ಮಾವನ ಸಾವಿನ ಬಳಿಕ ಸೋದರ ಸಂಬಂಧಿ ಸಾವು!
ಆಗಂತುಕರು ಸುರೇಶ್ ರೈನಾ ಅವರ ಪಂಜಾಬ್ನ ಮಾವನ ಮನೆಗೆ ನುಗ್ಗಿ ಮನೆಯಲ್ಲಿ ಮಲಗಿದ್ದ ಕುಟುಂಬಸ್ಥರ ಮೇಲೆ ಭೀಕರ ದಾಳಿಯನ್ನು ನಡೆಸಿದ್ದರು. ಈ ಘಟನೆಯಲ್ಲಿ ಸುರೇಶ್ ರೈನಾ ಮಾವ ಅಂದೇ ಮೃತಪಟ್ಟಿದ್ದರು. ಈಗ ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂದಿದ್ದ ಇನ್ನೊಬ್ಬ ಸೋದರ ಸಂಬಂಧಿ ಮೃತಪಟ್ಟಿರುವುದನ್ನು ಸುರೇಶ್ ರೈನಾ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಮೊದಲ ಬಾರಿಗೆ ರೈನಾ ಪ್ರತಿಕ್ರಿಯೆ
ದುರ್ಘನೆಯ ನಂತರ ಸುರೇಶ್ ರೈನಾ ತವರಿಗೆ ಮರಳುವ ನಿರ್ಧಾರವನ್ನು ಮಾಡಿದ್ದರು. ಹೀಗಾಗಿ ಹಠಾತ್ ಆಗಿ ಸುರೇಶ್ ರೈನಾ ತವರಿಗೆ ಮರಳಿದ್ದರು. ಆದರೆ ಘಟನೆಯ ಬಗ್ಗೆ ಯಾವುದೇ ಸಂಗತಿಯನ್ನು ಹಂಚಿಕೊಂಡಿರಲಿಲ್ಲ. ಆದರೆ ಇದೀಗ ಸುರೇಶ್ ರೈನಾ ಕುಟುಂಬದಲ್ಲಾಗಿರುವ ದುರಂತದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ಭಯಾನಕತೆಯನ್ನು ಮೀರಿದ ದುರ್ಘಟನೆ
ಟ್ವೀಟ್ನಲ್ಲಿ ರೈನಾ "ನನ್ನ ಕುಟುಂಬಕ್ಕೆ ಏನಾಯಿತು ಎಂಬುದು ಪಂಜಾಬ್ ಭಯಾನಕತೆಯನ್ನು ಮೀರಿದೆ. ನನ್ನ ಅಂಕಲ್ನನ್ನು ಕೊಲ್ಲಲಾಯಿತು. ನನ್ನ ಅತ್ತೆ ಮತ್ತು ನನ್ನ ಸೋದರಸಂಬಂಧಿಗಳಿಗೆ ತೀವ್ರವಾದ ಗಾಯಗಳಾದ್ದು, ದುರದೃಷ್ಟವಶಾತ್ ನನ್ನ ಸೋದರಸಂಬಂಧಿ ಕೂಡ ಕಳೆದ ರಾತ್ರಿ ಜೀವನ್ಮರಣದ ಹೋರಾಟದ ನಂತರ ನಿಧನರಾಗಿದ್ದಾರೆ. ನನ್ನ ಚಿಕ್ಕಮ್ಮನ ಸ್ಥಿತಿಯೂ ಚಿಂತಾಜನಕವಾಗಿದ್ದು ಜೀವರಕ್ಷಕಗಳಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ" ಎಂದು ತಿಳಿಸಿದ್ದಾರೆ.
ಪಂಜಾಬ್ ಪೊಲೀಸರಲ್ಲಿ ರೈನಾ ಮನವಿ
"ಈ ಕ್ಷಣದವರೆಗೂ ಆ ರಾತ್ರಿ ಅಂದು ನಿಖರವಾಗಿ ಏನಾಯಿತು, ಯಾರು ಇದಕ್ಕೆ ಕಾರಣ ಎಂದು ತಿಳಿದು ಬಂದಿಲ್ಲ. ಪಂಜಾಬ್ ಪೋಲೀಸರಿಗೆ ನಾನು ಈ ಪ್ರಕರಣದ ಬಗ್ಗೆ ಗಮನ ನೀಡಲು ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ಘೋರ ಕೃತ್ಯವನ್ನು ಯಾರು ಮಾಡಿದ್ದಾರೆಂದು ತಿಳಿಯಲು ನಾವು ತಿಳಿಯಬೇಕಿದೆ. ಆ ದುಷ್ಕರ್ಮಿಗಳಿಂದ ಹೆಚ್ಚಿನ ಅಪರಾಧ ನಡೆಯಲು ಬಿಡಬಾರದು" ಎಂದು ಮತ್ತೊಂದಿ ಟ್ವೀಟ್ ಮಾಡಿದ್ದಾರೆ ಸುರೇಶ್ ರೈನಾ