ಕೆಪಿಎಲ್ 2019: ಬೆಂಗಳೂರು vs ಮೈಸೂರು ನಡುವಣ ಉದ್ಘಾಟನಾ ಪಂದ್ಯ ರದ್ದು
ಬೆಂಗಳೂರು, ಆಗಸ್ಟ್ 16: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಸ್ಥಳೀಯ ಪ್ರತಿಭೆಗಳ ಪ್ರೋತ್ಸಾಹ ಸಲುವಾಗಿ ಹುಟ್ಟುಹಾಕಿದ ಕರ್ನಾಟಕ ಪ್ರೀಮಿಯರ್ ಲೀಗ್ನ 8ನೇ ಆವೃತ್ತಿಯ ಟೂರ್ನಿಗೆ ಶುಕ್ರವಾರ ವರ್ಣರಂಜಿತವಾದ ಅದ್ಧೂರಿ ಚಾಲನೆ ದೊರಯಿತು.
ಆದರೆ, ಆತಿಥೇಯ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಮೈಸೂರು ವಾರಿಯರ್ಸ್ ನಡುವಣ ಉದ್ಘಾಟನಾ ಪಂದ್ಯಕ್ಕೆ ಮಳೆ ರಾಯನ ಅವಕೃಪೆ ಎದುರಾಯಿತು. ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಮುನ್ನ ಮೈಸೂರು ವಾರಿಯರ್ಸ್ ವಿರುದ್ಧ ಟಾಸ್ ಸೋತು ಬ್ಯಾಟ್ ಮಾಡುತ್ತಿದ್ದ ಬೆಂಗಳೂರು ಬ್ಲಾಸ್ಟರ್ಸ್ ತಂಡ 13 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿತ್ತು.
ಶಾಸ್ತ್ರಿ ಮರು ಆಯ್ಕೆ ಹಿಂದೆ ನಾಯಕ ಕೊಹ್ಲಿ ಪ್ರಭಾವ ಇಲ್ಲವೆಂದ ಕಪಿಲ್ ದೇವ್
ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡ ಕೆಪಿಎಲ್ ಟೂರ್ನಿಯ ಎಂಟನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಮೈಸೂರು ವಾರಿಯರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ಮುಖಾಮುಖಿಯಾದವು. ಟಾಸ್ ಗೆದ್ದ ಮೈಸೂರು ತಂಡ ಫೀಲ್ಡಿಂಗ್ ಆಯ್ದುಕೊಂಡಿತು .ನಾಯಕ ಅಮಿತ್ ವರ್ಮಾ ಅವರ ಟಾಸ್ ಅಯ್ಕೆಯನ್ನು ಬೌಲರ್ ಗಳು ಉತ್ತಮ ರೀತಿಯಲ್ಲಿ ಎತ್ತಿ ಹಿಡಿದರು.
2021ರ ಟಿ20 ವಿಶ್ವಕಪ್ವರೆಗೆ ಭಾರತ ತಂಡಕ್ಕೆ ರವಿ ಶಾಸ್ತ್ರಿ ಕೋಚ್
ಪಂದ್ಯಕ್ಕೆ ಮುನ್ನ ಮಳೆ ಬಂದಿದ್ದ ಕಾರಣ ಬ್ಯಾಟ್ಸ್ ಮನ್ಗಳಿಗೆ ನಿರೀಕ್ಷಿತ ಮಟ್ಟದಲ್ಲಿ ರನ್ ಗಳಿಸಲಾಗಲಿಲ್ಲ. ಜೆ. ಸುಚಿತ್ 3 ಓವರ್ ಗಳಲ್ಲಿ ಕೇವಲ 13 ರನ್ಗಳಿಗೆ 3 ವಿಕೆಟ್ ಗಳಿಸಿ ಬೆಂಗಳೂರಿನ ರನ್ ಗಳಿಕೆಗೆ ಕಡಿವಾಣ ಹಾಕಿದರು.
ಮೈಸೂರು ವಾರಿಯರ್ಸ್ ಪರ ವೈಶಾಖ್ ವಿಜಯ ಕುಮಾರ್, ಕೆ ಎಸ್ ದೇವಯ್ಯ ಹಾಗೂ ವೆಂಕಟೇಶ್ ತಲಾ ಎರಡು ಓವರ್ ಗಳನ್ನು ಎಸೆದು ರನ್ ನಿಯಂತ್ರಿಸಿದ್ದರು. ಆದರೆ, ನಾಯಕ ಅಮಿತ್ ವರ್ಮಾ 3 ಓವರ್ ಗಳಲ್ಲಿ 29 ರನ್ ನೀಡಿ ದುಬಾರಿ ಎನಿಸಿದರು.
ಸೋಷಿಯಲ್ ಮೀಡಿಯಾದಲ್ಲಿ ನಗ್ನ ಫೋಟೊ ಪ್ರಕಟಿಸಿದ ಇಂಗ್ಲೆಂಡ್ ಆಟಗಾರ್ತಿ!
ಸಂಕ್ಷಿಪ್ತ ಸ್ಕೋರ್
ಬೆಂಗಳೂರು ಬ್ಲಾಸ್ಟರ್ಸ್: 13 ಓವರ್ ಗಳಲ್ಲಿ 88/3 (ರೋಹನ್ ಕದಮ್ 23 , ಬಿ.ಆರ್ ಶರತ್ 13 , ಆರ್. ಜೊನಾಥನ್ 17 , ನಿಕಿನ್ ಜೋಸ್ 28 *; ಜೆ ಸುಚಿತ್ 13 ಕ್ಕೆ 3).