ವಿಶಾಖಪಟ್ಟಣ, ನವೆಂಬರ್ 11: ದೇವದತ್ ಪಡಿಕ್ಕಲ್ ಸ್ಫೋಟಕ ಶತಕದ ಬೆಂಬಲದೊಂದಿಗೆ ವಿಶಾಖಪಟ್ಟಣದ ಡಾ. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ರೌಂಡ್ 3, ಗ್ರೂಪ್ 'ಎ', ಆಂಧ್ರ vs ಕರ್ನಾಟಕ ಪಂದ್ಯದಲ್ಲಿ, ಕರ್ನಾಟಕ 5 ವಿಕೆಟ್ ಗೆಲುವನ್ನಾಚರಿಸಿದೆ.
ವೇಗಿ ಜಸ್ಪ್ರೀತ್ ಬೂಮ್ರಾ ಹಿಂದಿಕ್ಕಿ ದಾಖಲೆ ಬರೆದ ಯುಜುವೇಂದ್ರ ಚಾಹಲ್!
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆಂದ್ರ ತಂಡ, ಅಶ್ವಿನ್ ಹೆಬ್ಬಾರ್ 61, ಪ್ರಶಾಂತ್ ಕುಮಾರ್ 79, ರಿರಿ ಭುಯಿ 21 ರನ್ನೊಂದಿಗೆ 20 ಓವರ್ಗೆ 5 ವಿಕೆಟ್ ಕಳೆದು 184 ರನ್ ಮಾಡಿತು. ಗುರಿ ಬೆನ್ನಟ್ಟಿದ ಕರ್ನಾಟಕ ತಂಡದಿಂದ ಕೃಷ್ಣಪ್ಪ ಗೌತಮ್ 35, ದೇವದತ್ ಪಡಿಕ್ಕಲ್ 122 (60 ಎಸೆತ) ರನ್ ಸೇರಿಸಿದರು.
ಟೀಮ್ ಇಂಡಿಯಾ ಪರ ಟಿ20ಐ ಇತಿಹಾಸ ನಿರ್ಮಿಸಿದ ವೇಗಿ ದೀಪಕ್ ಚಹಾರ್!
ರಾಜ್ಯ ತಂಡ 18.5 ಓವರ್ಗೆ 5 ವಿಕೆಟ್ ನಷ್ಟದಲ್ಲಿ 189 ರನ್ ಮಾಡಿತು. ಆಂಧ್ರ ಇನ್ನಿಂಗ್ಸ್ನಲ್ಲಿ ಕರ್ನಾಟಕದ ಅಭಿಮನ್ಯು ಮಿಥುನ್ 1, ವಿ ಕೌಶಿಕ್ 3, ಶ್ರೇಯಸ್ ಗೋಪಾಲ್ 1 ವಿಕೆಟ್ ಪಡೆದರೆ, ಕರ್ನಾಟಕದ ಇನ್ನಿಂಗ್ಸ್ನಲ್ಲಿ ಆಂಧ್ರದ ನರೇನ್ ರೆಡ್ಡಿ 1, ಚೀಪುರಪಲ್ಲಿ ಸ್ಟೀಫನ್ 2, ಕೆವಿ ಸಸಿಕಾಂತ್ 1 ವಿಕೆಟ್ ಪಡೆದರು.
ಸಚಿನ್ ತೆಂಡೂಲ್ಕರ್ 30 ವರ್ಷಗಳ ದಾಖಲೆ ಮುರಿದ 15ರ ಹರೆಯದ ಶೆಫಾಲಿ!
ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಾಯಿಂಟ್ ಟೇಬಲ್ನಲ್ಲಿ ಗ್ರೂಪ್ 'ಎ'ಯಲ್ಲಿರುವ ಕರ್ನಾಟಕ ಕರ್ನಾಟಕ ಸದ್ಯ 3ನೇ ಸ್ಥಾನದಲ್ಲಿದೆ. ಆಡಿರುವ 3ರಲ್ಲಿ 2 ಗೆಲುವು, 1 ಸೋಲು ಕಂಡಿರುವ ಕರ್ನಾಟಕದ ಖಾತೆಯಲ್ಲಿ 8 ಪಾಯಿಂಟ್ ಇದೆ. ಈ ಗ್ರೂಪ್ನಲ್ಲಿ ಸರ್ವೀಸಸ್ ಮತ್ತು ಗೋವಾ ಮೊದಲೆರಡು ಸ್ಥಾನಗಳಲ್ಲಿವೆ.