ಕೋಲ್ಕತ್ತಾ, ನವೆಂಬರ್ 8: ಜಾಧವ್ಪುರ್ ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ಶುಕ್ರವಾರ (ನವೆಂಬರ್ 8) ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ಕರ್ನಾಟಕ vs ಉತ್ತರಖಂಡ ನಡುವಿನ ಮೊದಲ ಸುತ್ತಿನ-ಗ್ರೂಪ್ 'ಎ' ಪಂದ್ಯದಲ್ಲಿ ರಾಜ್ಯ ತಂಡ 9 ವಿಕೆಟ್ಗಳ ಸುಲಭ ಗೆಲುವನ್ನಾಚರಿಸಿದೆ.
ಈ ದಿನಗಳ 'ಸಿಕ್ಸರ್ ಕಿಂಗ್' ರೋಹಿತ್ ಶರ್ಮಾ ಎನ್ನುತ್ತಿವೆ ಅಂಕಿ-ಅಂಶಗಳು!
ಆರಂಭಿಕ ಆಟಗಾರ ರೋಹನ್ ಕದಮ್ ಮತ್ತು ದೇವದತ್ ಪಡಿಕ್ಕಲ್ ಅಜೇಯ ಅರ್ಧಶತಕದಾಟ, ಅಭಿಮನ್ಯು ಮಿಥುನ್-ಶ್ರೇಯಸ್ ಗೋಪಾಲ್ ಬೌಲಿಂಗ್ ಬೆಂಬಲದೊಂದಿಗೆ ಕರ್ನಾಟಕದ ತಂಡ ಎದುರಾಳಿ ನೀಡಿದ್ದ 133 ಸುಲಭ ರನ್ ಗುರಿಯನ್ನು 16ನೇ ಓವರ್ನಲ್ಲಿ ತಲುಪಿತು.
ಏಕದಿನ ಕ್ರಿಕೆಟ್ ನಲ್ಲಿ ತ್ವರಿತವಾಗಿ 2000 ರನ್ ದಾಖಲಿಸಿದ ಸ್ಮೃತಿ
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಉತ್ತರಖಂಡ ತಂಡ, ನಾಯಕ ತನ್ಮಯಿ ಶ್ರೀವತ್ಸವ್ 39, ಸೌರಭ್ ರಾವತ್ 26, ಅವನೀಶ್ ಸುಧ 15, ದಿಕ್ಷಾಂಶು ನೇಗಿ 12, ಮಯಾಂಕ್ ಮಿಶ್ರಾ 14 ರನ್ ಕೊಡುಗೆಯೊಂದಿಗೆ 20 ಓವರ್ಗೆ 6 ವಿಕೆಟ್ ನಷ್ಟದಲ್ಲಿ 132 ರನ್ ಮಾಡಿತು. ಈ ಇನ್ನಿಂಗ್ಸ್ನಲ್ಲಿ ರಾಜ್ಯ ತಂಡದ ಜಗದೀಶ್ ಸುಚಿತ್ 1, ಅಭಿಮನ್ಯು ಮಿಥುನ್ 2, ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದರು.
ತಂಗಲು ಜಾಗವಿಲ್ಲದೆ ಪರದಾಡಿದ ಎಂಟಡಿ ಎತ್ತರದ ಅಫ್ಘಾನ್ ಕ್ರಿಕೆಟ್ ಅಭಿಮಾನಿ!
ಗುರಿ ಬೆನ್ನತ್ತಿದ್ದ ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರ ರೋಹನ್ ಕದಮ್ ಅವರ ಅರ್ಧ ಶತಕದ (67 ರನ್, 55 ಎಸೆತ) ನೆರವು ದೊರೆಯಿತು. ಇನ್ನು ರವಿಕುಮಾರ್ ಸಮರ್ಥ್ 7, ದೇವದತ್ ಪಡಿಕ್ಕಲ್ 53 (33 ಎಸೆತ) ರನ್ನೊಂದಿಗೆ 15.4 ಓವರ್ಗೆ 1 ವಿಕೆಟ್ ನಷ್ಟದಲ್ಲಿ 133 ರನ್ ಮಾಡಿತು.