ತಿರುವನಂತಪುರಂ: ಮ್ಯಾಚ್ ಫಿಕ್ಸಿಂಗ್ ಆರೋಪದಡಿಯಲ್ಲಿ ಸುಮಾರು 7 ವರ್ಷಗಳ ಕಾಲ ನಿಷೇಧಿಸಲ್ಪಟ್ಟು ಕ್ರಿಕೆಟ್ನಿಂದ ದೂರ ಉಳಿದಿದ್ದ ಎಸ್ ಶ್ರೀಶಾಂತ್ ಮತ್ತು ಕ್ರಿಕೆಟ್ಗೆ ಮರಳಿದ್ದಾರೆ. ಮುಂಬರಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯಲ್ಲಿ ಶ್ರೀಶಾಂತ್ ಅವರು ಕೇರಳ ತಂಡದ ಪರ ಆಡಲಿದ್ದಾರೆ.
3ನೇ ಟೆಸ್ಟ್ಗೆ ಆಸೀಸ್ ತಂಡ ಪ್ರಕಟ, ಭಾರತದಲ್ಲೂ ಪ್ರಮುಖ ಬದಲಾವಣೆ!
ಶ್ರೀಶಾಂತ್ ಅವರು ಕೇರಳ ಕ್ರಿಕೆಟ್ ತಂಡದಲ್ಲಿ ಆಡೋದು ಪಕ್ಕಾ ಆಗಿದೆ. ಹೀಗಾಗಿ ಕೇರಳ ಅಭ್ಯಾಸ ತಂಡದಲ್ಲಿ ಶ್ರೀಶಾಂತ್ ಕೂಡ ಸೇರಿಕೊಂಡಿದ್ದಾರೆ. ಡಿಸೆಂಬರ್ 30ರ ಬುಧವಾರ ಶ್ರೀಶಾಂತ್ ಅವರನ್ನು ಕೇರಳ ತಂಡಕ್ಕೆ ಕ್ಯಾಪ್ ನೀಡಿ ಬರ ಮಾಡಿಕೊಳ್ಳಲಾಗಿದೆ. ಹೀಗಾಗಿ ಶ್ರೀಶಾಂತ್ಗೆ 2020ರ ವರ್ಷ ಅವಿಸ್ಮರಣೀಯವೆನಿಸಲಿದೆ.
ಯುವರಾಜ್ ಸಿಂಗ್ ಕಮ್ಬ್ಯಾಕ್ ಆಲೋಚನೆಗೆ ತಣ್ಣೀರೆರಚಿದ ಬಿಸಿಸಿಐ!
2013ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಶ್ರೀಶಾಂತ್ ಆಜೀವ ನಿಷೇಧಕ್ಕೀಡಾಗಿದ್ದರು. ಆದರೆ ಆ ಬಳಿಕ ಮತ್ತೆ ವಿಚಾರಣೆ ವೇಳೆ ಶ್ರೀಶಾಂತ್ ನಿಷೇಧ ಕಡಿತಗೊಳಿಸಲಾಗಿತ್ತು. ಕಳೆದ ಸೆಪ್ಟೆಂಬರ್ನಲ್ಲಿ ಶ್ರೀಶಾಂತ್ ಮೇಲಿನ ನಿಷೇಧ ಕೊನೆಗೊಂಡಿತ್ತು.
Sreesanth is back after 7 long years into cricket - he has handed Kerala cap and will be playing in Syed Mushtaq Ali - Inspiration for many especially making a comeback at the age of 37. pic.twitter.com/8GZBsyvPpf
— Johns. (@CricCrazyJohns) December 30, 2020
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಜನವರಿ 10ಕ್ಕೆ ಆರಂಭಗೊಂಡು ಜನವರಿ 31ರ ವರೆಗೆ ನಡೆಯಲಿದೆ. ಕೇರಳ ತಂಡದಲ್ಲಿ ಶ್ರೀಶಾಂತ್ ಅವರು ಸಂಜು ಸ್ಯಾಮ್ಸನ್ ನಂತ ಆಟಗಾರರ ಜೊತೆ ಮೈದಾನಕ್ಕಿಳಿಯಲಿದ್ದಾರೆ. 37ರ ಹರೆಯದ ಶ್ರೀಶಾಂತ್ 2023ರ ವಿಶ್ವಕಪ್ನಲ್ಲಿ ಭಾಗವಹಿಸೋದೇ ನನ್ನ ಅಂತಿಮ ಗುರಿ ಎಂದಿದ್ದಾರೆ.