ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್ ಅವರನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆಗೊಳಪಟ್ಟಿದೆ.
|
ಕಾಮೆಂಟೆಟರ್ ಹರ್ಷಭೋಗ್ಲೆ ಪ್ರತಿಕ್ರಿಯೆ
ಕ್ರಿಕೆಟ್ ಕಾಮೆಂಟೆಟರ್ ಹರ್ಷಭೋಗ್ಲೆ ಪ್ರತಿಕ್ರಿಯೆ ನೀಡಿ, ಕ್ರಿಕೆಟ್ ನಲ್ಲಿ ಇಂಥದ್ದೊಂದು ಘಟನೆ ಬಗ್ಗೆ ನಾನು ಕಂಡಿಲ್ಲ, ಇದೊಂದು ಕ್ರಾಂತಿಕಾರಿ ಬದಲಾವಣೆ, ಸುನಾಮಿಗೆ ಮುನ್ನ ಸಮುದ್ರ ಶಾಂತವಾಗಿರುವಂಥ ಪರಿಸ್ಥಿತಿ ಇದೆ. ಕಾದು ನೋಡೋಣ ಎಂದಿದ್ದಾರೆ.
|
ಕ್ರಿಕೆಟ್ ವಿಶ್ಲೇಷಕ ಅಯಾಜ್ ಅವರ ವಿಶ್ಲೇಷಣೆ
ಅನುರಾಗ್ ಠಾಕೂರ್ ಹಾಗೂ ಅಜಯ್ ಶಿರ್ಕೆ ಇಬ್ಬರನ್ನು ಅಮಾನತುಗೊಳಿಸಿರುವುದು ಬಹುದೊಡ್ಡ ನಿರ್ಣಯ ಎಂದಿದ್ದಾರೆ.
|
ವರ್ಷಾರಂಭದಲ್ಲಿ ಇದು ಶುಭ ಸುದ್ದಿಯಲ್ಲ
ವರ್ಷಾರಂಭದಲ್ಲಿ ಇದು ಶುಭ ಸುದ್ದಿಯಲ್ಲ, ಬಿಸಿಸಿಐ ಕಥೆ ಏನಾಗುವುದೋ ನೋಡೋಣ.
|
ರಾಹುಲ್ ಕನ್ವಲ್ ಅವರ ಪ್ರತಿಕ್ರಿಯೆ
ಬಿಸಿಸಿಐನ ಪ್ರಮುಖ ಅಧಿಕಾರಿಗಳ ಅಮಾನತು ಅಚ್ಚರಿಯ ಸುದ್ದಿಯಾಗಿದ್ದು, ಈ ಬಗ್ಗೆ ಮೂರನೇ ಅಂಪೈರ್ ರಿವ್ಯೂ ಇಲ್ವ ಎಂದು ಚಟಾಕಿ ಹಾರಿಸಿದ್ದಾರೆ.
|
ಸ್ಪಾಟ್ ಫಿಕ್ಸಿಂಗ್ ಕೇಸ್ ಹೋಗಿ ಏನೋ ಆಯ್ತು
ಸ್ಪಾಟ್ ಫಿಕ್ಸಿಂಗ್ ಕೇಸ್ ಹೋಗಿ ಏನೋ ಆಯ್ತು, ಎನ್ ಶ್ರೀನಿವಾಸನ್ ನಂತರ ಅನುರಾಗ್ ಠಾಕೂರ್ ಸ್ಥಾನ ಹೋಯ್ತು
|
ಬಾಕಿ ಉಳಿದ ಕೇಸುಗಳಿಗೆ ಜಡ್ಜ್ ನೇಮಿಸಲಿ
ಬಾಕಿ ಉಳಿದ ಕೇಸುಗಳಿಗೆ ಜಡ್ಜ್ ನೇಮಿಸಲಿ, ಅದನ್ನು ಬಿಟ್ಟು ಕ್ರಿಕೆಟ್ ನಿಯಂತ್ರಣ ಮಾಡಲು ಮುಂದಾಗಿರುವುದು ಎಷ್ಟು ಸರಿ?
|
ಅಚ್ಚರಿ ವ್ಯಕ್ತಪಡಿಸಿದ ಅಭಿಮಾನಿಗಳು
ಅಚ್ಚರಿ ವ್ಯಕ್ತಪಡಿಸಿದ ಅಭಿಮಾನಿಗಳು, ಕೋರ್ಟಿನಿಂದ ಎಲ್ಲವನ್ನು ನಿಭಾಯಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.