ಆರಂಭಿಕರನ್ನು ವಂಚಿಸಿದ ವೇಗದ ಎಸೆತ
ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಪೃಥ್ವಿ ಶಾ ಅವರನ್ನು ಶೂನ್ಯಕ್ಕೆ ಬಲಿ ತೆಗೆದುಕೊಂಡರು. ಉತ್ತಮ ಲೆಂತ್ ಎಸೆತವನ್ನು ಬ್ಲಾಕ್ ಮಾಡಲು ಮುಂದಾದ ಶಾ ಅದರಲ್ಲಿ ವಿಫಲರಾದರು. ಬ್ಯಾಟ್ನ ಒಳಭಾಗಕ್ಕೆ ಸವರಿದ ಚೆಂಡು ವಿಕೆಟ್ಗೆ ಬಡಿದಿತ್ತು. ಅದಾದ ಬಳಿಕ 18ನೇ ಓವರ್ನಲ್ಲಿ ಪ್ಯಾಟ್ ಕಮ್ಮಿನ್ಸ್ ಎಸೆದ ತೀಕ್ಷ್ಣವಾದ ಎಸೆತ ಬ್ಯಾಟ್ಅನ್ನು ವಂಚಿಸಿ ವಿಕೆಟ್ಗೆ ಬಡಿದಿತ್ತು.
ಬ್ಯಾಟ್ ಪ್ಯಾಡ್ ಮಧ್ಯೆ ನುಸುಳಿಕೊಂಡು ಸಾಗುತ್ತದೆ
"ನೀವು ಬ್ಯಾಟ್ ಹಾಗೂ ಪ್ಯಾಡ್ನ ನಡುವೆ ಅಷ್ಟು ಅಂತರವನ್ನು ಬಿಡುವುದರ ಜೊತೆಗೆ ತಡವಾಗಿ ಚಲನೆಯನ್ನು ಮಾಡುತ್ತೀರಿ. ಆಗ ಚೆಂಡು ಬ್ಯಾಟ್ನ ಒಳಭಾಗವನ್ನು ಸವರಿಕೊಂಡು ಹೋಗುತ್ತದೆ ಅಥವಾ ಬ್ಯಾಟ್ ಹಾಗೂ ಪ್ಯಾಡ್ನ ಮಧ್ಯೆ ನುಸುಳಿಕೊಂಡು ಹೋಗುತ್ತದೆ" ಎಂದು ಗವಾಸ್ಕರ್ 7 ಕ್ರಿಕೆಟ್ನಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
ಆತ್ಮವಿಶ್ವಾಸ ಹೆಚ್ಚಿದ ಬಳಿಕ ಎಂದಿನ ಹೊಡೆತ
"ಇನ್ನಿಂಗ್ಸ್ನ ಆರಂಭದಲ್ಲಿ ನೀವು ಬ್ಯಾಟ್ ಹಾಗೂ ಪ್ಯಾಡ್ ಅತ್ಯಂತ ಸಮೀಪದಲ್ಲಿರುವಂತೆ ನೋಡಿಕೊಳ್ಳಬೇಕು. ಅಂದರೆ ಆರಂಭದಲ್ಲಿ ನಿಮ್ಮ ಬ್ಯಾಟ್ನ ವೇಗ ಕಡಿಮೆಯಿರಬೇಕು. ಹೆಚ್ಚು ಎಸೆತ ಎದುರಿಸಿದಂತೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾದಾಗ ನಿಮ್ಮ ಎಂದಿದ ಹೊಡೆತಗಳನ್ನು ನೀವು ಬಾರಿಸಬಹುದು. ಆದರೆ ಆರಂಭದಲ್ಲಿ ನೀವಿನ್ನೂ ಲಯಕ್ಕೆ ಮರಳಬೇಕಿದ್ದರೆ ನಿಮ್ಮ ಬ್ಯಾಟ್ನ ವೇಗವನ್ನು ಕಡಿಮೆ ಮಾಡಬೇಕು" ಎಂದು ಗವಾಸ್ಕರ್ ಹೇಳಿಕೆ ನೀಡಿದ್ದಾರೆ.
ಮಯಾಂಕ್ ಬಗ್ಗೆಯೂ ಟೀಕೆ
ಇನ್ನು ಮಯಾಂಕ್ ಅಗರ್ವಾಲ್ ವಿಕೆಟ್ ಒಪ್ಪಿಸಿದ ಬಗ್ಗೆಯೂ ಗವಾಸ್ಕರ್ ಪ್ರತಿಕ್ರಿಯಿಸಿದರು. "ಮಯಾಂಕ್ ಅಗರ್ವಾಲ್ ವಿಕೆಟ್ ಒಪ್ಪಿಸಿದ ಎಸೆತಕ್ಕೂ ನೀವು ಗಮನಿಸಬಹುದು. ಆ ಎಸೆತದಲ್ಲಿ ಬ್ಯಾಟ್ ಹಾಗೂ ಪ್ಯಾಡ್ ಸಮೀಪದಲ್ಲಿದ್ದಂತೆ ತೋರುತ್ತದೆ. ಆದರೆ ಅದು ಸಮೀಪದಲ್ಲಿಲ್ಲ. ಅಲ್ಲಿದ್ದ ದೊಡ್ಡ ಅಂತರದಿಮದಾಗಿ ಬಾಲ್ ನುಸುಳಿಕೊಂಡು ಹೋಗಿದೆ. ಅಲ್ಲಿ ಅಂತರದಲ್ಲಿ ಒಂದು ಟ್ರಕ್ ಕೂಡ ಸಾಗಬಹುದು. ಭಾರತೀಯರು ಇಲ್ಲಿಯೇ ದೊಡ್ಡ ತಪ್ಪುಗಳನ್ನು ಎದುರಿಸುತ್ತಿದ್ದಾರೆ" ಎಂದು ಗವಾಸ್ಕರ್ ಹೇಳಿದ್ದಾರೆ.