ನವದೆಹಲಿ: ವೈಯಕ್ತಿಕ ಕಾರಣ ನೀಡಿ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹಿಂದೆ ಸರಿದಿರುವುದು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಬೇಸರ ತಂದಿದೆ. ಐಪಿಎಲ್ ಆರಂಭಕ್ಕೆ ಇನ್ನು ಎರಡು ವಾರಗಳಷ್ಟೇ ಬಾಕಿ ಉಳಿದಿದೆ. ಈ ನಡುವ ಸುರೇಶ್ ರೈನಾ ಮತ್ತೆ ವಾಪಸ್ಸಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಐಪಿಎಲ್ ವೀಕ್ಷಿಸಬೇಕಾದ್ರೆ ನೀವು ಡಿಸ್ನಿ+ಹಾಟ್ಸ್ಟಾರ್ ಸಬ್ಸ್ಕ್ರೈಬ್ ಮಾಡಿರಬೇಕು!
ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಐಪಿಎಲ್ನಿಂದ ಸಿಎಸ್ಕೆ ಆಲ್ ರೌಂಡರ್ ಸುರೇಶ್ ರೈನಾ ಮತ್ತು ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಹಿಂದೆ ಸರಿದಿದ್ದರು. ಸಿಎಸ್ಕೆ ಈಗ ಬದಲಿ ಆಟಗಾರರಿಗೆ ಯೋಚಿಸುತ್ತಿರುವಾಗಲೇ, ರೈನಾ ಮತ್ತೆ ವಾಪಸ್ಸಾಗಲಿದ್ದಾರೆ ಎನ್ನಲಾಗುತ್ತಿದೆ.
ಆಸ್ಟ್ರೇಲಿಯಾ ಪ್ರವಾಸಕ್ಕೆ 23-25 ಮಂದಿಯ ಬಲಿಷ್ಠ ಭಾರತ ತಂಡದ ನಿರೀಕ್ಷೆ
ಭಾರತದ ಮಾಜಿ ಬ್ಯಾಟ್ಸ್ಮನ್ ದೀಪ್ದಾಸ್ ಗುಪ್ತಾ ರೈನಾ ಬಗ್ಗೆ ಮಾತನಾಡಿದ್ದಾರೆ. ಎಡಗೈ ಬ್ಯಾಟ್ಸ್ಮನ್ ರೈನಾ ವಾಪಸ್ಸಾಗುತ್ತಾರೆ. ಟೂರ್ನಿಯ ಆರಂಭದ ಕೆಲ ಪಂದ್ಯಗಳನ್ನು ಸುರೇಶ್ ಮಿಸ್ ಮಾಡಿಕೊಳ್ಳಬಹುದು. ಆದರೆ ಮತ್ತೆ ವಾಪಸ್ಸಾಗುತ್ತಾರೆ ಎಂದಿದ್ದಾರೆ.
ಖಾಲಿ ಮೈದಾನವೇ ಚಂದ ಎಂದ ವಾರ್ನರ್: ಹಿಂದಿದೆ ಸ್ವಾರಸ್ಯಕರ ಕಾರಣ!
ಇಎಸ್ಪಿಎನ್ಕ್ರಿಕ್ಇನ್ಫೋ ಜೊತೆ ಮಾತನಾಡಿದ ದಾಸ್ ಗುಪ್ತಾ, 'ನನಗನ್ನಿಸುವಂತೆ ಸುರೇಶ್ ರೈನಾ ವಾಪಸ್ಸಾಗಿ ಐಪಿಎಲ್ ನಲ್ಲಿ ಆಡುತ್ತಾರೆ. ಕ್ವಾರಂಟೈನ್ ನಿಯಮದಿಂದ ಬಹುಶಃ ಅವರು ಮೊದಲ ಕೆಲ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಬಹುದು. ಆದರೆ ಬರೋದಂತೂ ಬರುತ್ತಾರೆ ಅಂತ ನನಗನ್ನಿಸುತ್ತಿದೆ,' ಎಂದರು.