ನನಗೆ ಇದು ಅರ್ಥವೇ ಆಗುತ್ತಿಲ್ಲ!
ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಬರುತ್ತಿರುವ ಟೀಕೆಗಳಿಗೆ ಸುನಿಲ್ ಗವಾಸ್ಕರ್ ಪ್ರತಿಕ್ರೀಯಿಸುತ್ತಾ "ನನಗೆ ಇದು ಅರ್ಥವೇ ಆಗುತ್ತಿಲ್ಲ. ರೋಹಿತ್ ಶರ್ಮಾ ರನ್ ಗಳಿಸದೇ ಇದ್ದಾಗ ಯಾರೂ ಪ್ರಶ್ನೆಯನ್ನೇ ಮಾಡುವುದಿಲ್ಲ. ಇತರ ಆಟಗಾರರ ವಿಚಾರವಾಗಿಯೂ ಇದು ಹಾಗೆಯೇ ಇರುತ್ತದೆ. ಫಾರ್ಮ್ ಎಂಬುದು ತಾತ್ಕಾಲಿಕ ಕ್ಲಾಸ್ ಶಾಶ್ವತ ಎಂಬ ಒಂದು ಮಾತಿದೆ. ಟಿ20 ಮಾದರಿಯಲ್ಲಿ ಆ ರೀತಿಯ ವೇಗದಲ್ಲಿ ಆಡಿದಾಗ ಯಶಸ್ಸೂ ಗಳಿಸಬಹುದು ವಿಪಲವೂ ಆಗಬಹುದು" ಎಂದಿದ್ದಾರೆ ಸುನಿಲ್ ಗವಾಸ್ಕರ್.
ಉತ್ತಮ ಆಯ್ಕೆ ಸಮಿತಿಯಿದೆ
"ನಮ್ಮಲ್ಲಿ ಉತ್ತಮ ಆಯ್ಕೆ ಸಮಿತಿಯಿದೆ. ಈ ವಿಚಾರವಾಗಿ ಅವರು ಯೋಚನೆ ಮಾಡಲಿದ್ದಾರೆ. ಟಿ20 ವಿಶ್ವಕಪ್ಗೆ ತಂಡವನ್ನು ಘೋಷಣೆ ಮಾಡಲು ಸಾಕಷ್ಟ ಸಮಯಾವಕಾಶವಿದ್ದು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಈ ಮಧ್ಯೆ ಏಷ್ಯಾ ಕಪ್ ಟೂರ್ನಿ ಕೂಡ ನಡೆಯಲಿದೆ. ನೀವು ಆಟಗಾರರ ಫಾರ್ಮ್ಅನ್ನು ಕುಡ ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಬೇಕಾಗುತ್ತದೆ. ಆತಂಕಪಡುವ ಸವಯವಲ್ಲ. ಅವರಿಗೆ ಸಾಕಷ್ಟು ಸಮಯವನ್ನು ನೀಡಬೇಕು" ಎಂದಿದ್ದಾರೆ ಸುನಿಲ್ ಗವಾಸ್ಕರ್.
ಏಕದಿನ ಸರಣಿಯಲ್ಲಿ ಫಾರ್ಮ್ಗೆ ಕೊಹ್ಲಿ ಮರಳಬಹುದು ಎಂದ ಗವಾಸ್ಕರ್
ಇನ್ನು ಇದೇ ಸಂದರ್ಭದಲ್ಲಿ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಫಾರ್ಮ್ಗೆ ಮರಳಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. "ಏಕದಿನ ಸರಣಿ ಸೂಕ್ತ ಸಮಯಕ್ಕೆ ಬರುತ್ತಿದೆ. ಅವರ ಸ್ವಾಭಾವಿಕ ಆಟಕ್ಕೆ ಇದು ಸೂಕ್ತವಾಗಿದೆ. ಟೆಸ್ಟ್ ಕ್ರಿಕೆಟ್ನಂತೆ ಕ್ರೀಸ್ನಲ್ಲಿ ನೆಲೆಯೂರಲು ಸಾಕಷ್ಟು ಸಮಯಾವಕಾಶ ದೊರೆಯುತ್ತದೆ" ಎಂದಿದ್ದಾರೆ ಸುನಿಲ್ ಗವಾಸ್ಕರ್. ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ ಗಾಯದ ಕಾರಣಿದಂದಾಗಿ ವಿರಾಟ್ ಕೊಹ್ಲಿ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.
ಭಾರತ ಸ್ಕ್ವಾಡ್ ಹೀಗಿದೆ
ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ , ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್