ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ಭರ್ಜರಿ ಗೆಲುವನ್ನು ಸಾಧಿಸಿದೆ. ಟೂರ್ನಿಯ ಆರಂಭದಲ್ಲಿ ರನ್ ಮಳೆಗೆ ಸಾಕ್ಷಿಯಾಗಿದ್ದ ಶಾರ್ಜಾ ಕ್ರೀಡಾಂಗಣದಲ್ಲಿ ಅದ್ಭುತ ಬೌಲಿಂಗ್ ನಿರ್ವಹಣೆ ಮೂಲಕ ಕೇವಲ 120 ರನ್ಗಳಿಗೆ ಕಟ್ಟಿ ಹಾಕಲು ಹೈದರಾಬಾದ್ ಬೌಲರ್ಗಳು ಯಶಸ್ವಿಯಾಗಿದ್ದರು.
ಹೈದರಾಬಾದ್ ತಂಡದ ಬೌಲರ್ಗಳ ಈ ಪ್ರದರ್ಶನದ ಬಗ್ಗೆ ನಾಯಕ ವಾರ್ನರ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಶಾರ್ಜಾ ಕ್ರೀಡಾಂಗನದಲ್ಲಿ ಹೆಚ್ಚಿನ ಇಬ್ಬನಿಯನ್ನು ನಾವು ಮೊದಲೇ ನಿರೀಕ್ಷಿಸಿದ್ದೆವು. ಇದಕ್ಕೆ ಪೂರಕವಾಗಿ ಬೌಲರ್ಗಳು ತಮ್ಮ ಜವಾಬ್ಧಾರಿಯನ್ನು ಅಂದುಕೊಂಡಂತೆಯೇ ನಿರ್ವಹಿಸಿದ್ದಾರೆ ಎಂದು ವಾರ್ನರ್ ಹೇಳಿದ್ದಾರೆ.
ವಿಜಯ್ ಶಂಕರ್ ಅವರನ್ನು ಇಂದಿನ ಪಮದ್ಯದಿಂದ ಕಳೆದುಕೊಂಡಿದ್ದು ನಮಗೆ ನಷ್ಟವಾಗಿತ್ತು. ಆದರೆ ನಾವು ಅಗ್ರ ಕ್ರಮಾಂಕದಲ್ಲಿ ನಿರ್ವಹಿಸಲು ಯಶಸ್ವಿಯಾದೆವು. ಅದರಲ್ಲೂ ಬೌಲಿಂಗ್ನಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿದೆವು. ಅದರ ಸಂಪೂರ್ಣ ಕ್ರೆಡಿಡ್ ಬೌಲರ್ಗಳಿಗೆ ಸಲ್ಲಬೇಕು. ಇಲ್ಲಿ ಹೆಚ್ಚಿನ ಇಬ್ಬನಿಯಿದ್ದದ್ದು ಆಶ್ವರ್ಯವನ್ನುಂಟುಮಾಡಲಿಲ್ಲ ಎಂದಿದ್ದಾರೆ ವಾರ್ನರ್.
ಜೇಸನ್ ಹೋಲ್ಡರ್ ಅದ್ಭುತವಾದ ಆಲ್ರೌಂಡರ್. ಆತನಂತಾ ವ್ಯಕ್ತಿಗೆ ಬೌನ್ಸರ್ ಎಸೆಯುವುದು ಸುಲಭವಲ್ಲ. ಅವರ ಸ್ಥಿರತೆ ಅದ್ಭುತವಾಗಿದೆ. ನಾವು ಇಂದಿನ ಪಂದ್ಯದಲ್ಲಿ ಹಾಗೂ ಮುಂಬರುವ ಪಂದ್ಯದಲ್ಲೇ ಗೆಲ್ಲಲೇಬೇಕಾಗಿದೆ ಎಂದು ನಮಗೆ ತಿಳಿದಿತ್ತು ಎಂದು ವಾರ್ನರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾ