ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಬಿಡುಗಡೆಯೊಳಿಸಲಾಯಿತು. ಇದರಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಉಸ್ಮಾನ್ ಖವಾಜಾ ಅವರನ್ನು ಗುತ್ತಿಗೆಯಿಂದ ಹೊರಗಿಟ್ಟದ್ದು ಆಶ್ಚರ್ಯಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಯ ಬಗ್ಗೆ ಸ್ವತಃ ಆಸಿಸ್ ಬ್ಯಾಟ್ಸ್ಮನ್ ಖವಾಜ ಆಘಾತ ವ್ಯಕ್ತಪಡಿಸಿದ್ದಾರೆ.
ಫಾಕ್ಸ್ ಸ್ಪೋರ್ಟ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಉಸ್ಮಾನ್ ಖವಾಜ ಆಸ್ಟ್ರೇಲಿಯಾದ ಟಾಪ್ ಆರು ಬ್ಯಾಟ್ಸ್ಮನ್ಗಳಲ್ಲಿ ನಾನೂ ಒಬ್ಬ ಎಂದು ನನಗನಿಸುತ್ತಿದೆ ಎಂದು ಹೇಳಿದ್ದಾರೆ. ಇದರಿಂದ ನಾನೂ ಆದಷ್ಟುಬೇಗನೆ ಪುಟಿದೇಳುತ್ತೇನೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ವಿಕಲ ಚೇತನ ಕ್ರಿಕೆಟಿಗರ ಬಾಕಿ ನಗದು ಪುರಸ್ಕಾರ ನೀಡಿದ ಬಿಸಿಸಿಐ
ಯಾವುದೇ ಕಠಿಣ ಮಾತುಗಳಿಲ್ಲದೆ ಹೇಳುವುದೇನೆಂದರೆ ನನಗೆ ಇನ್ನೂ ಅನಿಸುತ್ತಿದೆ ದೇಶದ ಟಾಪ್ ಆರು ಬ್ಯಾಟ್ಸ್ಮನ್ಗಳಲ್ಲಿ ನಾನೂ ಒಬ್ಬ ಎಂದು ಉಸ್ಮಾನ್ ಖವಾಜ ಸಂದರ್ಶನದ ಸಂರ್ಭದಲ್ಲಿ ಹೇಳಿಕೊಂಡಿದ್ದಾರೆ. 2014ರಲ್ಲಿ ಇಂತದ್ದೇ ಸಂದರ್ಭ ಉಂಟಾದಾಗ ವಾಪಾಸಾದಂತೆಯೇ ಈ ಬಾರಿಯೂ ನಾನು ಸುಲಭವಾಗಿ ಮತ್ತೆ ಅವಕಾಶವನ್ನು ಪಡೆಯುತ್ತೇನೆ ಎಂದು ಹೇಳಿದ್ದಾರೆ ಉಸ್ಮಾನ್ ಖವಾಜ.
ಸ್ಪಿನ್ ಬೌಲಿಂಗ್ ಎದುರಿಸುವ ಬಗ್ಗೆ ಟೀಕೆಗಳು ಕೇಳಿ ಬಂದ ವಿಚಾರಾವಾಗಿ ಉಸ್ಮಾನ್ ಖವಾಜ ಪ್ರತಿಕ್ರಿಯೆ ನೀಡಿದರು. ಇದಕ್ಕೆ ಖವಾಜ "ಕೌಂಟಿ ಕ್ರಿಕೆಟ್ನಲ್ಲಿ ಸ್ಪಿನ್ ಬೌಲಿಂಗ್ ವಿರುದ್ಧ ಅದ್ಭುತ ಆಟಗಳನ್ನು ಆಡಿದ್ದೇನೆ, ಈ ವಿಚಾರದಲ್ಲಿ ಸ್ಟೀವ್ ಸ್ಮಿತ್ ಅತ್ಯುತ್ತಮವಾಗಿದ್ದಾರೆ. ಅವರೋರ್ವ ಅದ್ಭುತ ಆಟಗಾರ, ಆದರೆ ಇಲ್ಲಿ ರನ್ ಗಳಿಸುವುದು ಕೂಡ ಬಹುಮುಖ್ಯ ಎಂದು ಹೇಳಿದ್ದಾರೆ
2032ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯದ ಯೋಜನೆಯಲ್ಲಿ ಭಾರತ
ಕ್ರಿಕೆಟ್ ಆಸ್ಟ್ರೇಲಿಯಾ ಕಳೆದ ಶುಕ್ರವಾರ ತನ್ನ ವಾರ್ಷಿಗ ಗುತ್ತಿಗೆ ಆಟಗಾರರ ಪಟ್ಟಯನ್ನು ಬಿಡುಗಡೆಗೊಳಿಸಿತ್ತು. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಅನುಭವಿ ಬ್ಯಾಟ್ಸ್ಮನ್ ಉಸ್ಮಾನ್ ಖವಾಜ ಅವರನ್ನು ಹೊರಗಿಡಲಾಗಿತ್ತು.