್ ಜಿಗಿತ, ಕೊಹ್ಲಿ-ಬೂಮ್ರಾಗೆ ಅಗ್ರಸ್ಥಾನ!
ಬಸ್ ನಿಂತಿದ್ದ ಸ್ಥಳದತ್ತ ಸುಮಾರು 50-60 ಮಂದಿ ಓಡಿಬಂದಿದ್ದರು. ದಾಳಿಕೋರನ ಬಗ್ಗೆ ಮಾಹಿತಿ ನೀಡಿದ ವ್ಯಕ್ತಿಯೊಬ್ಬರು ಬಸ್ನಿಂದ ಕೆಳಕ್ಕೆ ಇಳಿಯದಂತೆ ಸೂಚಿಸಿದರು. ಈ ವೇಳೆ ತಮಿಮ್, ಕೆಲವು ಆಟಗಾರರನ್ನು ಮಸೀದಿಗೆ ಕರೆದೊಯ್ದಿದ್ದ ಕ್ರಿಕ್ ಇನ್ಫೋದ ಪತ್ರಕರ್ತ ಮೊಹಮ್ಮದ್ ಇಸ್ಲಾಂ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಆದರೆ, ಅದು ತಮಾಷೆ ಎಂದೇ ಇಸ್ಲಾಂ ಭಾವಿಸಿದ್ದರು. ತಮಿಮ್ ಪುನಃ ಕರೆ ಮಾಡಿ ಗುಂಡಿನ ಸದ್ದು ಆಲಿಸುವಂತೆ ಹೇಳಿದ್ದರು.
|
ಬಸ್ ಒಳಗೇ ಮಲಗಿದರು
ಬಸ್ನಲ್ಲಿ ಕುಳಿತಿದ್ದ ಅಟಗಾರರಲ್ಲಿ ವಿಪರೀತ ಭಯ ಆವರಿಸಿತ್ತು. ಬಸ್ನಿಂದ ಇಳಿದು ಓಡೋಣ ಎಂದು ಒಬ್ಬರು ಸಲಹೆ ಕೊಟ್ಟರು. ಆದರೆ, ಎಷ್ಟು ಮಂದಿ ದಾಳಿಕೋರರು ಇದ್ದಾರೆ ಎನ್ನುವುದೇ ತಿಳಿದಿಲ್ಲ. ಒಂದು ವೇಳೆ ಹೊರಭಾಗದಲ್ಲಿ ದಾಳಿಕೋರರಿದ್ದು ಅವರ ಎದುರೇ ಓಡಿದರೆ ಏನು ಮಾಡುವುದು? ಬಸ್ನ ಹಿಂದೆ ಮತ್ತು ಮುಂದೆ ಕಾರ್ ನಿಲ್ಲಿಸಿದ್ದರಿಂದ ಬಸ್ಅನ್ನು ಚಲಾಯಿಸಲೂ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಎಲ್ಲರೂ ಬಸ್ ಒಳಗೇ ಮಲಗಿಕೊಳ್ಳುವುದಾಗಿ ನಿರ್ಧರಿಸಿದರು.
ಜೀವ ಉಳಿಸಿದ ಸುದ್ದಿಗೋಷ್ಠಿ
ಘಟನೆಗೂ ಮುನ್ನ ಬಾಂಗ್ಲಾದೇಶಿ ಕ್ರಿಕೆಟಿಗರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಅದರ ಆಯೋಜನೆಯಲ್ಲಿ ಆದ ವಿಳಂಬ ಕ್ರಿಕೆಟಿಗರ ಜೀವ ಉಳಿಸಿತು. ಹತ್ತು ನಿಮಿಷ ಮುಂಚಿತವಾಗಿಯೇ ಮಸೀದಿಗೆ ಹೋಗಲು ನಿರ್ಧರಿಸಲಾಗಿತ್ತು. ಆದರೆ, ಮಹಮ್ಮದುಲ್ಲಾ ಅವರು ನಡೆಸಬೇಕಿದ್ದ ಸುದ್ದಿಗೋಷ್ಠಿ ಹತ್ತು ನಿಮಿಷ ತಡವಾಗಿ ಆರಂಭವಾಗಿತ್ತು. ಅಲ್ಲದೆ, ಅಲ್ಲಿ ಪ್ರಶ್ನೆಗಳ ಸಂಖ್ಯೆಯೂ ಹೆಚ್ಚಿತ್ತು. ಮಹಮ್ಮದುಲ್ಲಾ ಸುದ್ದಿಗೋಷ್ಠಿ ಮುಗಿಸಿ ಬರುವವರೆಗೂ ಡ್ರೆಸ್ಸಿಂಗ್ ರೂಮ್ನಲ್ಲಿಯೇ ಉಳಿದವರು ಫುಟ್ಬಾಲ್ ಆಡುತ್ತಿದ್ದರು.
ಆ ಮಧ್ಯಾಹ್ನ 18 ಮಂದಿ ಮಸೀದಿಗೆ ತೆರಳಿದ್ದರು. ಶ್ರೀನಿವಾಸ್ ಹಾಗೂ ತಂಡದಲ್ಲಿರುವ ಮತ್ತೊಬ್ಬ ಹಿಂದೂ ಸೌಮ್ಯ ಸರ್ಕಾರ್ ಇಬ್ಬರೂ ಆಟಗಾರರನ್ನು ಮಸೀದಿ ಹೊರಭಾಗದಲ್ಲಿ ಬಿಟ್ಟು ಕ್ಯಾಬ್ನಲ್ಲಿ ಹೋಟೆಲ್ಗೆ ಮರಳುವುದಾಗಿ ನಿರ್ಧರಿಸಿದ್ದರು. ಒಂದು ವಾರದ ಹಿಂದೆ ವೆಲ್ಲಿಂಗ್ಟನ್ನಲ್ಲಿಯೂ ಶ್ರೀನಿವಾಸ್ ಮತ್ತು ಸೌಮ್ಯ ಸರ್ಕಾರ್, ಮಸೀದಿಗೆ ಆಟಗಾರರನ್ನು ಬಿಟ್ಟು ಅವರು ಬರುವವರೆಗೂ ಕಾದು ಅವರೊಂದಿಗೆ ಹೋಟೆಲ್ಗೆ ಮರಳಿದ್ದರು.
|
ವಿಲಿಯಮ್ಸನ್, ಟೇಲರ್ ಸಂದೇಶ
ಘಟನೆ ಬಳಿಕ ಪೊಲೀಸರು ಪ್ರದೇಶವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡ ಬಳಿಕ ಬಸ್ನಿಂದ ಹೊರಬರುವಂತೆ ಆಟಗಾರರಿಗೆ ತಿಳಿಸಿದ್ದರು. ಆಗಲೂ ನಡೆದುಕೊಂಡು ಹೋಗುವಂತೆ ಮತ್ತು ಓಡದಂತೆ ತಮಿಮ್ ಹಾಗೂ ಮುಷ್ಫೀಕರ್ ರಹೀಂ ಮತ್ತೆ ಮತ್ತೆ ಎಚ್ಚರಿಸಿದ್ದರು.
ಆಟಗಾರರು ಅಲ್ಲಿಂದ ಹೋಟೆಲ್ಗೆ ತೆರಳಿದರು. ಅಲ್ಲಿ ಭಾರತದವರಾದ ಬಾಂಗ್ಲಾ ಸ್ಪಿನ್ ಕೋಚ್ ಸುನಿಲ್ ಜೋಶಿ ಮತ್ತು ಇತರೆ ಸಿಬ್ಬಂದಿ ಇದ್ದರು. ಅವರನ್ನು ಕಂಡ ಕೂಡಲೇ ಅಟಗಾರರಲ್ಲಿ ಕಣ್ಣೀರು ಉಕ್ಕತೊಡಗಿತು. ಜೋಶಿ ಮತ್ತು ಇತರೆ ಸಿಬ್ಬಂದಿ ಅವರನ್ನು ಸಮಾಧಾನಪಡಿಸಲು ಸಾಕಷ್ಟು ಪ್ರಯತ್ನಿಸಿದರು.
ಸಂಜೆ ವೇಳೆಗೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ರಾಸ್ ಟೇಲರ್ ಕೂಡ ಶ್ರೀನಿವಾಸ್ ಅವರಿಗೆ ಸಂದೇಶ ರವಾನಿಸಿ ಧೈರ್ಯ ತುಂಬಿದ್ದರು.
ಆ ಭಯಾನಕ ಘಟನೆಯ ನೆನಪುಗಳನ್ನು ಶ್ರೀನಿವಾಸ್ ಹಂಚಿಕೊಳ್ಳುವಾಗ ಅವರ ಕಣ್ಣ ಮುಂದೆ ದೃಶ್ಯಗಳು ಮರುಕಳಿಸುತ್ತಿದ್ದವು.